ಬಾಹುಬಲಿ ಕನ್ಫ್ಯೂಶನ್: ಮಗಳು ಹೀರೋಯಿನ್ ಆದಾಗ
Team Udayavani, Aug 4, 2017, 8:21 AM IST
“ನಿಜ ಹೇಳಬೇಕೆಂದರೆ ಇದು ನನ್ನ ಜಾನರ್ನ ಸಿನಿಮಾ ಅಲ್ಲ …’
ಹೀಗೆಂದರು ನಟ ಸಂಚಾರಿ ವಿಜಯ್. ಅವರು ಹೀಗೆ ಹೇಳಲು ಕಾರಣ “ನನ್ ಮಗಳೇ ಹೀರೋಯಿನ್’ ಚಿತ್ರ. “ನನ್ ಮಗಳೇ ಹೀರೋಯಿನ್’ ಚಿತ್ರ ಕಾಮಿಡಿ ಜಾನರ್ಗೆ ಸೇರಿದ ಚಿತ್ರ. ಸಂಚಾರಿ ವಿಜಯ್ ಸೀರಿಯಸ್ ನಟ. ಈವರೆಗೆ ಇಂತಹ ಪಾತ್ರ ಮಾಡಿಲ್ಲ. ಹೀಗಿರುವಾಗ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ಹಾಗಾಗಿಯೇ ಸಂಚಾರಿ ವಿಜಯ್ ಇದು ನನ್ನ ಜಾನರ್ನ ಸಿನಿಮಾವಲ್ಲ ಅಂದಿದ್ದು. “ನನಗೆ ಈ ತರಹದ ಪಾತ್ರ ತುಂಬಾ ಹೊಸದು. ನನ್ನನ್ನು ನಂಬಿ ನಿರ್ದೇಶಕರು ಈ ಪಾತ್ರ ಕೊಟ್ಟರು. ಈಗ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಅನೇಕ ನಟ-ನಟಿಯರಿಗೆ ತೋರಿಸಿದೆವು. ನೋಡಿದವರೆಲ್ಲರೂ ಹೊಸ ತರಹದ ಕಾಮಿಡಿ ಇದೆ, ವಿಭಿನ್ನವಾಗಿದೆ ಎಂದು ಪ್ರೋತ್ಸಾಹಿಸಿದರು. ಆ ಮಟ್ಟಿಗೆ ಒಂದಷ್ಟು ಹೊಸತನ್ನು ಇಲ್ಲಿ ಪ್ರಯತ್ನಿಸಿದ್ದೇವೆ. ಕನ್ನಡದ ಬಹುತೇಕ ಹಾಸ್ಯ ನಟರೆಲ್ಲ ಇಲ್ಲಿ ನಟಿಸಿದ್ದಾರೆ’ ಎಂದು ಹೇಳಿಕೊಂಡರು ಸಂಚಾರಿ ವಿಜಯ್.
ಈ ಚಿತ್ರವನ್ನು ಬಾಹುಬಲಿ ಎನ್ನುವವರು ನಿರ್ದೇಶಕರು. ಇವರ ಹೆಸರೇ ಬಾಹುಬಲಿ. ಚಿತ್ರದ ಟ್ರೇಲರ್ನಲ್ಲಿ ತಮ್ಮ ಹೆಸರನ್ನೇ ಫನ್ ಮಾಡುತ್ತಾ ಟ್ರೇಲರ್ ಕಟ್ ಮಾಡಿದ್ದಾರೆ. “ಬಾಹುಬಲಿ ಕನ್ಫ್ಯೂಶನ್’ ಎಂದೇ ಆರಂಭವಾಗುತ್ತದೆ ಟ್ರೇಲರ್. ತಮ್ಮ ಚೊಚ್ಚಲ ಪ್ರಯತ್ನವಾದ ಕಾಮಿಡಿ ಸಿನಿಮಾ ಬಗ್ಗೆ ಮಾತನಾಡುವಾಗ ನಿರ್ದೇಶಕ ಬಾಹುಬಲಿ ಭಾವುಕರಾದರು. ಅದಕ್ಕೆ ಕಾರಣ ಅವರ ಕನಸು ಇಂದು ತೆರೆಮೇಲೆ ಬರಲು ಸಿದ್ಧವಾಗಿರೋದು. “ನನ್ನ ಕನಸು ಇಂದು ತೆರೆಮೇಲೆ ಬರಲು ಸಿದ್ಧವಾಗಿದೆ. ಆದಕ್ಕೆ ನಾನೊಬ್ಬ ಕಾರಣನಲ್ಲ. ನನ್ನನ್ನು ನಂಬಿ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರು, ಪಾತ್ರಕ್ಕೆ ಜೀವ ತುಂಬಿದ ತಾಂತ್ರಿಕ ವರ್ಗ ಎಲ್ಲರೂ ಕಾರಣ. ನಮ್ಮ ಚಿತ್ರದ ಟ್ರೇಲರ್ ನೋಡಿ ಚಿತ್ರರಂಗದ ನಟ-ನಟಿಯರು ಖುಷಿಪಟ್ಟಿದ್ದಾರೆ. ಸದ್ಯ ಚಿತ್ರ ಡಿಟಿಎಸ್ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಇಡೀ ಫ್ಯಾಮಿಲಿ ನೋಡುವಂತಹ ಒಂದು ಮಜಾವಾದ ಸಿನಿಮಾ ಇದು’ ಎಂಬುದು ಅವರ ಮಾತು.
ನಿರ್ಮಾಪಕರಾದ ಅನ್ನದಾನಪ್ಪ ಹಾಗೂ ಮೋಹನ್ ಕುಮಾರ್ ಕೂಡಾ ಸಿನಿಮಾ ನಿರ್ಮಾಣ ಮಾಡಿದ ಖುಷಿ ಹಂಚಿಕೊಂಡರು.
ನಟಿ ಅಮೃತಾ ನಿರ್ದೇಶಕರ, ಕಥೆಯ ಮೇಲೆ ನಂಬಿಕೆ ಇಟ್ಟು ಈ ಸಿನಿಮಾ ಒಪ್ಪಿಕೊಂಡರಂತೆ. ಒಂದು ವೇಳೆ ಆ ಸಿನಿಮಾವನ್ನು ಮಿಸ್ ಮಾಡಿಕೊಳ್ಳುತಿದ್ದರೆ ಅದು ಅವರು ಮಾಡಿದ ದೊಡ್ಡ ತಪ್ಪಾಗುತ್ತಿತ್ತಂತೆ. ಇನ್ನು, ದೀಪಿಕಾ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ನಗಿಸುವ ಅವಕಾಶ ಸಿಕ್ಕಿದೆಯಂತೆ. ಚಿತ್ರದಲ್ಲಿ ನಟಿಸಿದ ವಿಜಯ್ ಚೆಂಡೂರ್ ಸೇರಿದಂತೆ ಇತರ ಕಲಾವಿದರು ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು. ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೆ ಹೇಳೋಣ ನಮ್ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್ಗಳು ತಾತ್ಕಾಲಿಕ ಸ್ಥಗಿತ
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು
Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್
Kangaroo; ಥ್ರಿಲ್ಲರ್ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು