ಕಂಕಣ ಕೂಡಿ ಬಂದಾಗ ಮದುವೆ ಆಗಲೇಬೇಕು…

ತುಂಬಾ ಸಿಂಪಲ್‌ ಆದರೂ ಸೈ, ಮದುವೆ ಆಗಿಯೇಬಿಡೋಣ...

Team Udayavani, May 13, 2020, 12:18 PM IST

ಕಂಕಣ ಕೂಡಿ ಬಂದಾಗ ಮದುವೆ ಆಗಲೇಬೇಕು…

ಸಾಂದರ್ಭಿಕ ಚಿತ್ರ

ವಸಂತ ಕಾಲ ಬಂದಾಗ ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೇಬೇಕು, ಕಂಕಣ ಕೂಡಿ ಬಂದಾಗ ಮದುವೆಯಾಗಲೇ ಬೇಕು… ಅಂತ ಹಾಡು ಕೇಳಿದ್ದೀರಲ್ಲ? ಅದೇ ಮಾತನ್ನು
ನಮ್ಮಮ್ಮನೂ ಹೇಳುತ್ತಿದ್ದಳು- ಕಾಲ ಕೂಡಿ ಬಂದಾಗ, ಬೇಡ ಬೇಡ ಎಂದರೂ, ಕೆಲಸ ತನ್ನಿಂತಾನೇ ನಡೆಯುತ್ತದೆ ಅಂತ. ಈ ಮಾತು, ನನ್ನ ಮದುವೆ ವಿಷಯದಲ್ಲಿ ನಿಜವಾಗಿದೆ!

ಅಜ್ಜಿಯ ಊರಿನಲ್ಲಿ ಜಾತ್ರೆ ಇದೆ ಅಂತ, ನಮ್ಮ ಮನೆಯವರೆಲ್ಲ ಊರಿಗೆ ಹೋಗಿದ್ದೆವು. ಪೂಜೆ ಮುಗಿದು ಎರಡು ದಿನಗಳಲ್ಲಿ ವಾಪಸ್‌ ಹೊರಡಬೇಕು ಅನ್ನುವಷ್ಟರಲ್ಲಿ, ಲಾಕ್‌ಡೌನ್‌ ಘೋಷಣೆಯಾಗಿಬಿಟ್ಟಿತು. ಹಾಗಾಗಿ, ನಾವು ಅಜ್ಜಿ ಮನೆಯಲ್ಲಿಯೇ ಉಳಿದುಕೊಂಡೆವು. ಊರ ಜಾತ್ರೆಯಾದ್ದರಿಂದ, ಬೇರೆಬೇರೆ ಊರಿನಲ್ಲಿ ನೆಲೆಸಿದ್ದ ಹಳ್ಳಿಯವರೆಲ್ಲ ಹುಟ್ಟೂರಿಗೆ ಬಂದು “ಲಾಕ್‌’ ಆಗಿಬಿಟ್ಟಿದ್ದರು.

ಹಳ್ಳಿಗಳಲ್ಲಿ ಲಾಕ್‌ಡೌನ್‌ ಅಂದರೂ, ಅಕ್ಕಪಕ್ಕದ ಮನೆಗೆ ಹೋಗಿ ಬರುವುದೆಲ್ಲಾ ನಡೆಯುತ್ತಿರುತ್ತದೆ. ಹಾಗೆ ಅಜ್ಜಿಯ ಮನೆಗೆ ಬಂದವರೆಲ್ಲ, ನನ್ನನ್ನು ನೋಡಿ ಮಾತನಾಡಿಸುತ್ತಿದ್ದರು. ಒಂದಿಬ್ಬರು ನನ್ನ ಬಗ್ಗೆ ಅಜ್ಜಿಯ ಬಳಿ ಏನೋ ಗುಸುಗುಸು ವಿಚಾರಿಸಿದ್ದನ್ನೂ ಕೇಳಿಸಿಕೊಂಡಿದ್ದೆ. ಆದರೆ, ವಿಷಯ ನನ್ನ ಮದುವೆಯದ್ದು ಅಂತ ಅಂದಾಜಿರಲಿಲ್ಲ ನನಗೆ. ಒಂದು ವಾರದ ಬಳಿಕ, ಅದೇ ಊರಿನಲ್ಲಿರುವ, ಅಜ್ಜಿಯ ದೂರದ ಸಂಬಂಧಿಕರೊಬ್ಬರು ಮನೆಗೆ ಬಂದರು. ಅಜ್ಜಿಯ ಬಳಿ ಉಭಯ ಕುಶಲೋಪರಿ ಮಾತನಾಡಿ, ನಂತರ ನನ್ನನ್ನು ಕರೆದು- “ನೋಡಮ್ಮಾ, ನನ್ನ  ಮೊಮ್ಮಗ ಬೆಂಗಳೂರಿನಲ್ಲಿ ಎಂಜಿನಿಯರ್‌. ಈಗ ಲಾಕ್‌ಡೌನ್‌ ಅಂತ ಮನೆಗೆ ಬಂದಿದ್ದಾನೆ. ನಿಮ್ಮಜ್ಜಿಯ ಕಣ್ಮುಂದೆ ಬೆಳೆದ ಹುಡುಗ. ನೀನು ಹೂಂ ಅಂದರೆ, ಮನೆಗೆ ಬಂದು ಹೋಗಲು ಹೇಳುತ್ತೇನೆ’ ಅಂತ ನಯವಾಗಿ ಹೇಳಿದರು. ಅವರು ಹೊರಟ ಮೇಲೆ, ಅಮ್ಮನ ಬಳಿ ಮಾತನಾಡಿದ ಅಜ್ಜಿ, ನನ್ನ ವಧುಪರೀಕ್ಷೆಗೆ ದಿನ ಗೊತ್ತು ಮಾಡಿದರು. ಹೇಗೂ ಲಾಕ್‌ಡೌನ್‌ ಇದೆ.
ಈಗಂತೂ ಮದುವೆ ಮಾಡೋಕೆ ಸಾಧ್ಯ ಇಲ್ಲ ಅನ್ನೋ ಧೈರ್ಯದಲ್ಲಿ, ನಾನೂ ಒಪ್ಪಿಕೊಂಡೆ.

