ಬೆನ್ನ ಹಿಂದೆಯೂ ನೋಡುತ್ತೆ ಮೊಲ


Team Udayavani, May 30, 2019, 8:00 PM IST

lead-benna-(2)-copy-copy

ಬೆನ್ನಿನಲ್ಲಿ ಯಾವ ಪ್ರಾಣಿಗೂ ಕಣ್ಣುಗಳಿಲ್ಲ. ಹಾಗಿದ್ದೂ ಈ ಪ್ರಾಣಿ ಬೆನ್ನ ಹಿಂದಿರುವುದನ್ನು ನೋಡಬಲ್ಲುದು. ಮನುಷ್ಯ ಸುಮಾರು 120 ಡಿಗ್ರಿಯಷ್ಟನ್ನು ನೋಡಬಲ್ಲ ಸಾಮರ್ಥ್ಯವನ್ನು ಪಡೆದಿದ್ದರೆ ಈ ಪ್ರಾಣಿ 360 ಕೋನಗಳ ದೃಷ್ಟಿಯನ್ನು ಹೊಂದಿದೆ. ಆ ಪ್ರಾಣಿ ಬೇರಾವುದೂ ಅಲ್ಲ ನಾವು ಬೋನಿನಲ್ಲಿ ನೋಡಲಿಚ್ಚಿಸುವ, ಉದ್ಯಾನಗಳಲ್ಲಿ ಬಂಧಿಸಿಡುವ ಮುದ್ದಾದ ಮೊಲ. ಪ್ರಕೃತಿ ಇವುಕ್ಕೆ ಬೆನ್ನ ಹಿಂದೆಯೂ ನೋಡಬಲ್ಲ ಸಾಮರ್ಥ್ಯವನ್ನು ನೀಡಿವೆ. ಈ ಸಸ್ಯಾಹಾರಿ ಮತ್ತು ನಿರುಪದ್ರವಿ ಜೀವಿ ಬಹಳಷ್ಟು ಪ್ರಾಣಿಗಳಿಗೆ ಆಹಾರವಾಗಿದೆ. ಹೀಗಾಗಿ ಇವು ಸದಾ ಕಾಲ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ಒಂದು ಚಿಕ್ಕ ಸಪ್ಪಳವಾದರೂ ಅವು ಅಪಾಯವನ್ನು ಗ್ರಹಿಸಿ ಮರೆಯಾಗುತ್ತವೆ. 360 ಡಿಗ್ರಿ ದೃಷ್ಟಿಕೋನವನ್ನು ಅವು ನೋಡಬಲ್ಲವಾದರೂ ಒಎದು ಭಾಗ ಅವಕ್ಕೆ ಮರೆಯಾಗಿ ಉಳಿಯುತ್ತದೆ. ಅದನ್ನು ಇಂಗ್ಲಿಷ್‌ನಲ್ಲಿ “ಬ್ಲೆ„ಂಡ್‌ ಸ್ಪಾಟ್‌’ ಎಂದು ಕರೆಯುತ್ತಾರೆ. ಮೂಗಿನ ನೇರಕ್ಕಿರುವ ದೃಶ್ಯಾವಳಿ ಅವುಗಳಿಗೆ ಕಾಣದು. ಆಗ ಅವು ಕತ್ತನ್ನು ತಿರುಗಿಸುವುದರ ಮೂಲಕ ಆ ಭಾಗವನ್ನು ಕವರ್‌ ಮಾಡುತ್ತವೆ.
ಮೊಲಗಳ ಜಾಗೃತ ಮನಸ್ಥಿತಿಗೆ ಉದಾಹರಣೆಯೊಂದು ಇಲ್ಲಿದೆ. ಮೊಲಗಳಿಗೆ ಪರಿಚಿತವಾಗಿರುವ ಯಜಮಾನ ಎದುರಿನಿಂದ ಬಂದರೆ ನಲಿಯುತ್ತಾ ಅವನ ಬಳಿಗೆ ಓಡುತ್ತವೆ. ಆದೇ ಯಜಮಾನ ಹಿಂದಿನಿಂದ ಬಂದರೆ ಶತ್ರು ಬರುತ್ತಿದ್ದಾನೆ ಎಂದುಕೊಂಡು ಓಟ ಕೀಳುತ್ತವೆ. ಹಿಂದಿನಿಂದ ಬರುವವನು ಯಾವತ್ತೂ ಶತ್ರುವಾಗಿರುತ್ತಾನೆ ಎನ್ನುವ ಸತ್ಯ ಅವುಗಳಿಗೂ ತಿಳಿದಿರುವುದು ಸೋಜಿಗ ಅಲ್ಲವೇ?

