ಬರೀ ಎರಡು ವರ್ಷ ಕಾಯಬೇಕು ಪ್ಲೀಸ್‌…


Team Udayavani, Oct 30, 2018, 6:00 AM IST

v-3.jpg

ನನ್ನ ಹೆಸರು ಕಂಡ ಕೂಡಲೇ, ಪತ್ರವನ್ನು ಸಂಪೂರ್ಣ ಓದದೆ ಹರಿದು ಹಾಕಿ ಬಿಡುತ್ತೀಯೇನೋ; ಹಾಗೆ ಮಾಡಬೇಡ. ನನ್ನ ಹೃದಯದ ಭಾವನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವೆ ಇಲ್ಲಿ.

ಪತ್ರದ ಆರಂಭದಲ್ಲೇ ವಿನಮ್ರತೆಯಿಂದ ಕೇಳುತ್ತಿರುವೆ, ಕ್ಷಮಿಸಿಬಿಡು ಗೆಳತಿ. ನನ್ನ ಹೆಸರು ಕಂಡ ಕೂಡಲೇ, ಪತ್ರವನ್ನು ಸಂಪೂರ್ಣ ಓದದೆ ಹರಿದು ಹಾಕಿಬಿಡುತ್ತೀಯೇನೋ; ಹಾಗೆ ಮಾಡಬೇಡ. ನನ್ನ ಹೃದಯದ ಭಾವನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವೆ ಇಲ್ಲಿ. ನಿನ್ನ ಅನುಮತಿಯಿಲ್ಲದೆ ನಾನು, ನಿನ್ನ ಹೃದಯವೆಂಬ ಪವಿತ್ರವಾದ ಗರ್ಭಗುಡಿಯಲ್ಲಿ ಲಜ್ಜೆ ಬಿಟ್ಟು ಹೆಜ್ಜೆಯಿಟ್ಟವನು. ಅದಕ್ಕೊಪ್ಪಿ ಮದುವೆಯಾಗೋಣ ಅಂದ ನಿನ್ನ ನಿರ್ಧಾರಕ್ಕೆ ತಣ್ಣೀರೆರಚಿ, ಅತಿಯಾಗಿ ಪ್ರೀತಿಸುತ್ತಿದ್ದ ಜೀವವನ್ನು, ಅಷ್ಟೇ ದ್ವೇಷಿಸುವಂತೆ ಮಾಡಿದ ದುಷ್ಟ. ನನಗೀಗ ಅತಿಯಾದ ಪಾಪ ಪ್ರಜ್ಞೆ ಕಾಡುತ್ತಿದೆ.

ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ ಕೇಳು. ಅದನ್ನು ನೀನೂ ಒಪ್ಪುತ್ತೀಯಾ ಅನ್ನೋ ನಂಬಿಕೆ ನನಗಿದೆ. ಓದುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಅಂತ ಕೂತರೆ ಭವಿಷ್ಯ ಹಾಳಾಗಿ ಬಿಡುತ್ತದೆ. ಅಂದು ನಿನ್ನ ಹಿಂದೆ ಬಿದ್ದು, ನನ್ನನ್ನು ಪ್ರೀತಿಸು ಅಂತ ಅಲೆದಿದ್ದು ನಿಜ. ನೀನೇ ನನ್ನ ಬಾಳಸಂಗಾತಿ ಆಗಬೇಕು ಅನ್ನೋದು ನನ್ನ ಮನದ ಇಂಗಿತ. ಅದು ಈಡೇರಬೇಕಂದ್ರೆ; ನಮ್ಮ ಮನೆಯವರು, ನಿಮ್ಮ ಮನೆಯವರು ಒಪ್ಪಿ, ನಮ್ಮಿಬ್ಬರನ್ನು ಆಶೀರ್ವದಿಸಬೇಕು. ಅದಕ್ಕೆಲ್ಲಾ ಸಮಯ ಬೇಕಲ್ವಾ? ನನಗೂ ಒಳ್ಳೆ ಉದ್ಯೋಗ, ಕೈತುಂಬಾ ಸಂಬಳ, ಸಮಾಜದಲ್ಲಿ ಒಂದು ಸ್ಥಾನ ಬೇಕಲ್ವಾ? ಅದಕ್ಕಾಗಿ ನಿನ್ನಿಂದ ದೂರಾಗಿದ್ದು ಅಷ್ಟೇ, ಬೇರಾವ ಕಾರಣವೂ ಇಲ್ಲ.

