“ಮ್ಯಾಟೇ’ ಬಂಡವಾಳ


Team Udayavani, Nov 21, 2018, 6:00 AM IST

w-3.jpg

ಟೈಲರ್‌ ಅಂಗಡಿಯಲ್ಲಿ ವೇಸ್ಟ್‌ ಎಂದು ಉಳಿಯುವ ಬಟ್ಟೆ ತಂದು ಅದರಿಂದ ಮ್ಯಾಟ್‌ ತಯಾರಿಸುತ್ತಾರೆ ಸುಲೋಚನಾ…
ಕಾಲೊರೆಸುವ ಮ್ಯಾಟ್‌ನಲ್ಲೂ ಅಂದಚಂದ ನೋಡುತ್ತೇವೆ ನಾವು. ಮನೆಗೆ ಬರುವವರು, ಮ್ಯಾಟ್‌ಗಳ ಅಂದವನ್ನೂ ಮೆಚ್ಚಲೆಂದು ಬಯಸಿ, ಕಲಾತ್ಮಕತೆಗೆ ಒತ್ತು ನೀಡುತ್ತೇವೆ. ಅಂಥ ಚಂದದ ಕಾಲೊರೆಸು (ಮ್ಯಾಟ್‌)ಗಳನ್ನು ತಯಾರಿಸುವಲ್ಲಿ ನಿಪುಣರು ನೀರ್ಚಾಲುವಿನ ಗೃಹಿಣಿ ಸುಲೋಚನಾ.

 ವೈವಿಧ್ಯಮಯ ಮ್ಯಾಟ್‌ ಹೆಣೆಯುವಲ್ಲಿ ಪರಿಣತರಾಗಿರುವ ಇವರು, ಆ ಕಲೆಯನ್ನು ಇತರೆ ಗೃಹಿಣಿಯರಿಗೂ ಕಲಿಸಿ, ಅವರ ಆದಾಯ ಗಳಿಕೆಗೆ ನೆರವಾಗುತ್ತಿದ್ದಾರೆ. ಮ್ಯಾಟ್‌ ತಯಾರಿಕೆಗೆ ಸುಲೋಚನಾ ಹಳೆಯ ಸೀರೆಗಳನ್ನು ಬಳಸುವುದಿಲ್ಲ. ದರ್ಜಿಗಳ ಅಂಗಡಿಯಲ್ಲಿ ಕತ್ತರಿಸಿ ಎಸೆಯುವ ಬಟ್ಟೆಯನ್ನು ತಂದು, ಅದನ್ನು ಬೇಕಾದ ಅಳತೆಗೆ ಕತ್ತರಿಸಿ, ಬೇರೆ ಬೇರೆ ಬಣ್ಣದ ಚೂರುಗಳನ್ನು ಜೋಡಿಸಿ ಮ್ಯಾಟ್‌ ಹೆಣೆಯುತ್ತಾರೆ.

ಸುಲೋಚನಾರ ಬಳಿ, ಎರಡು ಅಡಿ ಉದ್ದ, ಒಂದಡಿ ಅಗಲದ ವಿಶಿಷ್ಟ ಚೌಕಟ್ಟು ಇದೆ. ಪೈಪುಗಳನ್ನು ಬಳಸಿ ಚೌಕಟ್ಟನ್ನು ಅವರೇ ತಯಾರಿಸಿದ್ದಾರೆ. ಅದರ ಸಹಾಯದಿಂದ ಚೌಕಾಕೃತಿಯ ಮ್ಯಾಟ್‌ಗಳನ್ನು ತಯಾರಿಸುತ್ತಾರೆ. ಮನೆಯ ಎಲ್ಲ ಕೆಲಸಗಳ ಜೊತೆಗೆ, ದಿನಕ್ಕೆ ಒಂದು ಮ್ಯಾಟ್‌ ತಯಾರಿಸಬಹುದು. ಎಷ್ಟು ತಯಾರಿಸಿದರೂ ಪೇಟೆಯ ಫ್ಯಾನ್ಸಿ ಅಂಗಡಿಗಳಲ್ಲಿ ಬೇಡಿಕೆಯಿದೆ. 

ಸಣ್ಣ ವಯಸ್ಸಿಗೇ ಮದುವೆ
ಸುಲೋಚನಾ, ಕಾಸರಗೋಡಿನ ನೀರ್ಚಾಲುವಿನ ಶಿಕ್ಷಕ ಈಶ್ವರ ಭಟ್ಟರನ್ನು ಮದುವೆಯಾದಾಗ ಒಂಬತ್ತನೆಯ ತರಗತಿ ಮುಗಿಸಿದ್ದರಷ್ಟೆ. ಆದರೆ, ಅವರು ಅಡುಗೆಮನೆಗೆ ಸೀಮಿತರಾಗಿ ಉಳಿಯಲಿಲ್ಲ. ಅವರಿವರನ್ನು ನೋಡಿ ಬಟ್ಟೆ ಹೊಲಿಯುವುದನ್ನು ಕಲಿತು, ಹೊಲಿಗೆ ಯಂತ್ರ ತಂದು ಸಂಪಾದನೆಗೆ ತೊಡಗಿದರು. ನೈಟಿ, ರವಿಕೆ, ಚೂಡಿದಾರವನ್ನಷ್ಟೇ ಅಲ್ಲ, ವಯರಿನ ಚೀಲ, ವ್ಯಾನಿಟಿ ಬ್ಯಾಗ್‌ಗಳನ್ನೂ ಹೊಲೆಯುತ್ತಾರೆ. 

ನನ್ನ ಬಗ್ಗೆ ಹೆಮ್ಮೆ ಇದೆ…
ಹತ್ತು ವರ್ಷಗಳಲ್ಲಿ 3.5 ಲಕ್ಷ ರೂ. ಉಳಿತಾಯ ಮಾಡಿದ್ದ ಇವರು ಆ ಹಣವನ್ನು, ಬ್ಯಾಂಕ್‌ ಸಾಲ ಮಾಡದೆ ಮನೆ ನಿರ್ಮಿಸಲು ಬಳಸಿದರಂತೆ. ಸ್ವಂತ ಸೂರಿಗೆ ನೆರವಾದ ತನ್ನ ದುಡಿಮೆಯ ಬಗ್ಗೆ ಹೆಮ್ಮೆ ಇದೆ ಅಂತಾರೆ ಸುಲೋಚನ. ಮ್ಯಾಟ್‌ ತಯಾರಿಕೆ ಕಲಿಯಲು ಆಸಕ್ತಿ ಇದ್ದವರು ಇವರನ್ನು (7012355875) ಸಂಪರ್ಕಿಸಬಹುದು. 

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.