ಡ್ಯಾನ್ಸರ್‌ ಕಪ್ಪೆ ಡ್ಯಾನ್ಸ್‌ ಯಾಕೆ ಮಾಡುತ್ತೆ?

ಕಣ್‌ ತೆರೆದು ನೋಡಿ

Team Udayavani, Jul 4, 2019, 5:45 AM IST

4

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ
ಜಗತ್ತಿನೊಳಗೊಂದು ಸುತ್ತು…

ಡ್ಯಾನ್ಸ್‌ ಎಂದ ಕೂಡಲೆ ನಮಗೆ ನೆನಪಾಗೋದು ಮೈಕೆಲ್‌ ಜಾಕ್ಸನ್‌. ಆದರೆ ಡ್ಯಾನ್ಸ್‌ ಮಾಡುವ ಕಲೆ ಮನುಷ್ಯನೊಬ್ಬನಿಗೇ ಅಲ್ಲ ಪ್ರಾಣಿಗಳಿಗೂ ಒಲಿದು ಬಂದಿದೆ. ನವಿಲು ಗರಿ ಬಿಚ್ಚಿ ನರ್ತಿಸುವುದನ್ನು ನೀವು ನೋಡಿರಬಹುದು. ಅದೇ ರೀತಿ ಕಪ್ಪೆ ನರ್ತಿಸುವುದನ್ನು ನೋಡಿದ್ದೀರಾ? ಎಲ್ಲಾ ಪ್ರಭೇದಗಳಲ್ಲಿ ಈ ಪ್ರವೃತ್ತಿ ಕಂಡುಬರುವುದಿಲ್ಲ. ಪ್ರಪಂಚದಾದ್ಯಂತ ಒಟ್ಟು 25 ಕಪ್ಪೆಗಳ ಪ್ರಭೇದಗಳನ್ನು ಡ್ಯಾನ್ಸಿಂಗ್‌ ಕಪ್ಪೆ ಎಂದು ಕರೆದಿದ್ದಾರೆ ಸಂಶೋಧಕರು. ಈ ಕಪ್ಪೆಗಳು ತನ್ನ ಕಾಲುಗಳನ್ನು ಆಕಾಶದೆತ್ತರಕ್ಕೆ ಚಾಚುತ್ತಾ ನರ್ತಿಸುತ್ತವೆ. ಸ್ವಾರಸ್ಯಕರ ಸಂಗತಿ ಎಂದರೆ ನವಿಲುಗಳಲ್ಲಿ ಹೇಗೆ ಗಂಡು ನವಿಲು ಮಾತ್ರ ನರ್ತಿಸುವುದೋ ಅದೇ ರೀತಿ ಕಪ್ಪೆಗಳ ಪ್ರಭೇದಗಳಲ್ಲಿಯೂ ಗಂಡು ಕಪ್ಪೆಗಳೇ ನರ್ತಿಸುವುದು. ಈಗ ಇವು ಯಾಕೆ ನರ್ತಿಸುತ್ತವೆ ಎನ್ನುವುದಕ್ಕೆ ಉತ್ತರ ಹೊಳೆದಿರಬೇಕಲ್ಲ? ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು. ಡ್ಯಾನ್ಸಿಂಗ್‌ ಕಪ್ಪೆಗಳು ಹೆಚ್ಚಾಗಿ ವಾಸಿಸುವುದು ಜಲಪಾತ, ಹಳ್ಳ ಓರೆಕೋರೆಯಾಗಿ ನೀರು ಹರಿಯುವ ಪ್ರದೇಶಗಳಲ್ಲಿ. ಅಲ್ಲಿ ಕೊಟ್ರ ಕೊಟ್ರ ಸದ್ದು ಹೊರಡಿಸುವುದರಿಂದ ಯಾರಿಗೂ ಕೇಳದು. ಹೀಗಾಗಿ ಶಬ್ದದ ಮೂಲಕ ಹೆಣ್ಣು ಕಪ್ಪೆಯನ್ನು ಆಕರ್ಷಿಸುವುದು ದೂರದ ಮಾತು. ಹೀಗಾಗಿ ಕಾಲು ಸನ್ನೆಯ ಮೂಲಕ, ಹೆಜ್ಜೆ ಹಾಕುವುದರ ಮೂಲಕ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸುತ್ತವೆ.

