ವಿಧೇಯಳಾಗಿದ್ದ ನನಗೆ ಸಿಕ್ಕಿದ್ದೇನೋ ಗೆಳೆಯಾ?
Team Udayavani, Mar 17, 2020, 4:00 AM IST
ವಿಚಿತ್ರವಾದ ಸತ್ಯವಿದು. ನನಗೆ ನೀನು ಆಡಿದ ಮಾತು ಕಣ್ಣೀರು ತರಿಸಿದ್ರೂ ನೀ ಹೇಳಿದ ಕಾರಣ ಮಾತ್ರ ದಿನದಿಂದ ದಿನಕ್ಕೆ ಉಸಿರು ಕಟ್ಟಿಸುತ್ತಿದೆ. ನಮ್ಮಿಬ್ಬರ ಪ್ರೀತಿಗೆ ಒಂಬತ್ತು ವರ್ಷ ಕಳೆದರೂ ನೀನು ನೀ ನನ್ನ ಮೇಲಿಟ್ಟಿರೋ ನಂಬಿಕೆ ಮಾತ್ರ ಸೊನ್ನೆ. ಯಾವ ಕಾರಣಕ್ಕೆ ನಿನ್ನ ಈ ವಿಚಿತ್ರ ನಡವಳಿಕೆ? ಗೊತ್ತಿಲ್ಲ. ಆದರೆ ನನ್ನ ಪ್ರಶ್ನೆ ಅದಲ್ಲ.
ನೀ ಯಾವಾಗಲೂ ಹೇಳ್ಳೋ ಹಾಗೆ, ಎಲ್ಲ ಹುಡುಗೀರ ಥರ ನೀನು ಇಲ್ಲ. ಅದೇ ನಂಗೆ ತುಂಬಾ ಇಷ್ಟ ಅನ್ನೋ ಮಾತೇ ನಂಗೆ ಕಷ್ಟ ಆಗಿದೆ.
ಬೇರೆ ಹುಡುಗಿಯರ ಥರ ಒಂದಿನ ಕೂಡ, ನಂಗೆ ಇದು ಬೇಕು, ಅದು ಬೇಕು ಅಂತ ಹಠ ಹಿಡಿಯಲಿಲ್ಲ. ಪ್ರತಿ ಹೆಜ್ಜೆ ಇಡುವಾಗ್ಲೂ ನಿನ್ನ ಅನುಮತಿ ತಗೊಂಡೇ ಇಡುತಿ¨ªೆ. ನಂಗೆ ನೀನೇ ಪ್ರಪಂಚ. ನಿನ್ನ ಬಿಟ್ಟು ನನಗೆ ಬೇರೆ ಪ್ರಪಂಚದ ಅರಿವಿಲ್ಲ. ನಿನ್ನ ಮಾತು ಮೀರಿ ಒಂದೇ ಒಂದು ದಿನವೂ ನಡೆದುಕೊಂಡಿಲ್ಲ. ಬೇರೆಯವರ ಕೋಪಕ್ಕೆ ನಾನು ಬಲಿಯಾದಾಗ ಕೂಡ ಪ್ರತಿಕ್ರಿಯೆ ನೀಡಲಿಲ್ಲ. ನೀನು ಕಟ್ಟಿ ಕೊಟ್ಟ ಕನಸಿನ ಕೋಟೆಯಲ್ಲಿ, ರಾಣಿ ತರ ಇದ್ದ ನನಗೆ ಆ ಅರಮನೆಯನ್ನೇ ನೆಲಸಮ ಮಾಡುವ ಪ್ರಯತ್ನ ಮಾಡಿಬಿಟ್ಟೆ.
ಆದರೆ, ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ? ಸುಖ-ದುಃಖ ಎರಡು ಅವನ ಸೂತ್ರದಲ್ಲಿದೆ ಅನ್ನೋ ಹಾಡಿನ ಸಾಲುಗಳು ಮಾತ್ರ ತುಂಬಾ ನೋವುಂಟು ಮಾಡುತ್ತಿವೆ. ಈ ಸಾಲುಗಳ ಹಾಗೆ ಆ ಬ್ರಹ್ಮನ ಹಳೆಯಲ್ಲಿ ನಾನು ರಾಜನ ಜೊತೆ ರಾಣಿ ಥರ ಇರರ್ತಿನೋ ಅಥವಾ ಮುಂದೆ ಏನು ಬರೀಬೇಕಂತ ಗೊತ್ತಾಗ್ತಾ ಇಲ್ಲ…
ಲಕ್ಕಿ ಸಿಂದಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