ಮಣ್ಣುಪಾಲಾದ ಕಾಳು ಕಡ್ಡಿಗಳು!


Team Udayavani, Oct 17, 2019, 5:32 AM IST

f-10

ಆನಂದವನ ಎಂಬ ಕಾನನವು ಬಲು ಸುಂದರವಾಗಿತ್ತು. ಅಲ್ಲಿನ ಅರಳಿ ಮರದ ಮೇಲೆ ಬಲಿಜ ಮತ್ತು ಸಮುರ ಎಂಬ ಎರಡು ಪಕ್ಷಿಗಳು ಬೇರೆ ಬೇರೆ ಗೂಡುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದವು. ಎರಡೂ ಪಕ್ಷಿಗಳು ಅನ್ಯೋನ್ಯವಾಗಿ ಜೀವಿಸುತ್ತಿದ್ದವು. ಅವೆರಡೂ ಒಟ್ಟಿಗೆ ಆಹಾರ ಹುಡುಕಲು ತೆರಳುತ್ತಿದ್ದವು. ಬಲಿಜ ಮತ್ತು ಸಮುರ ಪಕ್ಷಿ ಎರಡರ ನಡುವೆ ಒಂದು ವ ಯತ್ಯಾಸವಿತ್ತು. ಸಮುರ ಪಕ್ಷಿಗೆ ಆಹಾರವನ್ನು ಕೂಡಿಡುವ ಅಭ್ಯಾಸವಿತ್ತು. ಆದರೆ ಬಲಿಜ ಪಕ್ಷಿ ಅಂದಿನ ದಿನಕ್ಕಾಗುವಷ್ಟು ಮಾತ್ರವೇ ಆಹಾರ ತರುತ್ತಿತ್ತು. ಮುಂದೇನಾದರೂ ತುರ್ತು ಸಂದರ್ಭ ಬಂದಾಗ ಬೇಕಾಗುತ್ತದೆ ಎಂದು ಸಮುರ ಆಹಾರವನ್ನು ಸಂಗ್ರಹಿಸುತ್ತಿತ್ತು. ಆದರೆ ಬಲಿಜ ಪಕ್ಷಿ “ಉಳಿತಾಯ ಮಾಡುವ ಅವಶ್ಯಕತೆ ಏನಿದೆ. ನಮಗೆ ಯಾವಾಗ ಬೇಕಾದರೂ ಆಹಾರ ಸಿಗುತ್ತಿದೆಯಲ್ಲವಾ!’ ಎಂದು ನಕ್ಕಿತ್ತು.

ಕೆಲವು ದಿನಗಳ ನಂತರ ಮಳೆಗಾಲ ಪ್ರಾರಂಭವಾಯಿತು. ಜೋರಾಗಿ ಗಾಳಿ ಬೀಸಿದ್ದರಿಂದ ಸಮುರ ಸಂಗ್ರಹಿಸಿದ್ದ ಕಾಳು ಕಡ್ಡಿಗಳು ನೆಲಕ್ಕೆ ಚೆಲ್ಲಿ ಮಣ್ಣುಪಾಲಾದವು. ಸಮುರ ಪಕ್ಷಿಗೆ ತುಂಬಾ ನೋವಾಯಿತು. “ಛೇ, ನಾನು ಮಾಡಿದ ಶ್ರಮವೆಲ್ಲ ವ್ಯರ್ಥವಾಯಿತಲ್ಲ’ ಎಂದು ನೊಂದುಕೊಂಡಿತು. ಗಾಯದ ಮೇಲೆ ಬರೆ ಎಳೆಯುವಂತೆ ಬಲಿಜ ಪಕ್ಷಿಯು “ನನ್ನ ಮಾತನ್ನು ನೀನೆಲ್ಲಿ ಕೇಳುತ್ತೀಯಾ. ಈಗ ನೋಡು ನೀನು ಸಂಗ್ರಹಿಸಿದ್ದ ಎಲ್ಲಾ ಕಾಳುಗಳು ಮಣ್ಣು ಸೇರಿವೆ. ನಿನ್ನ ಶ್ರಮವೆಲ್ಲಾ ವ್ಯರ್ಥವಾಯಿತು’ ಎಂದು ಅಣಕಿಸಿತು. ಆದರೂ ಸಮುರ ತಾನು ಕಾಳು ಕಡ್ಡಿ ಸಂಗ್ರಹಿಸುವ ಅಭ್ಯಾಸವನ್ನು ಬಿಡಲಿಲ್ಲ.

ಕೆಲವು ದಿನಗಳ ಅಚ್ಚರಿ ಜರುಗಿತು. ಮಣ್ಣು ಸೇರಿದ್ದ ಕಾಳು ಕಡ್ಡಿಗಳೆಲ್ಲಾ ಚಿಗುರೊಡೆದು ಸಸಿಗಳಾಗಿದ್ದವು. ತಿಂಗಳುಗಳು ಕಳೆಯುತ್ತಿದ್ದಂತೆಯೇ ಅವು ಮರವಾಗಿ ಬೆಳೆದು ನಿಂತವು. ಬಿರುಗಾಳಿ ಮಳೆ ಬಂದಾಗಲೂ ಬಲಿಜ, ಸಮುರ ವಾಸವಿದ್ದ ಅರಳಿ ಮರಕ್ಕೆ ಅದು ಸೋಕಲಿಲ್ಲ. ಬೆಳೆದಿದ್ದ ಮರಗಳು ರಕ್ಷಣೆಯನ್ನು ಒದಗಿಸಿದವು. ಸಮುರ ಪಕ್ಷಿಗೆ ಇದನ್ನು ಕಂಡು ತುಂಬಾ ಸಂತೋಷವಾಯಿತು. ತನ್ನ ಶ್ರಮ ವ್ಯರ್ಥವಾಗಲಿಲ್ಲ ಎಂದುಕೊಂಡಿತು. ಬಲಿಜ ಪಕ್ಷಿಗೂ ಕೂಡಿಡುವಿಕೆಯ ಮಹತ್ವ ಅರ್ಥವಾಯಿತು. ಅದು “ಶ್ರಮಕ್ಕೆ ಯಾವತ್ತೂ ಪ್ರತಿಫ‌ಲ ಸಿಕ್ಕೇ ಸಿಗುತ್ತದೆ ಎಂಬುದನ್ನು ನೀನು ಸಾಬೀತು ಮಾಡಿದೆ’ ಎಂದು ಸಮುರ ಪಕ್ಷಿಯನ್ನು ಅಭಿನಂದಿಸಿತು.

– ವೆಂಕಟೇಶ ಚಾಗಿ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.