ನಿಮಗೆ ರಾಜಕುಮಾರ ಸಿಕ್ಕನೇ?

ಒಮ್ಮೆ ಬಂದುಬಿಡು, ಹಾಗೆ ಸುಮ್ಮನೆ...

Team Udayavani, May 1, 2019, 6:25 AM IST

Avalu-Rajakumari

“ಯಾರೇ ನಿನ್ನ ರಾಜ್ಕುಮಾರ?’
ಯಾವುದಾದರೂ ಹುಡುಗಿಯನ್ನು ಹೀಗೆ ಕೇಳಿದಾಗ, ಅವಳು ನಾಚಿ ನೀರಾಗದಿದ್ದರೆ ಕೇಳಿ. ಯಾಕಂದ್ರೆ, ಪ್ರತಿ ಹುಡುಗಿಯಲ್ಲೂ ತನ್ನ ರಾಜಕುಮಾರ ಹೇಗಿರಬೇಕೆಂಬ ಕುರಿತು ಕಲ್ಪನೆ ಇರುತ್ತದೆ. ನಾನು ಮಾತ್ರ ಈಗಲೂ, ನನ್ನ ರಾಜ್ಕುಮಾರ ಬಿಳಿ ಕುದುರೆ ಮೇಲೆ, ಚಂದದ ಬಟ್ಟೆ ಹಾಕ್ಕೊಂಡು ಬರ್ತಾನೆ ಅಂತಲೇ ಕಲ್ಪಿಸಿಕೊಳ್ಳುವುದು. ಅದಕ್ಕೆ ಚಿಕ್ಕ ವಯಸ್ಸಿನಲ್ಲಿ ಕೇಳಿದ್ದ ರಾಜಕುಮಾರನ ಕಥೆಗಳೇ ಕಾರಣವಿರಬಹುದು.

ಮೊನ್ನೆ ಮಾಲ್‌ನಲ್ಲಿ ಪುಟ್ಟ ಹುಡುಗಿಯೊಬ್ಬಳು, “ನಂಗೆ, ಕುದುರೆ ಮೇಲಿರೋ ರಾಜಕುಮಾರನ ಗೊಂಬೆಯೇ ಬೇಕು’ ಅಂತ ಅಳುತ್ತಿದ್ದುದನ್ನು ನೋಡಿದೆ. ಸದ್ಯ, ಈಗಲೂ ರಾಜಕುಮಾರನ ಜೊತೆ ಕುದುರೆ ಇದೆಯಲ್ಲ ಅಂತ ಖುಷಿಯಾಯ್ತು. ಕಾಲ ಬದಲಾದರೂ ಕಲ್ಪನೆಗಳು ಬದಲಾಗದೆ ಉಳಿದುಕೊಂಡಿವೆ.

“ಒಂದೂರಲ್ಲಿ ಒಬ್ಬ ರಾಜಕುಮಾರ ಇದ್ನಂತೆ’ ಅಂತ ಶುರುವಾಗುತ್ತಿದ್ದ ಅಜ್ಜಿಯ ಕಥೆಗಳೆಲ್ಲ ಎಷ್ಟು ಚೆಂದ ಇರುತ್ತಿದ್ದವು. ಕಥೆ ಮುಗಿಯುವಾಗ ನನ್ನೊಳಗೂ ರಾಜಕುಮಾರಿಯೊಬ್ಬಳು ಹುಟ್ಟಿಕೊಂಡಿರುತ್ತಿದ್ದಳು. ಶಾಲೆಯ ನಾಟಕ, ಡ್ಯಾನ್ಸ್‌ನಲ್ಲೂ ರಾಜಕುಮಾರಿ ಜೊತೆಗೊಬ್ಬ ರಾಜಕುಮಾರ ಇರ್ತಿದ್ದ. ದೊಡ್ಡವಳಾಗ್ತಾ ಇದ್ದ ಹಾಗೆ ಓದು- ಪುಸ್ತಕದ ಮಧ್ಯೆ ಆ ರಾಜಕುಮಾರ ಮರೆಯಾದನೇನೋ! ಮುಂದೆ ಸ್ವಲ್ಪ ವರ್ಷಗಳ ಕಾಲ ಆತ ನನ್ನನ್ನು ಕಾಡಲೇ ಇಲ್ಲ.

ಆದರೂ, ಇತ್ತೀಚೆಗೆ ನನಗಾಗಿ ಸಪ್ತಸಾಗರವನ್ನು ಈಜಬಲ್ಲ ರಾಜಕುಮಾರ ಇದ್ದಿದ್ದರೆ ಎಷ್ಟು ಚಂದ ಇರಿ¤ತ್ತು ಅಂತ ಅನ್ನಿಸುತ್ತಿದೆ. ದುಂಡು ಮುಖ, ಕುಡಿ ಮೀಸೆ, ಧೃಡಕಾಯ, ಗತ್ತು, ಗಾಂಭೀರ್ಯದ ನನ್ನ ರಾಜಕುಮಾರ ಎಲ್ಲಿರಬಹುದು? ಹಿಂದೆ ಮುಂದೆ ಸುತ್ತುವ ಹುಡುಗರ ಮಧ್ಯೆ ನನ್ನ ರಾಜಕುಮಾರನನ್ನು ಹುಡುಕಿ ಸೋತಿದ್ದೇನೆ. ಮನೆಯ ಮೂಲೆಯಲ್ಲಿ ಜೋಡಿಸಿಟ್ಟ ಜರಿಬಣ್ಣದ ಬಟ್ಟೆ ತೊಟ್ಟ ರಾಜಕುಮಾರನ ಗೊಂಬೆಗಾದರೂ ಜೀವ ಬರಬಾರದೆ? ಬೇಜಾರಾದಾಗ ನನ್ನ ಜೊತೆ ಮಾತಾಡಬಾರದೆ…

ಕನ್ನಡಿ ಮುಂದೆ ನಿಂತು ಗೊಂಬೆ ಜೊತೆ ಮಾತಾಡುವಾಗ ಹೀಗೆಲ್ಲಾ ಅನ್ನಿಸೋದು ನನಗೊಬ್ಬಳಿಗೇನಾ? ನಿಮಗೆಲ್ಲಾ ನಿಮ್ಮ ಕಲ್ಪನೆಯ ರಾಜಕುಮಾರ ಆಗಲೇ ಸಿಕ್ಕಿಬಿಟ್ಟಿದ್ದಾನ? ಇರಲಿ ಬಿಡಿ, ಪ್ರೀತಿಯ ಅಂಬಾರಿ ಏರಿ ಮುಂದೊಂದು ದಿನ ಆತ ಬಂದೇ ಬರುತ್ತಾನೆ. ಅಲ್ಲಿವರೆಗೂ ಕಾಯೋದ್ರಲ್ಲಿ ತಪ್ಪೇನು ಇಲ್ಲಾ ಅಲ್ವಾ?

— ಮೇಘಾ ಹೆಗ್ಡೆ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.