ಹಂಪೆಯ ಮೇಲೆ ಹಾರಾಡುತ್ತ…


Team Udayavani, Nov 4, 2017, 2:06 PM IST

368.jpg

ನೋಡಿದಷ್ಟೂ ಮುಗಿಯದ ವೈಶಿಷ್ಟ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವುದು ಹಂಪೆ. ಹತ್ತಾರುಬಾರಿ ನೋಡಿದ ನಂತರವೂ, ಬಿಸಿಲಲ್ಲಿ ತಿರುಗಿ ತಿರುಗಿ ಸುಸ್ತಾದ ಗಳಿಗೆಯಲ್ಲೂ ಸಾಕಪ್ಪ ಹಂಪೆಯ ಸಹವಾಸ! ಎಂದು ಒಮ್ಮೆ ಕೂಡ ಅನ್ನಿಸದಿರಲು ಕಾರಣ ಇದೇ ಇರಬೇಕು.

ಹೀಗೆ ಹಂಪೆಯ ಹೆಗ್ಗುರುತುಗಳನ್ನೆಲ್ಲ ಹಲವು ಸಲ ನೋಡಿದ್ದಾದಮೇಲೆ ಅವೆಲ್ಲ ಏಕೋ ಬಿಡಿ ದೃಶ್ಯಗಳಂತೆ ಕಾಣಲು ಶುರುವಾಯಿತು. ಹಂಪೆಯ ಇಡೀ ಪ್ರದೇಶದ ಚಿತ್ರಣವನ್ನು ಒಟ್ಟಾಗಿ ನೋಡುವ ಅವಕಾಶ ಸಿಗಬಾರದೇಕೆ ಎನ್ನುವ ಪ್ರಶ್ನೆಯೂ ಮನಸಿನಲ್ಲಿ ಮೂಡಿತು. ಇದೇ ಪ್ರಶ್ನೆಯನ್ನು ಹೊತ್ತು ಮತಂಗ ಪರ್ವತ, ಅಂಜನಾದ್ರಿ ಬೆಟ್ಟಗಳನ್ನು ಹತ್ತಿದ್ದಾಯಿತು. ಅಲ್ಲಿಂದ ಸಾಕಷ್ಟು ದೊಡ್ಡ ಪ್ರದೇಶಗಳ ವಿಹಂಗಮ ನೋಟ ಒಂದೇ ಬಾರಿಗೆ ಕಾಣಲು ದೊರಕಿತಾದರೂ ಅದೇಕೋ ಹಂಪೆಯ ಪೂರ್ಣರೂಪ ಎನ್ನುವ ಭಾವನೆ ತಂದುಕೊಡಲಿಲ್ಲ.

ಈ ಯೋಚನೆಯಲ್ಲಿದ್ದ ಸಂದರ್ಭದಲ್ಲೇ  ಕೇಳಸಿಕ್ಕಿದ್ದು ಹಂಪೆ ಮೇಲೆ ಹಾರಾಡುವ ಅವಕಾಶ ಸೃಷ್ಟಿಯಾದ ಸುದ್ದಿ. ಲಂಕೆಯಿಂದ ಸೀತಾದೇವಿಯೊಡನೆ ಮರಳುವಾಗ ಭಗವಾನ್‌ ಶ್ರೀರಾಮನ ಪುಷ್ಪಕ ವಿಮಾನ ಕಿಷ್ಕಿಂಧೆ, ಅಂದರೆ ಇಂದಿನ ಹಂಪೆಗೂ ಬಂದಿತ್ತಂತೆ. ಈಗ ಪುಷ್ಪಕವಿಮಾನ ಇಲ್ಲದಿರುವುದರಿಂದ ನಮ್ಮಂತಹ ಹುಲುಮಾನವರನ್ನೂ ಹಾರಿಸಲು ಹಂಪೆಯತ್ತ ಬಂದಿಳಿದದ್ದು ಹೆಲಿಕಾಪ್ಟರು.