ಆನೆಗಳ ಸೀಕ್ರೆಟ್‌ ವಿ.ಐ.ಪಿ ಕೋಡ್‌
ನಮ್ಮಲ್ಲಿ ಕೆಲ ದೇವಸ್ಥಾನಗಳಲ್ಲಿ ವಿ.ಐ.ಪಿ(ಪ್ರಮುಖ ವ್ಯಕ್ತಿ)ಗಳಿಗೆಂದೇ ಪ್ರತ್ಯೇಕ ಸರದಿ ಇರುವುದನ್ನು ಗಮನಿಸಿರಬಹುದು. ಇಷ್ಟೂದ್ದದ ಸರದಿಯಲ್ಲಿ ನಿಂತು ಕಂಟೆಗಟ್ಟಲೆ ವ್ಯಯ ಮಾಡುವುದಕ್ಕೆ ಸಮಯ ಇರುವುದಿಲ್ಲವೆಂಬ ಕಾರಣಕ್ಕೆ ಈ ವ್ಯವಸ್ಥೆ. ವಿದೇಶಗಳಲ್ಲಿ ಆ್ಯಂಬುಲೆನ್ಸ್‌ಗಳಿಗೆಂದೇ ಪ್ರತ್ಯೇಕ ಲೇನುಗಳನ್ನು ಮಾಡಿರುತ್ತಾರೆ. ಕಾರ್ಯಕ್ರಮಗಳಲ್ಲಿ ಮುಂದಿನ ಆಸನಗಳನ್ನು ಪ್ರಮುಖ ವ್ಯಕ್ತಿಗಳಿಗಾಗಿ ಕಾದಿರಿಸಿರುತ್ತಾರೆ. ಒಟ್ಟಿನಲ್ಲಿ ಈ “ಪ್ರತ್ಯೇಕ’ ಅನ್ನುವುದು “ಮುಖ್ಯ’ ಎನ್ನುವುದರ ಜೊತೆ ಅಂಟಿಕೊಂಡಿರುವುದು ಸ್ಪಷ್ಟವಾಗುತ್ತದೆ. ಭೂಮಿ ಮೇಲಿನ ವಿ.ಐ.ಪಿಗಳನ್ನು ಪಟ್ಟಿ ಮಾಡುವುದಾದರೆ ಮೊದಲ ಸ್ಥಾನ ಮನುಷ್ಯನಿಗೆ. ಈ ವಿಚಾರ ಆನೆಗಳಿಗೂ ಗೊತ್ತು. ಅದಕ್ಕೆಂದೇ ಮನುಷ್ಯನಿಗಾಗಿ ಪ್ರತ್ಯೇಕ ಬಗೆಯ àಳನ್ನು ಅವು ಮೀಸಲಿಟ್ಟಿವೆ. ಸೀಕ್ರೆಟ್‌ ಕೋಡ್‌ ಥರ! ಪರಿವಾಗಿಲ್ವೇ ಆನೆಗಳಿಗೂ ನಮ್ಮ ಪ್ರಾಮುಖ್ಯತೆ ಗೊತ್ತಾಯಿತಲ್ಲ ಎಂದು ಇಷ್ಟು ಬೇಗ ಖುಷಿಪಡದಿರಿ. ಆನೆಗಳು ನಮ್ಮನ್ನು ಯಾವ ಲೆಕ್ಕದಲ್ಲಿ ವಿ.ಐ.ಪಿ ಎಂದು ಪರಿಗಣಿಸಿವೆ ಎಂದು ಮೊದಲು ತಿಳಿದುಕೊಳ್ಳಿರಿ. ನಮ್ಮನ್ನು ಅವು ಅಪಾಯಕಾರಿ ಎಂದು ಪರಿಗಣಿಸುತ್ತವೆ. ಹೀಗಾಗಿ ಮನುಷ್ಯನನ್ನು ಕಂಡ ಕೂಡಲೆ ವಿಭಿನ್ನ ಬಗೆಯ ಸದ್ದನ್ನು ಹೊರಡಿಸುತ್ತವೆ, ಇತರೆ ಆನೆಗಳು ಎಚ್ಚೆತ್ತುಕೊಳ್ಳಲಿ ಎಂದು.

-ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.