ರೊಯ್ಯನೆ ಬಾಲ್‌ ಎಸೆದೆ ಆಮೇಲೆ ಏನಾಯಿತೋ ಗೊತ್ತಿಲ್ಲ!


Team Udayavani, Jan 29, 2019, 12:30 AM IST

m-5.jpg

ಏನು ನಡೀತಿದೆ ಎಂದೇ ಅರ್ಥವಾಗದೇ ಕಂಗಾಲಾಗಿದ್ದ ನನ್ನ ಕೈಗೆ ಬಾಲ್‌ ಕೊಟ್ಟು ಬಿಟ್ಟರು. ಸರಿ, ಈಗ ನಾನು ಅದನ್ನೇನು ಮಾಡಬೇಕು? ನೋಡಿದರೆ ಎಲ್ಲಾ ನನ್ನನ್ನೇ ನೋಡುತ್ತಿದ್ದಾರೆ! ಕಾಲು ನಡುಗತೊಡಗಿತು. ಅಷ್ಟರಲ್ಲಿ ನನ್ನ ಟೀಮಿನವಳೊಬ್ಬಳು “ಸರ್ವ್‌ ಮಾಡು ದೀಪಾ… ಯೂ ಕ್ಯಾನ್‌ ಡೂ ಇಟ್‌’ ಎಂದಳು. 

ನಾನು ಹೈಸ್ಕೂಲಿಗೆ ಬರುವ ಹೊತ್ತಿಗಾಗಲೇ ಐದು ಅಡಿ ಆರಿಂಚು ಬೆಳೆದು ನಿಂತಿದ್ದೆ. ತಿಂದಿದ್ದೆಲ್ಲಾ ಉದ್ದುದ್ದಕ್ಕೇ ಹರಡುತ್ತಿತ್ತೋ ಏನೋ! ಸುತ್ತಳತೆ ಮಾತ್ರ ಖೋತಾ. ಒಟ್ಟಾರೆ, ಬಡವರ ಮನೆ ಕಂಬದ ಹಾಗೆ ತೆಳ್ಳಗೆ ಉದ್ದಕ್ಕೆ ಇದ್ದೆ. ಅದನ್ನು ನೋಡಿ ನಮ್ಮ ಪಿ.ಟಿ ಸರ್‌ ನನ್ನನ್ನು ಸ್ಕೂಲ್‌ ಥ್ರೋ ಬಾಲ್‌ ತಂಡಕ್ಕೆ ಸೇರಿಸಿಕೊಂಡರು. 

ಬಾಲ್‌ ಹಿಡಿದು ಸರ್ವ್‌ ಮಾಡುವ ರೀತಿಯನ್ನು ಕಲಿಯುವ ಹೊತ್ತಿಗೇ ನ್ಪೋರ್ಟ್ಸ್ ಡೇ ತೀರಾ ಹತ್ತಿರ ಬಂದು ಅನಿವಾರ್ಯವಾಗಿ ನನಗೆ ಬರೀ ಥಿಯರಿ ಹೇಳಿಕೊಟ್ಟು ಮ್ಯಾಚ್‌ ಕಣಕ್ಕಿಳಿಸಲಾಯಿತು. ಎದುರು ತಂಡದವರು ಮೊದಲು ಸರ್ವ್‌ ಮಾಡಿದರು. ನಮ್ಮವರು ಹಿಡಿದು ತಿರುಗಿ ಎಸೆದರು. ಅದರ ರಭಸ ನೋಡಿ ಏಕೋ ಎಡಗಣ್ಣು ಅದುರಿತು. ಬಾಲ್‌ ನನ್ನೆಡೆಗೆ ಬೀಸಿ ಬರುವಾಗ ಎರಡೂ ಅಂಗೈ ತೆರೆದು ತಯಾರಾಗಿರಬೇಕು ಎಂದು ನನಗೆ ಪಾಠ ಹೇಳಿಕೊಟ್ಟಿದ್ದರು. ನಾನೂ ಗಂಭೀರ ಮುಖಮುದ್ರೆ ಇಟ್ಟುಕೊಂಡು ಸೈನಿಕನೊಬ್ಬನ ಸಮರ ತಯಾರಿಯಂದದಲಿ ಕೇಳಿದ್ದೆ. ಈ ಬಾಲು ಎರಡನೇ ಸಲಕ್ಕೇ ಸೀದಾ ನನ್ನ ಕಡೆಗೇ ಧಾವಿಸತೊಡಗಿತು! ನನ್ನ ತೆರೆದ ಅಂಗೈಗಳು ಮೆಲ್ಲನೆ ಮೇಲೆದ್ದವು. ಬಾಲ್‌ ನನ್ನತ್ತ ಧಾವಿಸುತ್ತಿದೆ… ನನ್ನ ಕೈಗಳು ಮೇಲೇರುತ್ತಿವೆ… ಇನ್ನೇನು ನನ್ನ ತೆಕ್ಕೆಗೆ ಬಾಲ್‌ ಬೀಳಬೇಕು, ಅಷ್ಟರಲ್ಲಿ ನಾನು ನನ್ನ ತೆರೆದ ಅಂಗೈಗಳನ್ನು ತಲೆಯ ರಕ್ಷಣೆಗೆಂದು ಹೊತ್ತುಕೊಂಡು ಕುಕ್ಕರಿಸಿ ಕುಳಿತುಬಿಟ್ಟಿದ್ದೆ! 

ಎಲ್ಲರೂ ನನ್ನ ಕಡೆ ಯಾವ ರೀತಿ ನೋಡುತ್ತಿದ್ದರೋ ಗೊತ್ತಿಲ್ಲ. ಯಾಕೆಂದರೆ, ನಾನು ಯಾರ ಕಡೆಗೂ ನೋಡಲೇ ಇಲ್ಲ. ಯೂನಿಫಾರ್ಮ್ ಸ್ಕರ್ಟ್‌ ಕೊಡವಿಕೊಂಡು, ಅಂಗೈಗಳನ್ನು ತೆರೆದು ಯೋಧಳಂತೆ ಮತ್ತೆ ನಿಂತುಬಿಟ್ಟೆ. 

ಆಟ ಮುಂದುವರಿಯಿತು. ನಾನು ಸೂಕ್ಷ್ಮವಾಗಿ ಉಳಿದವರನ್ನು ಗಮನಿಸುತ್ತಿದ್ದೆ. ಅವರು ಸಂತೋಷ ವ್ಯಕ್ತಪಡಿಸಿದರೆ ನಾನೂ ಸಂತೋಷ ತೋರುತ್ತಿದ್ದೆ. ಅವರು  “ಓ… ಛೆ!’, ‘ಓ..ನೋ!’ ಎಂಬಿತ್ಯಾದಿ ಉದ್ಗಾರಗಳನ್ನು ಮಾಡಿದರೆ ನಾನೂ ಹಾಗೆಯೇ ಮಾಡುತ್ತಿದ್ದೆ. ಒಟ್ಟು ನಮಗೆ ಪಾಯಿಂಟ್‌ ಬಂತೋ, ಅವರಿಗೋ ಎಂದು ನನಗೆ ಆಟ ಮುಗಿದರೂ ಗೊತ್ತಾಗಲಿಲ್ಲ.

ಅಳುವವರ ತಲೆ ಮೇಲೆ ಗುಂಡು ಕಲ್ಲು ಎತಾಕಿದರಂತೆ ಅನ್ನೋ ಗಾದೆಯಂತೆ, ಮೊದಲೇ ಏನು ನಡೀತಿದೆ ಎಂದೇ ಅರ್ಥವಾಗದೇ ಕಂಗಾಲಾಗಿದ್ದ ನನ್ನ ಕೈಗೆ ಬಾಲು ಕೊಟ್ಟುಬಿಟ್ಟರು. ಸರಿ, ಈಗ ನಾನು ಅದನ್ನೇನು ಮಾಡಬೇಕು? ನೋಡಿದರೆ ಎಲ್ಲಾ ನನ್ನನ್ನೇ ನೋಡುತ್ತಿದ್ದಾರೆ! ಕಾಲು ನಡುಗತೊಡಗಿತು. ಅಷ್ಟರಲ್ಲಿ ನನ್ನ ಟೀಮಿನವಳೊಬ್ಬಳು “ಸರ್ವ್‌ ಮಾಡು ದೀಪಾ… ಯೂ ಕ್ಯಾನ್‌ ಡೂ ಇಟ್‌’ ಎಂದಳು, ಪುಣ್ಯಾತಿತ್ತಿ. ಅವಳ ಹೊಟ್ಟೆ ತಣ್ಣಗಿರಲಿ. ಸರ್ವ್‌ ಮಾಡುವ ತರಬೇತಿ ಆಗಿತ್ತಲ್ಲ, ಸ್ವಲ್ಪ ಧೈರ್ಯದಿಂದಲೇ ಹೋಗಿ ಬಾಲ್‌ ಭುಜದ ಮೇಲೆ ತಂದು ಪೂರ್ತಿ ಬಲ ಹಾಕಿ ಎಸೆದೆ. ಎಲ್ಲಾ ಆಕಾಶದೆಡೆಗೆ ಮುಖ ಮಾಡಿ ತಯಾರಾದರು. ಅರೆ! ಚೆಂಡೇ ಕಾಣುತ್ತಿಲ್ಲ! ಎಲ್ಲಿ ಎಲ್ಲಿ ಎಂದು ನೋಡಿದರೆ ಹಾಳಾದ್ದು ನನ್ನ ಮುಂದಿನದಲ್ಲಾ ಮುಂದಿನ ಹುಡುಗಿಯ ಕಾಲ ಬಳಿ ಬಿದ್ದಿದೆ! ಏನೂ ಆಗೇ ಇಲ್ಲ ಎಂಬಂತೆ ಮುಖ ಮಾಡಿಕೊಂಡು ಯಾರನ್ನೂ ನೋಡದೇ ಮತ್ತೆ ಬಾಲ್‌ ತಂದು ಸರ್ವ್‌ ಮಾಡಿದೆ. ಅಬ್ಟಾ, ನನ್ನ ಪುಣ್ಯ, ನೆಟ್‌ ದಾಟಿತು! 

ಅಂತೂ ಇಂತೂ ಆ ಮ್ಯಾಚ್‌ ಮುಗಿಯಿತು. ಗೆದ್ದೆವೋ ಸೋತೆವೋ ಈಗ ಮರೆತುಹೋಗಿದೆ. ಆದರೆ ಆ ದಿನ ಎರಡು ರೆಸಲ್ಯೂಷನ್‌ ಗಳನ್ನು ಮಾಡಲಾಯಿತು. ಒಂದು: ನನ್ನ ಬದುಕಿನ ಮೊಟ್ಟಮೊದಲ ರೆಸಲ್ಯೂಷನ್‌. ಆಟೋಟ ನನ್ನ ತಟ್ಟೆಯ ತುತ್ತಲ್ಲ ಎನ್ನುವುದು. ಇನ್ನೊಂದು ನಮ್ಮ ಪಿ.ಟಿ ಸರ್‌ ಮಾಡಿದ್ದು: ಅದೇನೆಂದು ನಿಮ್ಮ ಊಹೆಗೆ ಬಿಟ್ಟಿದ್ದೇನೆ! 

ದೀಪಾ ಸ್ವಾಮಿ
 

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.