ಹಾಳು, ಪಾಳು ಜಾಗದಲ್ಲಿ ಪಾಳು ಅಂಬರಗುಬ್ಬಿ


Team Udayavani, Sep 2, 2017, 12:36 PM IST

14.jpg

 ಮರಿಮಾಡುವ ಸಮಯದಲ್ಲಿ ತನ್ನ ಸಂಗಾತಿಯನ್ನು ಕರೆಯಲು ಇದು ಚೀ ಕಾರದಲ್ಲಿ ಕೂಗುವುದು. ಮಣ್ಣಿನ ಅರ್ಧವರ್ತುಲಾಕಾರದ ಗೂಡು ಕಟ್ಟಿ ಅದರ ಮೇಲೆ ಹಕ್ಕಿಗಳ ಪುಕ್ಕ ಮತ್ತು ಒಣ ಹುಲ್ಲಿನ ಹಾಸಿಗೆ ಮಾಡಿ ಅಲ್ಲಿ 2-4 ಬಿಳಿಬಣ್ಣದ ಮೊಟ್ಟೆ ಇಡುತ್ತದೆ.  

ಇದು ಗುಬ್ಬಚ್ಚಿ ಗಾತ್ರದ ಚಿಕ್ಕ ಹಕ್ಕಿ.DUSKY CRAG MARMARTIN  (Hirundo concolor )  R -Sparrow +  ಕೋಟೆ ಕೊತ್ತಲು, ಹಾಳುಬಿದ್ದ ಕಟ್ಟಡ, ಕಲ್ಲು ಬಂಡೆಗಳ ಬಿರುಕು,  ಪಾಳು ದೇವಾಲಯ, ಚರ್ಚುಗಳ ಗೋಡೆ ಸಂದಿನಲ್ಲಿಯೇ ಹೆಚ್ಚಾಗಿ ವಾಸಿಸುವುದರಿಂದ ಇದರ ವಾಸಸ್ಥಾನ ಇರುನೆಲೆ ಗಮನಿಸಿ ಇದಕ್ಕೆ ಪಾಳು ಅಂಬರಗುಬ್ಬಿ ಎಂದು ಕರೆಯಲಾಗಿದೆ. ಇದರ ದೇಹದ ಬಣ್ಣ  ಕಪ್ಪು.  

ಆಕಾಶ ಮಧ್ಯದಲ್ಲಿ ಹಾರುವ ಚಿಕ್ಕ ಕ್ರಿಮಿ, ನುಸಿ ಹಾಗೂ ಮಳೆ ಹುಳ, ರೆಕ್ಕೆ ಹುಳಗಳನ್ನು ಮಾರ್ಗ ಮಧ್ಯದಲ್ಲೇ ಹಿಡಿದು ತಿನ್ನುವ ಚಾಕಚಕ್ಯತೆ  ಇದಕ್ಕಿದೆ.  ಅತಿ ವೇಗವಾಗಿ ಮೇಲೆ, ಕೆಳಗೆ , ತಿರುಗಿ, ಇಲ್ಲವೇ ಛ‌ಕ್ಕನೆ ದಿಕ್ಕು ಬದಲಿಸಿ, ವೇಗ ನಿಯಂತ್ರಿಸಿ ಹಾರುತ್ತದೆ.  ಸಾಮಾನ್ಯವಾಗಿ ಈ ಹಕ್ಕಿ ಭಾರತದ ತುಂಬೆಲ್ಲಾ ಇದೆ. ಆದರೆ ಈ ಎಲ್ಲಾ ಉಪಜಾತಿಯ ಹಾರುವ ವಿಧಾನ, ಗೂಡು ಕಟ್ಟುವ ಪರಿ, ಗೂಡಿಗೆ ಸ್ಥಳಗಳ ಆಯ್ಕೆ, ಕೂಗಿನ ವೈವಿಧ್ಯತೆಗಳಿವೆ.  ಗೂಡನ್ನು ಕಟ್ಟಲು ಕೆಲವು ತಳಿಗಳು ಮಣ್ಣನ್ನು ಬಳ‌ಸುತ್ತವೆ.

ಗೂಡಿನ ಮೇಲೆ ದೊಡ್ಡ ಇರುವೆಗಳೂ ವಾಸಿಸುವುದುಂಟು.
 ಗುಬ್ಬಚ್ಚಿ ಗಾತ್ರದ ಈ ಚಿಕ್ಕ ಹಕ್ಕಿ 13 ಸೆಂ.ಮೀ ದಪ್ಪ ಇದೆ. ಇದಕ್ಕೆ ಮೀನಿನ ಬಾಲದಂತೆ ತ್ರಿಕೋನಾಕೃತಿಯ ಬಾಲ ಇದೆ.  ಬಾಲದ ಬದಿಯಗರಿ ಮತ್ತು ಮಧ್ಯದ ಗರಿಗಳ ಮೇಲೆ ಬಿಳಿ ಚುಕ್ಕೆ ಇಲ್ಲ. ತ್ರಿಕೋನಾಕಾರದ ಬಾಲದ ಇತರ ಗರಿಗಳ ಮೇಲೆ ವೃತ್ತಾಕಾರದ ಬಿಳಿ ಚುಕ್ಕೆ ಇದನ್ನು ಗುರುತಿಸಲು ಸಹಾಯಕವಾಗಿದೆ. 

