ಚಿಕ್ಕ ಮೀನಿನ ದೊಡ್ಡ ಆಸೆ


Team Udayavani, Nov 7, 2019, 3:20 AM IST

qq-6

ಅದು ಪರಿಶುದ್ಧವಾದ ಕೊಳ. ಬಣ್ಣ ಬಣ್ಣದ ನೂರಾರು ಮೀನುಗಳು ಅಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಆನಂದದಿಂದಿದ್ದವು. ಇದೇ ಕೊಳದಲ್ಲಿ ಒಂದು ಚಿಕ್ಕ ಮೀನು ತನ್ನ ತಾಯಿಯೊಂದಿಗೆ ವಾಸವಾಗಿತ್ತು. ಕೊಳದ ಪಕ್ಕದಲ್ಲೇ ವಾಸವಾಗಿದ್ದ ಮರಿ ಮಂಡೂಕದ ಜೊತೆ ಚಿಕ್ಕ ಮೀನಿಗೆ ಗೆಳೆತನ ಬೆಳೆಯಿತು. ಪ್ರತಿದಿನ ಜೊತೆಯಾಗಿ ಆಡುತ್ತಾ ನೀರಿನಲ್ಲಿದ್ದ ಸಣ್ಣ ಪುಟ್ಟ ಹುಳಹುಪ್ಪಟೆಗಳನ್ನು ಭಕ್ಷಿಸುತ್ತಿದ್ದವು.

ಕೆಲ ಸಮಯ ನೀರಿನಲ್ಲಿ ಕಾಲ ಕಳೆಯುತ್ತಿದ್ದ ಮರಿ ಮಂಡೂಕ, ಕೊಳದಿಂದ ಹೊರಜಿಗಿದು ಮರೆಯಾಗುತ್ತಿತ್ತು. ಒಂದು ದಿನ ಚಿಕ್ಕ ಮೀನು ಮರಿ ಮಂಡೂಕದ ಬಳಿ “ನೀನು ನನ್ನಂತೆ ಈ ಕೊಳದಲ್ಲೇ ವಾಸಮಾಡುವ ಬದಲು ಹೊರಕ್ಕೆ ಬರಬಾರದೇಕೆ?’ ಎಂದು ಪ್ರಶ್ನಿಸಿತು. ಆಗ ಮರಿ ಮಂಡೂಕ “ಗೆಳೆಯಾ, ನಾನು ನನ್ನ ಅಮ್ಮನ ಜೊತೆ ಊರೆಲ್ಲಾ ಸುತ್ತಾಡಿ ಬರುತ್ತೇನೆ. ಅಲ್ಲದೆ ಅಲ್ಲಿ ದೊರೆಯುವ ರುಚಿಕರವಾದ ಎಲೆಗಳ ಚಿಗುರು, ಹುಳುಗಳನ್ನು ಸೇವಿಸುತ್ತೇನೆ. ಕೊಳದಿಂದ ಹೊರಗಡೆ. ನೀನು ನೋಡದ ಸುಂದರವಾದ ಲೋಕವಿದೆ’ ಎಂದಿತು.

“ಅರೆ, ನಾನು ಈ ಕೊಳವೊಂದೇ ಪ್ರಪಂಚ ಎಂದುಕೊಂಡಿದ್ದೆ. ಇದಕ್ಕಿಂತ ಬೇರೆ ಸುಂದರವಾದ ಜಾಗ ಇದೆಯೇ?’ ಎಂದು ಅಚ್ಚರಿಗೊಂಡಿತು ಚಿಕ್ಕವನು. ಮರಿ ಮಂಡೂಕ ಹೇಳಿದ ವಿಷಯವನ್ನು ಕೇಳಿ ತನಗೂ ಈ ಕೊಳದಿಂದ ಹೊರ ಹೋಗಿ ಹರಿಸಬೇಕೆಂದು ಆಸೆಯಾಗುತ್ತಿದೆ ಎಂದು ಅಮ್ಮನಲ್ಲಿ ತನ್ನ ಮನದ ಆಸೆಯನ್ನು ಹೇಳಿತು. ಆಗ ಅಮ್ಮ ಮೀನು “ನೋಡು ನಾವು ಉಸಿರಾಡುವ ಆಮ್ಲಜನಕ ನೀರಿನಲ್ಲಿ ಮಾತ್ರ ದೊರೆಯುವುದು. ನಮ್ಮ ಶರೀರ ಹೊರಗಡೆಯ ವಾತಾವರಣಕ್ಕೆ ಸರಿಹೊಂದುವುದಿಲ್ಲ. ಸುಮ್ಮನೆ, ಅನ್ಯರ ಬಣ್ಣದ ಮಾತಿಗೆ ಮರುಳಾಗಿ ಜೀವ ಕಳೆದುಕೊಳ್ಳುವಂಥ ದುಸ್ಸಾಹಸಕ್ಕೆ ಕೈಹಾಕುವುದು ಬೇಡ’ ಎಂದಿತು.

ಅಮ್ಮನ ಹಿತವಚನ ಕೇಳಿ ಅರೆ ಘಳಿಗೆ ಸುಮ್ಮನಾದರೂ ಮರಿಮಂಡೂಕನನ್ನು ಕಂಡಾಗ ಮತ್ತೆ ಚಿಕ್ಕ ಮೀನಿಗೆ ಕೊಳದಿಂದ ಹೊರಹೋಗ ಬೇಕೆಂಬ ಬಯಕೆ ಹೆಚ್ಚಾಗತೊಡಗಿತು. ಒಂದು ದಿನ ಅಮ್ಮನಿಗೆ ತಿಳಿಯದಂತೆ ಮರಿ ಮೀನು ಮಂಡೂಕನೊಡನೆ ಕೊಳದಿಂದ ಹೊರಜಿಗಿಯಿತು. ನೀರಿನಿಂದ ಹೊರ ಬಂದ ಅರೆಕ್ಷಣದಲ್ಲಿ ಚಿಕ್ಕ ಮೀನು ಉಸಿರು ಕಟ್ಟಿದಂತಾಗಿ ವಿಲವಿಲ ಒದ್ದಾಡತೊಡಗಿತು. ಗಾಬರಿಗೊಂಡ ಮರಿ ಮಂಡೂಕ ಕೂಡಲೇ ಕೊಳದಲ್ಲಿದ್ದ ಮೀನುಗಳನ್ನು ಕರೆಯಿತು. ಅವೆಲ್ಲವೂ ಚಿಕ್ಕ ಮೀನನ್ನು ಕೊಳದೊಳಕ್ಕೆ ಎಳೆದುಕೊಂಡವು. ಅಮ್ಮನ ಎಚ್ಚರಿಕೆಯ ನುಡಿಯನ್ನು ನಿರ್ಲಕ್ಷಿಸಿದ್ದಕ್ಕೇ ತನಗೆ ಈ ದುರ್ಗತಿ ಒದಗಿತೆಂದು ಮರಿ ಮೀನು ಮರುಗಿತು. ತಾನು ಇನ್ನೆಂದೂ ಕೊಳದಿಂದ ಹೊರಕ್ಕೆ ಹೋಗುವುದಿಲ್ಲವೆಂದು ತೀರ್ಮಾನಿಸಿತು.

– ವಂದನಾ ರವಿ ಕೆ. ವೈ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.