ರಾಧೆಯ ಪ್ರೀತಿಯ ರೀತಿ…


Team Udayavani, Feb 12, 2020, 4:58 AM IST

sds-16

ಗೋಪಿಕೆಯರು ತಮ್ಮ ಮನದಲ್ಲಿ ನಿನ್ನ ಬಿಂಬವನ್ನು ಪ್ರತಿಷ್ಠಾಪಿಸಿಕೊಂಡು ಪ್ರೇಮಿಸುತ್ತಿದ್ದರೂ, ರುಕ್ಮಿಣಿ, ಸತ್ಯಭಾಮೆಯರು ನಿನ್ನ ಪ್ರೇಮದೊಲವಲಿ ಮೀಯುತ್ತಿದ್ದರೂ, ನೀನು ಪ್ರೇಮಿಸಿದ್ದು ನನ್ನನ್ನು ಮಾತ್ರ ಎಂಬ ಹೆಮ್ಮೆ ಯೇ ನನಗೆ ಸಾಕು…

ನಾಡಿದ್ದು ಪ್ರೇಮಿಗಳ ದಿನವಂತೆ ಕೃಷ್ಣಾ… ಈ ಆಚರಣೆಗೆ ಎಲ್ಲೋ ಒಂದು ಕಡೆ ನಾವಿಬ್ಬರೇ ರೂವಾರಿಗಳು ಅಂತ ನಿನಗೆ ಅನಿಸುವುದಿಲ್ಲವೇ? ಜಗತ್ತಿನಲ್ಲಿ “ಪ್ರೇಮ’ ಎಂಬ ಪದಕ್ಕೆ ಅರ್ಥ ಹುಟ್ಟಿದ್ದೇ ನಿನ್ನಿಂದ, ಆ ಪದ ಸಾರ್ಥಕತೆ ಪಡೆದಿದ್ದೇ ನಮ್ಮಿಬ್ಬರ ಸ್ನೇಹದಿಂದ. ಮುಕ್ತಾಯವಿಲ್ಲದ ಅನಂತ, ಅಕ್ಷಯ ಭಾವವಿದು. ಪ್ರೇಮದ ಮತ್ತೂಂದು ಮುಖವೇ ನೀನಲ್ಲವೆ?

ಜಗತ್ತೆಲ್ಲಾ ನಿನ್ನ ಪ್ರೇಮದಲ್ಲೇ ಮುಳುಗಿ ಏಳುತ್ತಿದೆ. ಗೋಪಿಕೆಯರು ತಮ್ಮ ಮನದಲ್ಲಿ ನಿನ್ನ ಬಿಂಬವನ್ನು ಪ್ರತಿಷ್ಠಾಪಿಸಿಕೊಂಡು ಪ್ರೇಮಿಸುತ್ತಿದ್ದರೂ, ರುಕ್ಮಿಣಿ, ಸತ್ಯಭಾಮೆಯರು ನಿನ್ನ ಪ್ರೇಮದೊಲವಲಿ ಮೀಯುತ್ತಿದ್ದರೂ, ನೀನು ಪ್ರೇಮಿಸಿದ್ದು ನನ್ನನ್ನು ಮಾತ್ರ ಎಂಬ ಹೆಮ್ಮೆಯೇ ಸಾಕು ನನಗೆ. ನಿನ್ನ ಪ್ರೇಮದ ಋಣಭಾರ ಹೊತ್ತವಳು ನಾನು. ನಿನಗೆ ಅದೆಷ್ಟೇ ಹೆಸರುಗಳಿದ್ದರೂ ರಾಧಾಕೃಷ್ಣ ಎನ್ನುವ ಹೆಸರೇ ನಿನಗೆ ಶಾಶ್ವತ. ನನ್ನನ್ನಲ್ಲದೆ ಮತ್ಯಾವ ಹೆಣ್ಣಿಗೂ ನೀನು ಕೊನೆತನಕವೂ ಸ್ಥಾನ ಕೊಡದಿದ್ದುದು ನಿನ್ನ ಅಚಲ ಪ್ರೇಮಕ್ಕೆ ಉದಾಹರಣೆ ತಾನೆ? ಬಹುಶಃ ಈ ಜಗತ್ತಿನಲ್ಲಿ ಪ್ರೇಮಿಗಳಿಗೆ ಗುಡಿ ಕಟ್ಟಿರುವುದು ನಮ್ಮಿಬ್ಬರಿಗೆ ಮಾತ್ರ, ಜಪಿಸುವ ನಾಮವೂ ನಮ್ಮಿಬ್ಬರದೇ.

