ಕರ್‌ ಕರ್‌ ಕಪ್ಪೆ- ಕವರ್‌ ಕಪ್ಪೆ


Team Udayavani, Jul 27, 2017, 7:45 AM IST

kappe.jpg

ಅದು ಮಳೆಗಾಲದ ಸಮಯ. ಆಗಾಗ್ಗೆ ಮಳೆ ಬಂದು ಅಲ್ಲಲ್ಲಿ ತಗ್ಗುಗಳಲ್ಲಿ ನೀರು ನಿಂತಿತ್ತು. ಹೀಗೆ ನೀರು ನಿಂತ ತಗ್ಗಿನ ಹತ್ತಿರದಲ್ಲಿಯೇ ಒಂದು ರಸ್ತೆ ಇತ್ತು. ಅದರ ಪಕ್ಕ ಮರದ ಕೆಳಗೆ ಹುತ್ತವೊಂದಿತ್ತು. ಅದರÇÉೊಂದು ಹಾವು ವಾಸವಾಗಿತ್ತು. ಆ ನಿಂತ ನೀರಿನಲ್ಲಿ ತಂಗಿದ್ದ ಕಪ್ಪೆಗಳನ್ನು ದಿನಾಲು ಒಂದೊಂದೇ ಹೊಂಚು ಹಾಕಿ ತಿಂದು ಹಾವು ಕೊಬ್ಬಿತ್ತು. ದಿನೇದಿನೇ ತಮ್ಮ ಸಮೂಹದ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಗಮನಿಸಿದ ಹಿರಿಯ ಕಪ್ಪೆ ತನ್ನ ಬಳಗವನ್ನು ಕರೆದು, ಚರ್ಚಿಸಿತು.

“ಎಲ್ಲರೂ ಸೇರಿ ಹಾವಿನ ಉಪಟಳವನ್ನು ನಿಯಂತ್ರಿಸದಿದ್ದರೆ, ನಮ್ಮ ವಂಶ ನಿರ್ವಂಶವಾಗುವುದರಲ್ಲಿ ಸಂಶಯವಿಲ್ಲ’ ಎಂದು ಸಲಹೆ ನೀಡಿದವು. ಯಾರಿಗೂ ಉಪಾಯ ಹೊಳೆಯಲಿಲ್ಲ. ಯೋಚಿಸಲು ನಾಳೆಯವರೆಗೂ ಸಮಯ ತೆಗೆದುಕೊಂಡು ತಮ್ಮ ತಮ್ಮ ಜಾಗಗಳಿಗೆ ಹಿಂತಿರುಗಿದವು.

ಮರುದಿನ ಬೆಳಗ್ಗೆ ಮತ್ತೆ ಸಭೆ ಸೇರಿ ತಮ್ಮ ಅಭಿಪ್ರಾಯ ಹಂಚಿಕೊಂಡವು. ಒಂದು ಕಪ್ಪೆ ಹಿಂದಿನ ಕಾಲದಲ್ಲಿ ಕಾಗೆಯೊಂದು ತನ್ನ ಮೊಟ್ಟೆ ತಿನ್ನುತ್ತಿದ್ದ ಹಾವನ್ನು ಸುಟ್ಟು ಸಾಯಿಸಿದ ಘಟನೆ ನೆನಪಿಸಿ, “ನಾವೂ ಹಾಗೇ ಮಾಡೋಣ’ ಎಂದಿತು. ಹೆಣ್ಣು ಕಪ್ಪೆಯೊಂದು, “ಹೌದು ಹಾಗೇ ಮಾಡೋಣ’ ಎಂದಿತು. “ಛೇ ಛೇ… ಇದು ಆಗದ ಮಾತು, ಇÇÉೇ ಸಮೀಪದಲ್ಲಿ ನೀರು ಇದೆ. ಇಲ್ಲಿ ಬೆಂಕಿಯ ಉಪಾಯ ಫ‌ಲಿಸದು’ ಎಂದು ವಟರುಗಪ್ಪೆ ನುಡಿಯಿತು.

“ಇತ್ತೀಚೆಗೆ ನಮ್ಮ ಕುಲದ ಕೆಲ ಸಾಹಸಿ ಕಪ್ಪೆಗಳು ನಮ್ಮ ವೈರಿಗಳಾದ ಹಾವನ್ನೇ ನುಂಗಿ ಜಗತ್ತಿಗೆ ಸುದ್ದಿಯಾಗಿವೆ. ಅಂತಹ ಸಾಹಸವನ್ನು ನಾವು ಏಕೆ ಮಾಡಬಾರದು?’ ಎಂದು ಬಲಿಷ್ಠ ಕಪ್ಪೆಯೊಂದು ಗುಟುರಿತು. ಅಷ್ಟರಲ್ಲಿ ಮರಿಕಪ್ಪೆಯೊಂದು, “ನನಗೆ ಅಪ್ಪಣೆ ಕೊಟ್ಟರೆ ನಾನು ಪ್ರಯತ್ನಿಸುತ್ತೇನೆ’ ಎಂದಾಗ ಎಲ್ಲವೂ ನಕ್ಕು ಸುಮ್ಮನಾದವು.