ಎಮ್ಮೆಗಳಲ್ಲೂ ಇದೆ ಮತದಾನ ವ್ಯವಸ್ಥೆ
ಹಾಂ, ಏನು? ಎಮ್ಮೆಗಳಲ್ಲೂ ಮತದಾನ ವ್ಯವಸ್ಥೆಯೇ? ನಮ್ಮಲ್ಲಾದರೆ ಮತದಾನಕ್ಕೆ ಬ್ಯಾಲೆಟ್‌ ಪೇಪರ್‌, ಇ.ವಿ.ಎಂ ಯಂತ್ರಗಳನ್ನು ಬಳಸುತ್ತೇವೆ. ಅವೇನು ಬಳಸುತ್ತವೇ? ಗೆದ್ದವರಿಗೆ ಪದವಿ ಗಿದವಿ ಏನಾದರೂ ದಕ್ಕುತ್ತದೆಯೇ? ಹೀಗೆಲ್ಲಾ ಯೋಚನೆ ಮಾಡುವ ಮುನ್ನವೇ ಸ್ಪಷ್ಟ ಪಡಿಸಿಬಿಡುತ್ತೇವೆ. ಮೊದಲನೆಯದಾಗಿ ಮತದಾನ ನಡೆಸುವುದು ಆಫ್ರಿಕನ್‌ ಎಮ್ಮೆಗಳು. ಅವು ಮತದಾನ ನಡೆಸುವುದು ಪದವಿ ಪಡೆಯಲು ಅಲ್ಲವೇ ಅಲ್ಲ. ಬ್ಯಾಲೆಟ್‌ ಪೇಪರ್‌ ಅಥವಾ ಇ.ವಿ.ಎಂ.ನ ಅವಶ್ಯಕತೆ ಅವುಗಳಿಗೆ ಇಲ್ಲ. ಅವು ಮತದಾನ ನಡೆಸುವುದು ಯಾವ ದಿಕ್ಕಿನೆಡೆ ಮೇವು ಅರಸುತ್ತಾ ಪ್ರಯಾಣ ಹೊರಡಬೇಕು ಎನ್ನುವುದರ ಬಗ್ಗೆ. ಯಾವ ದಿಕ್ಕಿನೆಡೆ ತಮ್ಮ ಗುಂಪು ಹೋಗಬೇಕೆಂದು ಅವಕ್ಕೆ ಅನ್ನಿಸುತ್ತದೆಯೋ ಆಯಾ ದಿಕ್ಕಿನೆಡೆ ಮುಖ ಮಾಡಿ ಕಲ್ಲಿನಂತೆ ನಿಂತುಬಿಡುತ್ತವೆ. ತಮ್ಮ ಸಹಚರರು ಮೆಜಾರಿಟಿಯಲ್ಲಿ ಯಾವ ದಿಕ್ಕಿನೆಡೆ ಮುಖ ಮಾಡಿ ನಿಂತಿರುವರೋ ಆ ದಿಕ್ಕಿನೆಡೆ ಎಮ್ಮೆಗಳು ಪ್ರಯಾಣ ಹೊರಡುತ್ತವೆ. ಇದನ್ನೇ “ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಎಂದು ಹೇಳುವುದು. ಧ್ವನಿವರ್ಧಕಗಳ ಭರಾಟೆಯಿಲ್ಲ, ಪ್ರಚಾರದ ಕೂಗುಗಳಿಲ್ಲ, ಕರಪತ್ರಗಳನ್ನು ಹಂಚುವುದಿಲ್ಲ. ಸೈಲೆಂಟಾಗಿ ಮತದಾನ ನಡೆದೇ ಹೋಗಿಬಿಡುತ್ತದೆ. ಗೆದ್ದ ಎಮ್ಮೆಗಳು ಸಂಭ್ರಮಾಚರಣೆಯನ್ನೂ ಮಾಡುವುದಿಲ್ಲ. ಎಲ್ಲವೂ ಬಹುಸಂಖ್ಯಾತರ ಅಭಿಪ್ರಾಯವನ್ನು ಗೌರವಿಸಿ ಅದರಂತೆ ನಡೆದುಕೊಂಡು ಬಿಡುತ್ತವೆ.

ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.