ಲೇಯರ್ಡ್‌ ಕುರ್ತಿಗೊಂದು ಕಾಲ


Team Udayavani, May 15, 2019, 6:00 AM IST

5

ಬೇಸಿಗೆಯಲ್ಲಿ ತಂಪಾಗಿರಿಸುವ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಿಸುವ ಖಾದಿ ಮತ್ತು ಹತ್ತಿಯ ಕುರ್ತಿಗಳಿಗೆ ಬೇಡಿಕೆ ಹೆಚ್ಚು. ಇವನ್ನು ವಿಶೇಷ ಸಮಾರಂಭಗಳಿಗೆ ತೊಡಬಹುದು. ಅಲ್ಲದೆ ದಿನನಿತ್ಯ ಕಾಲೇಜು ಅಥವಾ ಆಫೀಸ್‌ಗೂ ತೊಡಬಹುದು.

ಕುರ್ತಿ ಎಂದಾಕ್ಷಣ ಹಬ್ಬ ಹರಿದಿನಗಳಿಗಷ್ಟೇ ಹಾಕೋ ಬಟ್ಟೆ ಎಂಬ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಕುರ್ತಿಯನ್ನು ಅಷ್ಟಕ್ಕೇ ಸೀಮಿತವಾಗಿಡದೆ ಎಲ್ಲಾ ಕಡೆಯೂ ತೊಟ್ಟು ನೋಡುವ ಪ್ರಯೋಗ ಈಗ ಟ್ರೆಂಡ್‌ ಆಗುತ್ತಿದೆ. ಪಿಕ್ನಿಕ್‌, ಶಾಪಿಂಗ್‌ ಅಥವಾ ಕ್ಯಾಶುಯಲ್‌ ಔಟಿಂಗ್‌ ಅಲ್ಲದೆ, ಸ್ಕರ್ಟ್‌ ಜೊತೆ, ಜೀನ್ಸ್ ಪ್ಯಾಂಟ್‌ ಜೊತೆ, ಲೆಗ್ಗಿಂಗ್ಸ್ ಜೊತೆ, ಹ್ಯಾರೆಮ…, ಪಲಾಝೊ, ಧೋತಿ ಪ್ಯಾಂಟ್‌, ಉದ್ದ ಲಂಗ, ಥ್ರಿ ಫೋರ್ಥ್ ಹಾಗೂ ಪ್ಯಾರಲಲ್‌ ಪ್ಯಾಂಟ್‌ಗಳ ಜೊತೆ ತೊಟ್ಟು, ಆಫೀಸ್‌ಗೂ ಹೋಗಬಹುದು.

ಬೆಚ್ಚಗಿರಿಸುತ್ತೆ, ತಂಪಾಗೂ ಇರಿಸುತ್ತೆ!
ಪಾಸ್ಟೆಲ್‌ ಬಣ್ಣಗಳು, ಅಂದರೆ ಬಳಪದ ಕಡ್ಡಿಯ ಬಣ್ಣಗಳು (ತಿಳಿ ಬಣ್ಣಗಳು) ಕಣ್ಣಿಗೂ ತಂಪು ದೇಹಕ್ಕೂ ತಂಪು. ಗಾಢವಾದ ಬಣ್ಣಗಳು ಹಬ್ಬಕ್ಕೆ ಮತ್ತು ಸಮಾರಂಭಗಳಿಗೆ ತೊಡುವುದು ಒಳ್ಳೆಯದು. ಎರಡೂ ಇಷ್ಟವಿದ್ದರೆ, ಎರಡನ್ನೂ ತೊಡಬಹುದು. ಅರೆ! ಅದು ಹೇಗಾಗುತ್ತದೆ? ಎಂದು ಅಚ್ಚರಿ ಪಡುವವರಿಗೆ ಇಲ್ಲಿದೆ ಉತ್ತರ. ಇದೀಗ ಟ್ರೆಂಡ್‌ ಆಗಲು ಡಬಲ್‌ ಲೇಯರ್ಡ್‌ ಕುರ್ತಿಗಳ ಸರದಿ. ಹಾಗಾಗಿ ಒಂದು ಲೇಯರ್‌ (ಪದರ) ನಲ್ಲಿ ತಿಳಿ ಬಣ್ಣ, ಇನ್ನೊಂದರಲ್ಲಿ ಗಾಢವಾದ ಬಣ್ಣ ಇರುವ ಕುರ್ತಿ ತೊಟ್ಟು ನೋಡಿ, ನೀವು ಟ್ರೆಂಡ್‌ ಸೆಟ್ಟರ್‌ ಆಗಿ! ಖಾದಿ, ಹತ್ತಿ, ರೇಷ್ಮೆ, ಉಣ್ಣೆ, ಶಿಫಾನ್‌, ಸ್ಯಾಟಿನ್‌, ಮುಂತಾದ ಬಟ್ಟೆಯ ಆಯ್ಕೆಗಳ ಕುರ್ತಿ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಖಾದಿ ಅಥವಾ ಖದ್ದರ್‌ ಬಟ್ಟೆ ಖಡಕ್‌ ಆಗಿ ಕಾಣಲು ಅದನ್ನು, ಗಂಜಿ ಹಿಟ್ಟಿನಲ್ಲಿ ಒಗೆಯಲಾಗುತ್ತದೆ. ಬೇಸಿಗೆಯಲ್ಲಿ ತಂಪಾಗಿರಿಸುವ ಮತ್ತು ಚಳಿಗಾಲದಲ್ಲಿ ಬೆಚ್ಚಗಿರಿಸುವ ಖಾದಿ ಮತ್ತು ಹತ್ತಿಯ ಕುರ್ತಿಗಳಿಗೆ ಬೇಡಿಕೆ ಹೆಚ್ಚು. ಇವನ್ನು ವಿಶೇಷ ಸಮಾರಂಭಗಳಿಗೆ ತೊಡಬಹುದು. ಮತ್ತು ದಿನ ನಿತ್ಯದ ಕಾಲೇಜು ಅಥವಾ ಆಫೀಸ್‌ಗೂ ತೊಡಬಹುದಾಗಿದೆ.

