ಬಿಸಿಲೇ ಐ ಹೇಟ್‌ ಯೂ…


Team Udayavani, May 18, 2017, 12:25 AM IST

Bisilu-17-5.jpg

ಮನೆಯಿಂದ ಹೊರಗೆ ಕಾಲಿಟ್ರೆ ಬಿಸಿಲ ಸ್ನಾನ. ಮೂವ್ವತ್ತು ಡಿಗ್ರಿ ಸೆಲ್ಷಿಯಸ್‌ನಲ್ಲೇ ಬಾಡಿ ಹೋಗುವ ಹುಡುಗಿಗೆ, ನಲ್ವತ್ತು ಡಿಗ್ರಿಯ ಬಿಸಿಲು ಅಂದ್ರೆ ಕೊಂಚ ಜ್ವರ ಬಂದಹಾಗಾಗುತ್ತೆ. ಆ ಬೆವರಿನಲ್ಲಿ ಮೇಕಪ್‌ ನಿಲ್ಲೋದೇ ಡೌಟು ಅನ್ನೋ ಚಿಂತೆ ಒಂದುಕಡೆ. ಮೇಕಪ್‌ಗಿಂತಲೂ ಹೆಚ್ಚಾಗಿ ದೇಹದ ಆರೋಗ್ಯದ ಕತೆಯೇನು ಎಂಬ ಚಿಂತೆಯೂ ಆಕೆಗೆ ಇರುತ್ತೆ. ಈ ಬಿಸಿಲಲ್ಲಿ ಆರೋಗ್ಯ, ಸೌಂದರ್ಯ ರಕ್ಷಿಸಿಕೊಳ್ಳೋದು ಹೇಗೆಂಬುದಕ್ಕೆ ಫ‌ಟಾಫ‌ಟ್‌ ಪರಿಹಾರಗಳು ಇಲ್ಲಿವೆ…

1. ಬೆವರಿನಂದ ತಲೆಯಲ್ಲಿ ಡ್ಯಾಂಡ್ರಫ್ ಆಗೋದು ಕಾಮನ್‌. ಕೂದಲು ಉದುರೋದರ ಜೊತೆಗೆ ಹೇನಿನ ಕಾಟವೂ ಇದರೊಂದಿಗೆ ಬೋನಸ್‌ ಆಗಿ ಬರುತ್ತೆ. ಇದಕ್ಕೆ ಪರಿಹಾರವೂ ಸಿಂಪಲ್‌. ಮೆಡಿಕೇಟೆಡ್‌ ಶಾಂಪೂ ಬಳಸಿ, ತಲೆಹೊಟ್ಟಿಗೆ ಮುಕ್ತಿ ಹಾಡಬಹುದು. ಮಜ್ಜಿಗೆ, ಲಿಂಬೆಹಣ್ಣಿನ ರಸವನ್ನು ತಲೆಗೆ ಹಚ್ಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿಯೂ ಪರಿಹಾರ ಕಂಡುಕೊಳ್ಬಹುದು.

2. ದೇಹದ ಉಷ್ಣತೆ ಹೆಚ್ಚಾಗಿ ಮುಖದಲ್ಲಿ ಮೊಡವೆಗಳು ಹಾಜರಿ ಹಾಕುತ್ತವೆ. ಆದಷ್ಟೂ ಕರಬೂಜ ಜ್ಯೂಸ್‌ ಕುಡಿಯುತ್ತಿರಿ. ಕನಿಷ್ಠ 3-4 ಲೀಟರ್‌ ನೀರು ಸೇವಿಸಿ. ವಿಟಮಿನ್‌ ಎ, ಝಿಂಕ್‌, ಆ್ಯಂಟಿ ಆಕ್ಸಿಡೆಂಟ್ಸ್‌ ಇರುವ ಜೆಲ್‌ಗ‌ಳನ್ನು ಹಚ್ಕೊಂಡ್ರೂ ಪರಿಹಾರ ಸಿಗುತ್ತೆ.

3. ನಿಮ್ಮ ಕಣ್ಣುಗಳ ಮೇಲೂ ಸೂರ್ಯನ ತಾಪ ಕೆಂಗಣ್ಣು ಬೀರಬಹುದು. ಕಣ್ಣು ