ಎಲ್ಲಿದೆ ಮತ್ತು ಎಲ್ಲಿಲ್ಲ?
ಒಂದು ತಾವೊ ಅಥವಾ ದಾವ್ ಕತೆ
Team Udayavani, Feb 23, 2020, 5:33 AM IST
ಒಂದು ದಿನ ಮಧ್ಯಾಹ್ನ ಮರವೊಂದು ತಿಳಿಗಾಳಿಗೆ ತಾನೇ ತೂಗಿಕೊಳ್ಳುತ್ತ ನಿದ್ರಿಸುತ್ತಿತ್ತು. ಅಷ್ಟರಲ್ಲಿ ಮಹಾನ್ ಪಂಡಿತನಾದ ಡಾಂಗೌಜಿ ತನ್ನ ಸ್ನೇಹಿತನೊಡನೆ ಚಾಂಗ್ ತ್ಸು ಆಶ್ರಮಕ್ಕೆ ಭೇಟಿ ನೀಡಿದ. “ನೀವೆಲ್ಲ ಅದೇನೋ ತಾವೊ ತಾವೊ ಅನ್ನುತ್ತೀರಲ್ಲ. ಅವನ ತತ್ವಗಳನ್ನು ಅರಿಯುವುದಕ್ಕೆ ಮುನ್ನ ಅವನು ಎಲ್ಲಿದ್ದಾನೆ ಅಥವಾ ಅದು ಎಲ್ಲಿದೆ ಅಂತ ತೋರಿಸುತ್ತೀರಾ?’ ಎಂದು ಪ್ರಶ್ನಿಸಿದ. ಇಬ್ಬರೂ ಆಶ್ರಮದ ಹೊಸ್ತಿಲಿನ ಹೊರಗೆ ನಿಂತಿದ್ದರು.
“ಎಲ್ಲೆಲ್ಲಿಯೂ ಇದೆ’ ಎಂದು ಚಾಂಗ್ ತ್ಸು ಉತ್ತರಿಸಿದ. ಡಾಂಗೌಜಿಗೆ ಗಲಿಬಿಲಿಯಾಯಿತು. ಆದರೆ ತೋರಿಸಿಕೊಳ್ಳದೆ, ವಿಷಯವನ್ನು ಇನ್ನಷ್ಟು ಸ್ಪಷ್ಟಮಾಡಿಕೊಳ್ಳುವ ಉದ್ದೇಶದಿಂದ, “ಹೀಗೆಲ್ಲ ಉತ್ತರ ಕೊಟ್ಟರೆ ಆಗುವುದಿಲ್ಲ. ಸ್ಪಷ್ಟವಾಗಿ ಎಲ್ಲಿ ಅಂತ ಹೇಳು’ ಎಂದ. ಪಂಡಿತನಾದ ತನಗೆ ತಾವೋ ಬಗ್ಗೆ ಅರಿತುಕೊಳ್ಳುವುದು ಅಷ್ಟೇನೂ ಕಷ್ಟವಲ್ಲ ಎಂಬ ಭಾವ ಅವನ ಮುಖದಲ್ಲಿತ್ತು. “ನೋಡು ನಿನ್ನ ಕಾಲ ಕೆಳಗೆ ಇರುವೆಗಳಿವೆಯಲ್ಲ. ಅದು ತಾವೋ’ ಎಂದು ಚಾಂಗ್ ತ್ಸು ಹೇಳಿದ. “ಛೆ… ಅಷ್ಟು ಕೆಳಗಾ? ಯಾಕಷ್ಟು ಕೆಳಗೆ?’ ಡಾಂಗೌಜಿಗೆ ಇರುವೆ ನೋಡಿ ಕಿರಿಕಿರಿ ಆಯಿತು.
“ಅಲ್ಲ. ಆ ಗರಿಕೆ ಹುಲ್ಲಿನಲ್ಲಿದೆ ತಾವೊ’ ಎಂದ ಚಾಂಗ್ ತ್ಸು. “ಅಯ್ಯೋ, ಇರುವೆಯಾದರೋ ಚಲಿಸಬಹುದು. ತಾವೊ ಗರಿಕೆ ಹುಲ್ಲಿನಂತೆ ಚಲಿಸಲಾರದಷ್ಟೂ ತಳಮಟ್ಟದಲ್ಲಿದೆಯೇ?’ ಡಾಂಗೌಜಿಗೆ ಇನ್ನಷ್ಟು ತಲೆಬಿಸಿ ಆಯಿತು. “ಅಲ್ಲೊಂದು ಕಟ್ಟಡದಲ್ಲಿ ಇಟ್ಟಿಗೆಗಳಿವೆಯಲ್ಲ. ಅದುವೇ ತಾವೊ’.
“ಥೋ… ಸುಟ್ಟ ಇಟ್ಟಿಗೆಯಲ್ಲ… ಇಟ್ಟಿಗೆಗೆ ಜೀವವೇ ಇಲ್ಲ ?’ ಚಾಂಗ್ ತ್ಸು , ಕಕ್ಕಸ್ಸು ಹಾಕುವ ಗೊಬ್ಬರ ಗುಂಡಿ ತೋರಿಸಿದ, “ನೋಡು, ಅದು ತಾವೊ’. ಡಾಂಗೌಜಿ ಸುಮ್ಮನಾದ. ಚಾಂಗ್ ತ್ಸು ಮತ್ತೆ ಹೇಳಿದ, “ತಾವೊ ಎಲ್ಲಿದೆ ಎಂದು ನಾನು ಹೇಳಬಲ್ಲೆ. ನೀನು ಎಲ್ಲಿಲ್ಲ ಎಂಬುದನ್ನು ಹೇಳಬಲ್ಲೆಯಾ?’ ಡಾಂಗೌಜಿ ಮೌನವನ್ನು ಮುಂದುವರಿಸಿದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