ಟಾಪಾದ ಟಾಪ್‌
ಬೇಸಿಗೆಗಾಗಿಯೇ ಉಡಲೆಂದು ಸ್ಲಿàವ್‌ಲೆಸ್‌ ಆಯ್ಕೆಗಳೂ ಇವೆ. ಉದ್ದ ತೋಳಿನ ಕುರ್ತಿಗಳಲ್ಲಿ ಬೆಲ್‌ ಬಾಟಮ್‌ ತೋಳು, ಮುಕ್ಕಾಲು ತೋಳು, ಪುಶ್‌ ಪಫ್ ತೋಳು, ಕ್ಯಾಪ್‌ ಸ್ಲಿàವ್‌, ಫೋಲೆxಡ್‌ ತೋಳು, ಗುಂಡಿ (ಬಟನ್‌) ಇರುವ ತೋಳು ಮುಂತಾದ ಆಯ್ಕೆಗಳಿವೆ. ಇವುಗಳಲ್ಲಿ ಅಂಗಿಯಂತೆ ಕಾಲರ್‌ ಲಭ್ಯ. ಚೂಡಿದಾರದ ಟಾಪ್‌ನಂತೆ ಬಗೆಬಗೆಯ ಕತ್ತಿನ ವಿನ್ಯಾಸಗಳೂ ಲಭ್ಯ. ಕ್ಯಾಶುಯಲ್‌ ಉಡುಗೆ ಆಗಿರಲಿ, ಫಾರ್ಮಲ್‌ ದಿರಿಸೇ ಆಗಿರಲಿ ಅಥವಾ ಸಾಂಪ್ರದಾಯಿಕ ಉಡುಪಾಗಿರಲಿ, ಎಲ್ಲಾ ತರಹದ ಬಟ್ಟೆ ಜೊತೆಗೂ ಸೈ ಎನಿಸಿಕೊಳ್ಳುತ್ತದೆ ಈ ಡಬಲ್‌ ಲೇಯರ್ಡ್‌ ಕುರ್ತಿ.

ಬಟ್ಟೆಯೋ ಸುದ್ದಿ ಪತ್ರಿಕೆಯೋ?
ಇದಲ್ಲದೆ ಇವುಗಳಲ್ಲಿ ಬಣ್ಣ ಬಣ್ಣದ ಆಕಾರಗಳು, ಚಿನ್ಹೆಗಳು ಮತ್ತು ಚಿತ್ರಗಳನ್ನು ಬಿಡಿಸಲಾಗುತ್ತವೆ. ಫ್ಲೋರಲ್‌ ಪ್ರಿಂಟ್‌ (ಹೂವಿನ ಆಕೃತಿ), ರೇಖಾ ಗಣಿತದಲ್ಲಿ ಬರುವ ಆಕೃತಿಗಳು, ಅನಿಮಲ್‌ ಪ್ರಿಂಟ್‌, ಧ್ಯಾನದಲ್ಲಿರುವ ಬುದ್ಧನ ಚಿತ್ರ, ನಾಣ್ಯಗಳ ಚಿಹ್ನೆಗಳು, ಬೇರೆ- ಬೇರೆ ಭಾಷೆಯ ಲಿಪಿಗಳ ಅಕ್ಷರಗಳು, ದಿನಪತ್ರಿಕೆಯಂತೆ ಕಾಣುವ ವಿನ್ಯಾಸ, ಪೋಲ್ಕಾ ಡಾಟ್ಸ್‌, ಸ್ಟ್ರೈಪ್ಸ್ (ಗೀಟುಗಳು), ಹೀಗೆ ನಮ್ಮ ಊಹೆಗಿಂತಲೂ ಹೆಚ್ಚು ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕಸ್ಟಮೈಸ್ಡ್ (ನಮಗೆ ಬೇಕಾದ) ವಿನ್ಯಾಸ, ಬಣ್ಣ ಮತ್ತು ಆಕೃತಿಗಳಿರುವ ಕುರ್ತಿಗಳನ್ನು ಮಾರುವ ಅಂಗಡಿಗಳು
ಆನ್‌ಲೈನ್‌ ನಲ್ಲೂ ಲಭ್ಯವಿವೆ. ನಮಗೆ ಬೇಕಾದ ವಿನ್ಯಾಸ, ಅಥವಾ ಬಣ್ಣಗಳ ಚಿತ್ರವನ್ನು ಈ ಆನ್‌ಲೈನ್‌ ಅಂಗಡಿಯವರ ಜೊತೆ ಹಂಚಿಕೊಂಡಲ್ಲಿ, ಅವರು ನಿಗದಿತ ಸಮಯದಲ್ಲಿ ತಯಾರಿಸಿ ಕೊಡುತ್ತಾರೆ.

ಅದಿತಿಮಾನಸ. ಟಿ. ಎಸ್‌

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.