ಪುಂಡರೇ ಪ್ರಾಣ ರಕ್ಷಕರಾಗಿ ಬಂದಾಗ…

ಮೂರೇ ನಿಮಿಷದ ಮನುಷ್ಯ

Team Udayavani, Jun 11, 2019, 6:00 AM IST

b-1

ಕೆಲ ವರ್ಷಗಳ ಹಿಂದೆ ಕುಟುಂಬದವರೆಲ್ಲ ತಿರುಪತಿಗೆ ತೆರಳಿದ್ದೆವು. ವರಾಹ ದೇಗುಲ ದರ್ಶನಕ್ಕೆ ಬಂದು, ಕೈಕಾಲು ತೊಳೆಯಲು ಪುಷ್ಕರಿಣಿಗೆ ಇಳಿದೆವು. ಸುಮಾರು ಜನರಿದ್ದರು. ನಮ್ಮ ಎರಡೂ ಪುಟ್ಟ ಮಕ್ಕಳನ್ನು ಹಿಡಿದು ಪಾವಟಿಗೆಯ ಮೇಲೆ ಕುಳಿತಿದ್ದೆವು. ಕಲ್ಯಾಣಿಯಲ್ಲಿ ಯಾರೋ ಅವಳಿ- ಜವಳಿ ಯುವಕರು ನೀರಿನಲ್ಲಿ ಜೋರಾಗಿ, ಕಿರುಚಾಡುತ್ತಾ, ಈಜುತ್ತಾ ಅಲ್ಲಿನ ಪರಿಸರದ ಶಾಂತತೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರು. ಥೋ! ಎಂಥ ಜನರಪ್ಪಾ ಎಂದು ಮನಸ್ಸಿನಲ್ಲೇ ಶಪಿಸುತ್ತಾ, ನೀರಿಗಿಳಿಯಲು ಮುಂದಾದೆ.

ನನ್ನ ಒಂದೂವರೆ ವರುಷದ ಮಗ, ನನ್ನ ಹಿಂದೆಯೇ ಬಂದಿದ್ದು, ಗೊತ್ತಾಗಲಿಲ್ಲ. ನಾನು ಅವನತ್ತ ನೋಡುತ್ತಿದ್ದಾಗ, ಅದಾಗಲೇ ಅವನು ಕಾಲು ಜಾರಿ ನೀರಿಗೆ ಬಿದ್ದಿದ್ದ. ಮನೆಯರೆಲ್ಲರೂ ಅವರವರ ಮಕ್ಕಳೊಂದಿಗೆ ತಲ್ಲೀನಾಗಿದ್ದರಿಂದ, ಯಾರೂ ಗಮನಿಸಲೇ ಇಲ್ಲ. ಏನಾದರಾಗಲೀ, ಮಗನ ಹಿಡಿದೆಳೆಯಲೇಬೇಕೆಂದು ನಾನು ಸಂಪೂರ್ಣವಾಗಿ ಬಗ್ಗಿ, ನೀರಿನಲ್ಲಿ ಕೈಯ್ನಾಡಿಸಲು ಆರಂಭಿಸಿದೆ. ಮಗನ ಮುಖ ಸಂಪೂರ್ಣವಾಗಿ ನೀರಿನಲ್ಲಿ ಮರೆಯಾಗಿಬಿಟ್ಟಿತು. ಛಕ್ಕನೆ ಚಿತ್ರಗಳಲ್ಲಿ ಬರುವ ದೃಶ್ಯದಂತೆ ಮಗು ಮೇಲೆ ಮೇಲೆ ಬರುತ್ತಿತ್ತು. ನಾನು ಈ ಮೊದಲು ಮನಸ್ಸಿನಲ್ಲಿ ಬಯ್ದುಕೊಂಡ ಯುವಕರು, ತಕ್ಷಣ ಧಾವಿಸಿ, ಮಗುವಿನ ಎಡಬಲದಲ್ಲಿ ಹಿಡಿದು ಪ್ರಾಣ ರಕ್ಷಿಸಿದರು. ಇವೆಲ್ಲ ಕೆಲವೇ ಸೆಕೆಂಡಿನಲ್ಲಿ ಘಟಿಸಿತ್ತು. ಕಣ್ಣೀರು ತುಂಬಿದ್ದರಿಂದ, ಅವರ ಮುಖ ಸರಿಯಾಗಿ ಕಾಣಿಸಲಿಲ್ಲ. ಆ ಹೊತ್ತಿನಲ್ಲಿ ಧನ್ಯವಾದ ಹೇಳಲೂ ಮರೆತಿದ್ದೆ. ಆ ಹುಡುಗರು, ಯಾವ ಭಾಷಿಕರೇ ಆಗಿರಲಿ, ಎಲ್ಲೇ ಇರಲಿ, ಅವರನ್ನು ದೇವರು ಚೆನ್ನಾಗಿ ಇಟ್ಟಿರಲಿ.

– ಪದ್ಮಾ ಆರ್‌. ಅಡಿಗ, ಹುಬ್ಬಳ್ಳಿ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.