ಕೆಲ ದಿನಗಳ ಬಳಿಕ ಹುಡುಗ, ತನ್ನ ಅಪ್ಪ, ಅಮ್ಮ, ಅಜ್ಜನ ಜೊತೆ ಬಂದ. ನಾನು ಸಿಂಪಲ್‌ ಆಗಿ ರೆಡಿ ಆಗಿ, ಬಂದವರಿಗೆ ಟೀ-ಚೌ ಚೌ ಬಾತ್‌ ಕೊಟ್ಟು ಒಳಗೆ ಬಂದೆ. ಸ್ವಲ್ಪ ಹೊತ್ತಿನ ನಂತರ, ಹುಡುಗನ ಅಮ್ಮ ಒಳಗೆ ಬಂದು, “ನೀವಿಬ್ಬರೂ ಮಾತಾಡಿಕೊಳ್ಳಿ. ನಿಮಗೆ ಒಪ್ಪಿಗೆಯಾದರೆ, ನಮಗೂ ಈ ಸಂಬಂಧ ಓಕೆ’ ಅಂದರು. ನಮಗೋ, ಏನು ಮಾತನಾಡ ಬೇಕೆಂದು ತಿಳಿಯಲಿಲ್ಲ. ಆಮೇಲೆ ಅವರು- “ನಿಮ್ಮ ನಂಬರ್‌ ಕೊಡಿ. ನಾನು ಸಂಜೆ ಕಾಲ್‌ ಮಾಡ್ತೀನಿ’ ಅಂತ ನಂಬರ್‌ ತಗೊಂಡು ಹೋದರು. ಪ್ರತಿ ಬಾರಿ ನನ್ನ ಮೊಬೈಲ್‌ ರಿಂಗ್‌ ಆದಾಗಲೂ “ಯಾರ
ಫೋನು?’ ಅಂತ ವಿಚಾರಿಸುತ್ತಿದ್ದ ಅಮ್ಮ, ಅವತ್ತು ಸಂಜೆ ನಾನು ಮೊಬೈಲ್‌ ತಗೊಂಡು ಟೆರೇಸ್ ಮೇಲೆ ಹೋದಾಗ ಏನೂ ಕೇಳದ್ದನ್ನು ನೋಡಿಯೇ, ಅಮ್ಮನಿಗೆ ಹುಡುಗ
ಒಪ್ಪಿಗೆಯಾಗಿದ್ದಾನೆ, ಅಂತ ಅರ್ಥವಾಯ್ತು.

ಹುಡುಗನನ್ನು ನಿರಾಕರಿಸಲು ಯಾವ ಕಾರಣವೂ ಇಲ್ಲದಿದ್ದರಿಂದ, ನಾನೂ ಒಪ್ಪಿಕೊಂಡೆ. ಕಳೆದ ವಾರ ಲಾಕ್‌ಡೌನ್‌ ಸಡಿಲಗೊಂಡಾಗ, ಮನೆಯಲ್ಲಿಯೇ ಹನ್ನೆರಡು ಜನರ ಸಮ್ಮುಖದಲ್ಲಿ ನಮ್ಮ ನಿಶ್ಚಿತಾರ್ಥ ಆಗೇಬಿಟ್ಟಿತು. ತಿಂಗಳ ಕೊನೆಯಲ್ಲಿ ಎರಡು ಒಳ್ಳೆಯ ಮುಹೂರ್ತ ಇದೆ. ತುಂಬಾ ಸರಳವಾಗಿ ಆದರೂ ಸರಿ, ಮದುವೆ ಮುಗಿಸಿ  ಬಿಡೋಣ ಅಂತ ಹುಡುಗನ ಅಪ್ಪ ಹೇಳಿದ್ದಾರೆ. ಲಾಕ್‌ಡೌನ್‌ನಿಂದ ಹಲವರ ಮದುವೆ ಮುಂದಕ್ಕೆ ಹೋದರೆ, ಲಾಕ್‌ಡೌನ್‌ನಿಂದಲೇ ಮದುವೆ ಫಿಕ್ಸ್ ಆಗುವಂತಾಗಿದ್ದು ಅಪರೂಪ ಇರಬೇಕು ಅಲ್ವಾ?

ರಾಜಲಕ್ಷ್ಮಿ

ಟಾಪ್ ನ್ಯೂಸ್

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.