ಮಕ್ಕಳಿಂದ ದೊಡ್ಡವರ ತನಕ ಹೆಲಿಕಾಪ್ಟರ್‌ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ವಿಮಾನದ ಹೋಲಿಕೆಯಲ್ಲಿ ಅಷ್ಟು ಚಿಕ್ಕದಾಗಿರುವ ಯಂತ್ರ ಹಾರುತ್ತದೆಂದೋ, ವಿಮಾನಯಾನದಷ್ಟು ಸುಲಭಲಭ್ಯವಲ್ಲವೆಂದೋ – ಯಾವುದೋ ಒಂದು ಕಾರಣದಿಂದ ನಮ್ಮ ಮನಸಿನಲ್ಲಿ ವಿಮಾನಕ್ಕೂ ಇಲ್ಲದ ವಿಶೇಷ ಸ್ಥಾನ ಹೆಲಿಕಾಪ್ಟರುಗಳಿಗೆ ದೊರೆತಿದೆ.

ಹೆಲಿಕಾಪ್ಟರ್‌ ಹಾರಾಟದ ಅನುಭವ ಪಡೆಯುವುದು, ಆಕಾಶದಿಂದ ಹಂಪೆ ಹೇಗೆ ಕಾಣುತ್ತದೆಂದು ನೋಡುವುದು ಮತ್ತು ಆ ಅನುಭವದ ಕೆಲಭಾಗವನ್ನಾದರೂ ಛಾಯಾಚಿತ್ರಗಳಲ್ಲಿ ಸೆರೆಹಿಡಿಯುವುದು – ಇಷ್ಟು ಉದ್ದೇಶ ಇಟ್ಟುಕೊಂಡು ನಾನೂ ಹೆಲಿಕಾಪ್ಟರ್‌ ಹತ್ತುವ ಯೋಚನೆ ಮಾಡಿದೆ.

ಇಷ್ಟೆಲ್ಲ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಆಲೋಚನೆಗಿದ್ದ ಅಡ್ಡಿ ಒಂದೇ – ಅದು ಸಮಯ. ವಿಮಾನಯಾನದಂತೆ ಹೆಲಿಕಾಪ್ಟರ್‌ ಪ್ರಯಾಣವೂ ಸಾಕಷ್ಟು ದುಬಾರಿ; ಹೀಗಾಗಿ ಕೈಗೆಟುಕುವ ಬೆಲೆಯಲ್ಲಿ (ಸುಮಾರು ಎರಡು ಸಾವಿರ ರೂಪಾಯಿ) ಅದರ ಅನುಭವ ಒದಗಿಸಲು ಆಯೋಜಕರು ಪ್ರಯಾಣದ ಅವಧಿಯನ್ನು ಕಡಿಮೆಮಾಡುವುದು ಸಾಮಾನ್ಯ. ಇದರ ಪರಿಣಾಮ – ಹಂಪೆಯಲ್ಲಿ ಹೆಲಿಕಾಪ್ಟರ್‌ ಪ್ರಯಾಣಕ್ಕೆ ದೊರೆತ ಸಮಯ ಬರೀ ಹತ್ತು ನಿಮಿಷ!

ಹೆಲಿಕಾಪ್ಟರ್‌ ಹಾರಾಟದ ಅನುಭವ ಪಡೆಯಲು, ಹಂಪೆ ಆಕಾಶದಿಂದ ಹೇಗೆ ಕಾಣುತ್ತದೆಂದು ನೋಡಲು ಇಷ್ಟು ಸಮಯ ಸಾಕು. ಇವೆರಡರ ಜೊತೆಗೆ ಫೋಟೋ ತೆಗೆಯುವ ಕೆಲಸವೂ ಸೇರಿದಾಗ ಮಾತ್ರ ಗೊಂದಲ ಶುರುವಾಗುತ್ತದೆ. ಹೆಲಿಕಾಪ್ಟರ್‌  ಒಳಗೆ ಏನೆಲ್ಲ ಇದೆಯೆಂದು ನೋಡುವುದು, ಕಿಟಕಿಯಿಂದಾಚೆಗಿನ ದೃಶ್ಯಗಳನ್ನು ನೋಡುವುದೋ, ಅದರ ಫೋಟೋ ತೆಗೆಯಲು ಪ್ರಯತ್ನಿಸುವುದೋ?

ಸರಿಸುಮಾರು ಸಮತಟ್ಟಾಗಿರುವ ಯಾವುದೇ ಜಾಗದಿಂದ ಹೆಲಿಕಾಪ್ಟರ್‌ ಹಾರಬಲ್ಲದು. ಅಲ್ಲದೆ ಒಮ್ಮೆಗೆ ಹೆಲಿಕಾಪ್ಟರಿನಲ್ಲಿ ಹಾರಬಹುದಾದ ಪ್ರಯಾಣಿಕರ ಸಂಖ್ಯೆಯೂ ಕಡಿಮೆ. ಹೀಗಾಗಿ ಹೆಲಿಕಾಪ್ಟರ… ಹತ್ತುವುದು ಏರೋಪ್ಲೇನ್‌ ಹತ್ತುವುದಕ್ಕಿಂತ ಸುಲಭ. ಇನ್ನು ನನ್ನ ಕ್ಯಾಮೆರಾ ನೋಡಿಯೋ ಏನೋ ಸಹಪ್ರಯಾಣಿಕರು ಕಿಟಕಿಬದಿಯ ಸೀಟು ಬಿಟ್ಟುಕೊಟ್ಟಿದ್ದರಿಂದ ಫೋಟೋ ತೆಗೆಯಲು ಆಗುತ್ತೋ ಇಲ್ಲವೋ ಎಂಬ ಆತಂಕವೂ ಕೊನೆಯಾಯಿತು. ಜೊತೆಯಲ್ಲಿದ್ದ ಗೆಳೆಯನಿಗಂತೂ ಪೈಲಟ… ಪಕ್ಕದ ಸೀಟೇ ಸಿಕ್ಕಿಬಿಟ್ಟಿತ್ತು!

ವಿಮಾನದ ಟೇಕ್‌  ಆಫ್  ಹೋಲಿಕೆಯಲ್ಲಿ ಹೆಲಿಕಾಪ್ಟರ್‌ ಟೇಕ್‌ ಆಫ್ ಬಹಳ ಕ್ಷಿಪ್ರ. ಒಳಗೆ ಕುಳಿತು ಆಚೀಚೆ ನೋಡುವುದರೊಳಗೆ ಜೋರು ಶಬ್ದದೊಡನೆ ನಮ್ಮ ಹೆಲಿಕಾಪ್ಟರ… ಆಕಾಶಕ್ಕೆ ಏರಿಯೇಬಿಟ್ಟಿತ್ತು. ಮೊದಲೇ ರಮಣೀಯವಾದ ಹಂಪೆಯ ಪರಿಸರ ಆಕಾಶದಿಂದ ಇನ್ನೂ ಚೆಂದಕ್ಕೆ ಕಾಣುತ್ತಿತ್ತು. ಅಲ್ಲಲ್ಲಿ ಚದುರಿದಂತಿದ್ದ ಅವಶೇಷಗಳು, ದೇವಾಲಯಗಳು, ರಸ್ತೆ-ಮನೆಗಳು, ಹಸಿರು ತೋಟಗಳು, ಬೆಟ್ಟಗುಡ್ಡಗಳು, ಹಿನ್ನೆಲೆಯಲ್ಲಿ ತುಂಗಭದ್ರೆ ಎಲ್ಲವೂ ಸೇರಿ ಹೊಸದೊಂದು ಜಗತ್ತೇ ನಮ್ಮೆದುರು ತೆರೆದುಕೊಂಡಿದ್ದು ನಿಜಕ್ಕೂ ಮರೆಯಲಾಗದ ಅನುಭವ. 

ಹಂಪೆಯ ಹಲವು ಹೆಗ್ಗುರುತುಗಳ ಸುತ್ತ ರೂಪಿಸಲಾಗಿರುವ ಹೂದೋಟ ಹಾಗೂ ಹುಲ್ಲುಹಾಸುಗಳಂತೂ ನೆಲದ ಮೇಲೆ ಯಾರೋ ಕಾಪೆìಟ… ಹಾಸಿ ಹೋದಂತೆ ಕಾಣುತ್ತಿತ್ತು. ಹಿಂದೊಮ್ಮೆ ಕಷ್ಟಪಟ್ಟು ಹತ್ತಿದ್ದ ಅಂಜನಾದ್ರಿ ಬೆಟ್ಟ ಮೇಲಿನಿಂದ ಪುಟಾಣಿಯಾಗಿ ಕಂಡಿದ್ದು ತಮಾಷೆಯೆನಿಸಿತು. ನೆಲದ ಮೇಲಿಂದ ಈಗಲೂ ಭವ್ಯವಾಗಿಯೇ ಕಾಣುವ ವಿಜಯವಿಠಲ ದೇಗುಲ ಆವರಣದ ಕಟ್ಟಡಗಳಿಗೆ ನಿಜಕ್ಕೂ ಎಷ್ಟು ಹಾನಿಯಾಗಿದೆ ಎನ್ನುವುದು ಆಕಾಶದಿಂದ ಕಂಡು ವಿಷಾದವೂ ಆಯಿತು.