ನೀನು ನನ್ನನ್ನು ಅದೆಷ್ಟೇ ಪ್ರೇಮಿಸಿದರೂ, ಒಮ್ಮೊಮ್ಮೆ ನಿನ್ನ ತುಟಿಯ ಉಸಿರಿನ ಜೊತೆ ಆಡುವ ಕೊಳಲು, ಅದರ ನಾದಕ್ಕೆ ಮರುಳಾಗಿ ತೂಗಾಡುತ್ತಿದ್ದ ಪ್ರಕೃತಿ, ನಿನ್ನ ಮುಂಗುರಳ ಜೊತೆ ಸರಸವಾಡುತ್ತಾ ಪದೇ ಪದೆ ಅದರ ಸ್ಪರ್ಶ ಸುಖ ಅನುಭವಿಸುವ ನವಿಲುಗರಿ, ನೀ ಪ್ರೀತಿಯಿಂದ ಮೈದಡುವವ ಗೋವುಗಳು, ಎಲ್ಲದರ ಮೇಲೂ ಅಸೂಯೆ ಮೂಡುತ್ತಿತ್ತು. ಅವುಗಳೂ ಸಹ ನಾನಾಗಬಾರದಿತ್ತೇ ಎಂಬ ಜಿಜ್ಞಾಸೆ ಕಾಡುತ್ತಿತ್ತು. ಆದರೆ, ಈ ಭೂಮಿಯ ಸಕಲ ಚರಾಚರ ವಸ್ತುಗಳಿಗೂ ನಿನ್ನನ್ನು ಪ್ರೇಮಿಸುವ ಹಕ್ಕಿದೆ ಎಂದು ಅರಿವಾದಾಗ, ನಿನ್ನ ಮೇಲೆ ಮತ್ತಷ್ಟು ಪ್ರೇಮವುಕ್ಕಿ, ಮತ್ತಷ್ಟು ಅಗಾಧವಾಗಿ ನಿನ್ನನ್ನು ಪ್ರೀತಿಸತೊಡಗಿದೆ.

ಪ್ರೇಮಕ್ಕೆ ಸಾವಿಲ್ಲ, ಅದು ಅಜರಾಮರ ಎಂದು ಸಾರಿದ ಪ್ರೇಮಿಗಳು ನಾವಲ್ಲವೇ? ಎಂದಿಗೂ ಒಂದಾಗದ ಸಮಾನಾಂತರ ರೇಖೆಗಳು ನಾವು ಎಂಬ ಅರಿವಿದ್ದರೂ, ಒಬ್ಬರನ್ನೊಬ್ಬರು ಮಾನಸಿಕವಾಗಿ ಬಿಟ್ಟಿರಲು ಸಾಧ್ಯವಿಲ್ಲದ ಬದುಕು ನಮ್ಮದು. ಕಣ್ಣಲ್ಲಿ ನಿನ್ನ ಬಿಂಬ, ಹೃದಯದಲ್ಲಿ ನಿನ್ನ ರೂಪ, ನಮ್ಮಿಬ್ಬರ ಜೋಡಿ ಬಲು ಅಪರೂಪ. ಪ್ರತಿಯೊಬ್ಬ ಪ್ರೇಮಿಯ ಭಾವಕೋಶದಲ್ಲಿ ರಾಧಾ-ಕೃಷ್ಣರಂತೆ ಗಾಢವಾಗಿ ಪ್ರೀತಿಸಬೇಕು ಎಂಬ ವಾಂಛೆಯನ್ನು ಹುಟ್ಟು ಹಾಕಿದ ಕೀರ್ತಿ ನಮ್ಮಿಬ್ಬರದು ತಾನೆ? ಪ್ರೇಮಿಗಳ ದಿನದಂದು ಇಗೋ ನಿನ್ನ ರಾಧೆಯು, ನಿನಗೆ ಒಲವಿನ ಶುಭಾಶಯಗಳನ್ನು ಕಳಿಸುತ್ತಿದ್ದಾಳೆ, ಸ್ವೀಕರಿಸು ರಾಧಾ-ರಮಣ…

 -ನಳಿನಿ. ಟಿ. ಭೀಮಪ್ಪ

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.