ಒಂದು ಸರಿಯಾದ ದಿನ ಮತ್ತು ಸೂಕ್ತ ಸಮಯ ಸಾಧಿಸಿ ಅದರ ಸಂಹಾರದ ಜವಾಬ್ದಾರಿಯನ್ನು ತಾನು ಹೊರುತ್ತೇನೆಂದು ಬಲಿಷ್ಠ ಕಪ್ಪೆ ಒಪ್ಪಿಕೊಂಡಿತು. ಈ ಕಾರ್ಯಕ್ಕೆ ಬೇಕಾದ ಸಕಲ ಸಹಕಾರ ನಮ್ಮ ಬಳಗದಿಂದ ಸಿಗಲಿದೆ, ಹಿಡಿದ ಕೆಲಸದಲ್ಲಿ ಜಯವಾಗುತ್ತದೆ ಎಂದು ಎಲ್ಲ ಕಪ್ಪೆಗಳು ಸಭೆ ಮುಗಿಸಿದವು. ಒಂದು ದಿನ ಹಾವು ಮರಿಕಪ್ಪೆಯನ್ನು ಕಬಳಿಸಲು ಎಂದಿನಂತೆ ಹೊಂಚು ಹಾಕಿತ್ತು. ಇದನ್ನರಿತ ಮರಿಕಪ್ಪೆ ಮುಳ್ಳಿನ ಪೊದೆಯ ಮರೆಯಲ್ಲಿ ಬಿದ್ದಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್‌ ಕವರಿನಲ್ಲಿ ಹೊಕ್ಕು ಅದಕ್ಕೆ ಬಿದ್ದಿದ್ದ ತೂತೊಂದರಲ್ಲಿ ಗೋಣು ಚಾಚಿ ಹಾವಿನತ್ತ ಕುಪ್ಪಳಿಸಿತು. ಪ್ಲಾಸ್ಟಿಕ್‌ ಕವರ್‌ನ ಕರ್‌ ಕರ್‌ ಸಪ್ಪಳ ಮತ್ತು ದೊಡ್ಡ ಗಾತ್ರವಾಗಿದ್ದನ್ನು ನೋಡಿದ ಹಾವು, ಇದಾವುದೋ ವಿಚಿತ್ರ ಜೀವಿ ಎಂದುಕೊಂಡು ಭಯದಿಂದ “ಯಾರು ನೀನು?’ ಎಂದು ಕೇಳಿತು. “ನಾನು ಕಪ್ಪೆಗಳ ದೇವರು… ಕರ್‌ ಕರ್‌ ಕಪ್ಪೆ ಕವರ್‌ ಕಪ್ಪೆ. ನನ್ನ ಭಕ್ತ ಸಮೂಹ ಸಂಕಷ್ಟದಲ್ಲಿ¨ªಾಗ ಅವರ ಶತ್ರುವನ್ನು ಸದೆಬಡೆದು ಅವರನ್ನು ಸಂರಕ್ಷಿಸಿ  ಉದ್ಧರಿಸಲು ಬಂದಿದ್ದೇನೆ’ ಎಂದು ಮತ್ತೂಂದು ಹೆಜ್ಜೆ ಮುಂದೆ ಜಿಗಿಯಿತು. ಗಾಬರಿಗೊಂಡ ಹಾವು ಹಿಂದೆ ಸರಿದಂತೆಲ್ಲ ಕವರ್‌ ಕಪ್ಪೆ ಮುಂದೆ ಜಿಗಿಯಿತು. ಸ್ವಲ್ಪದೂರ ಹೀಗೆ ಹಿಮ್ಮೆಟ್ಟಿಸಿತು. ಹೆದರಿದ ಹಾವು ಎ¨ªೆನೋ, ಬಿ¨ªೆನೋ ಎಂದು ಜಾಗ ಖಾಲಿಮಾಡಿತು. ದೂರದಿಂದ ಎಲ್ಲವನ್ನೂ ಗಮನಿಸುತ್ತಿದ್ದ ಕಪ್ಪೆ$ಬಳಗ, ಮರಿಕಪ್ಪೆಯ ಜಾಣತನದಿಂದ ಯಾವುದೇ ಪ್ರಾಣಹಾನಿಯಾಗದೇ, ಸಮಸ್ಯೆಗೆ ಪರಿಹಾರ ಸಿಕ್ಕಿದ್ದಕ್ಕೆ ಖುಷಿಪಟ್ಟು ಮರಿಕಪ್ಪೆಯನ್ನು ಅಭಿನಂದಿಸಿದವು.

– ಅಶೋಕ ವಿ. ಬಳ್ಳಾ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.