ಇದನ್ನೆಲ್ಲ ನೋಡುತ್ತಿರುವಂತೆಯೇ ಫೋಟೋ ತೆಗೆಯುವ ಪ್ರಯತ್ನಗಳೂ ಚಾಲ್ತಿಯಲ್ಲಿದ್ದವು. ಚಲಿಸುವ ವಾಹನದಿಂದ ಫೋಟೋ ತೆಗೆಯುವುದು ಯಾವತ್ತಿಗೂ ಸವಾಲಿನ ಕೆಲಸ. ಕಾರು ಬಸ್ಸುಗಳಲ್ಲಿ ಕಾಡುವ ರಸ್ತೆ ಗುಂಡಿಯ ಸಮಸ್ಯೆ ಇರಲಿಲ್ಲ ಎನ್ನುವುದೊಂದೇ ಈ ಬಾರಿ ಗಮನಕ್ಕೆ ಬಂದ ವ್ಯತ್ಯಾಸ. ಪರಿಣತ ಛಾಯಾಗ್ರಾಹಕರು ಇಂತಹ ಸಂದರ್ಭಗಳಲ್ಲೂ ತಮಗೆ ಬೇಕಾದ ಹೊಂದಾಣಿಕೆಗಳನ್ನು (ಮ್ಯಾನ್ಯುಯಲ… ಸೆಟ್ಟಿಂಗÕ…) ಮಾಡಿಕೊಳ್ಳುತ್ತಾರೋ ಏನೋ, ಆದರೆ ನಾನು ಮಾತ್ರ ರಿಸ್ಕ… ತೆಗೆದುಕೊಳ್ಳದೆ ‘ಆಟೋ’ ಆಯ್ಕೆಯ ಮೊರೆಹೊಕ್ಕೆ.

ಪಟಪಟನೆ ಕ್ಲಿಕ್ಕಿಸುತ್ತ ಹೋದಂತೆ ಚಿತ್ರಗಳು ಕ್ಯಾಮೆರಾ ಮೆಮೊರಿಯಲ್ಲಿ ಸೆರೆಯಾಗುತ್ತಲೇ ಹೋದವು. ಕಿಟಕಿ ಗಾಜಿನ ಪ್ರತಿಫ‌ಲನದಿಂದ ಒಂದಷ್ಟು, ಫ್ರೆàಮಿನೊಳಕ್ಕೆ ಅತಿಕ್ರಮ ಪ್ರವೇಶ ಮಾಡಿದ ಹೆಲಿಕಾಪ್ಟರ್‌ ರೆಕ್ಕೆಗಳಿಂದ ಒಂದಷ್ಟು ಚಿತ್ರಗಳು ಹಾಳಾದವಾದರೂ ಪ್ರಯಾಣ ಮುಗಿಸಿ ಮತ್ತೆ ನೆಲಮುಟ್ಟುವಷ್ಟರಲ್ಲಿ ಅಂದು ಕಂಡ ಬಹುತೇಕ ದೃಶ್ಯಗಳು ಕ್ಯಾಮೆರಾ ಮೆಮೊರಿಯಲ್ಲಿ ಸೆರೆಯಾದವು.

ಆದರೂ ಇವೆಲ್ಲದಕ್ಕಿಂತ ಮನಸಿನ ಕ್ಯಾಮೆರಾನೇ ವಾಸಿ ಬಿಡಿ. ಅದರಲ್ಲಿ ಸೆರೆಯಾಗುವ ಚಿತ್ರಗಳಿಗೆ ಯಾವ ಗಾಜೂ ಅಡ್ಡಿಯಾಗದು, ಯಾವ ಹೆಲಿಕಾಪ್ಟರ್‌ ರೆಕ್ಕೆಗೂ ಆ ದೃಶ್ಯಗಳನ್ನು ಕೆಡಿಸುವ ಧೈರ್ಯ ಬಾರದು!

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.