ನಾನು ಐಎಎಸ್‌ ಮಾಡಬೇಕನ್ನೋದು ನನ್ನವ್ವ, ಅಪ್ಪನ ಆಸೆ. ಅದು ನನ್ನಾಸೆ ಕೂಡ. ಹಾಗಾಗಿ ಇನ್ನೊಂದೆರಡು ವರ್ಷ. ನಿನಗಷ್ಟೇ ಅಲ್ಲ. ಯಾರಿಗೂ ನಾನು ಸಿಗಲಾರೆ. ಐಎಎಸ್‌ ಪರೀಕ್ಷೆಯಲ್ಲಿ ಪಾಸ್‌ ಆಗ್ತಿನಲ್ಲ; ಅವತ್ತು ನನ್ನ ಕನಸುಗಳಿಗೆ ರೆಕ್ಕೆ ಬರುತ್ತೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಲು ಅದೆಷ್ಟೋ ರಾತ್ರಿ, ಅಮ್ಮ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡಿದ್ದಾಳೆ. ಅಪ್ಪನ ಬೆನ್ನ ಮೇಲೆ ಮೂಡಿದ ಬಾರುಗಳು, ಅವನು ದಿನಕ್ಕೆ ಎಷ್ಟು ಮೂಟೆ ಹೊರುತ್ತಿದ್ದ ಅನ್ನೋದಕ್ಕೆ ಸಾಕ್ಷಿ. ಇನ್ನು ಮುಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳೋ ಜವಾಬ್ದಾರಿ ನನ್ನದು. ಎಲ್ಲದಕ್ಕಿಂತ ಹೆಚ್ಚಾಗಿ, ನನ್ನ ಮಗ ಎಲ್ಲರಂತಲ್ಲ ಅನ್ನೋ ಅಮ್ಮನ ಮಾತು, ನಾನು ಎಡವಿದಾಗಲೆಲ್ಲಾ ನನ್ನನ್ನು ಎಚ್ಚರಿಸುತ್ತಲೇ ಇರುತ್ತೆ!

ಹಾಗಾಗಿ, ನಾನೀಗ ಓದೋ ಹಠಕ್ಕೆ ಬಿದ್ದಿದ್ದೇನೆ. ಎರಡು ವರ್ಷದ ನಂತರ ಕ್ಲಾಸ್‌ ಒನ್‌ ಆಫೀಸರ್‌ ಅನ್ನಿಸಿಕೊಂಡು, ಎದೆಯುಬ್ಬಿಸಿ, ಅಪ್ಪ-ಅವ್ವನೊಟ್ಟಿಗೆ ಶಾಸ್ತ್ರೋಕ್ತವಾಗಿ ಹೆಣ್ಣು ಕೇಳ್ಳೋಕೆ ಬರ್ತೀನಿ. ಅಲ್ಲಿಯವರೆಗೂ ಕಾಯ್ತಿಯಲ್ವಾ? ಖಂಡಿತ ನನಗಾಗಿ ನೀನು ಕಾಯ್ತಿಯ ಅನ್ನೋದು ನನ್ನ ನಂಬಿಕೆ. 

ಈಗ ಪತ್ರ ನೋಡಿ ಮುಗುಳ್ನಗ್ತಾ ಇದ್ದೀಯಾ ಅಲ್ವಾ? ಮತ್ತೂಮ್ಮೆ ಭಯ ಭಕ್ತಿಯಿಂದಲೇ ಕೇಳ್ತಿದ್ದೀನಿ, ನನಗಾಗಿ ಕಾಯ್ತಿಯ ಅಲ್ವಾ?

ಇಂತಿ
ನಿನ್ನ ಸೀರಿಯಸ್‌ ಹುಡುಗ

ಗೌರೀಶ್‌ ಕಟ್ಟಿಮನಿ

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.