ಪುಟ್ಟಕಾಲು ಇದ್ದು ಆಸರೆಗಾಗಿ ಹಿಡಿಯಲು ಮಾತ್ರ ಸಹಾಯಕವಾಗಿದೆ. ಈ ಹಕ್ಕಿಯ ಹೊಟ್ಟೆಯ ಭಾಗ ತಿಳಿ ಕಂದು ಮಿಶ್ರಿತ ಮಾಸಲು ಬಿಳಿ ಬಣ್ಣ. 

ಸುಮಾರು 1850ರಿಂದಲೇ ಈ ಹಕ್ಕಿಯ ಕುರಿತು ಅಧ್ಯಯನ ಆರಂಭವಾಗಿದೆ.  ಇದರ ಗೂಡು ಹೊರಗಡೆ ಮಣ್ಣಿನ ಮುತ್ತನ್ನು -ಒಂದರ ಪಕ್ಕ ಒಂದು ಅಂಟಿಸಿದಂತೆ ಕಾಣುತ್ತದೆ. ಇದರ ಗೂಡು ತಾರಸಿಗೆ ಮುಖವಾಗಿ ಪಕ್ಕದ ಜಂತಿಯ ಹತ್ತಿರ ಒಂದು ಅಥವಾ 2 ಇಂಚು ಕೆಳಗಿರುತ್ತದೆ. 

ಇಂಥದ್ದನ್ನೇ ಹೋಲುವ ಇನ್ನೊಂದು ತಳಿ ಭಾರತಕ್ಕೆ ಚಳಿಗಾಲದಲ್ಲಿ ವಲಸೆಬರುತ್ತದೆ. 
ಭಾರತದ ತಳಿ ಚೀ, ಚೀ, ಚಿರಮ್‌ ಎಂದು ಚೀರಿದಂತೆ ಮೆಲುದನಿಯಲ್ಲಿ ಕೂಗುತ್ತದೆ. ಮರಿಮಾಡುವ ಸಮಯದಲ್ಲಿ ತನ್ನ ಸಂಗಾತಿಯನ್ನು ಕರೆಯಲು ಇದು ಚೀ ಕಾರದಲ್ಲಿ ಕೂಗುವುದು. ಮಣ್ಣಿನ ಅರ್ಧವರ್ತುಲಾಕಾರದ ಗೂಡು ಕಟ್ಟಿ ಅದರ ಮೇಲೆ ಹಕ್ಕಿಗಳ ಪುಕ್ಕ ಮತ್ತು ಒಣ ಹುಲ್ಲಿನ ಹಾಸಿಗೆ ಮಾಡಿ ಅಲ್ಲಿ 2-4 ಬಿಳಿಬಣ್ಣದ ಮೊಟ್ಟೆ ಇಡುತ್ತದೆ.  ನೆಲದಿಂದ ಸುಮಾರು 30 ಅಡಿ ಎತ್ತರದಲ್ಲಿ ಇದು ಗೂಡನ್ನು ಕಟ್ಟುತ್ತದೆ. ಇದರ ಗೂಡಿನ ಬಾಯಿ 13 ಎಂ.ಎಂ ಅಗಲ ಇರುತ್ತದೆ.  ಇದರ ಮೊಟ್ಟೆ 1.57ಗ್ರಾಂ. ಗಂಡು -ಹೆಣ್ಣು ಆಕಾರ ಮತ್ತು ಬಣ್ಣದಲ್ಲಿ ಒಂದೇರೀತಿಯಾಗಿರುತ್ತದೆ. ಗೂಡು ಕಟ್ಟುವುದು ಮರಿಗಳಿಗೆ ಗುಟುಕು ನೀಡುವುದು ಮುಂತಾದ ಕಾರ್ಯದಲ್ಲಿ ಗಂಡು-ಹೆಣ್ಣು ಭಾಗಿಯಾಗುತ್ತವೆ.   ಒಂದು ಅಧ್ಯಯನದ ಪ್ರಕಾರ 60 ಸಾವಿರ ಕಿ,ಮೀ ದೂರವನ್ನು ಇದು ನಿಲ್ಲದೇ ಹಾರುವ ಸಾಮರ್ಥಯಹೊಂದಿದೆಯಂತೆ. ಕರ್ನಾಟಕವಷ್ಟೇ ಅಲ್ಲ,  ತಮಿಳು ನಾಡಿನಲ್ಲೂ ಈ ಹಕ್ಕಿ ಇದೆ. 

ಟಾಪ್ ನ್ಯೂಸ್

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.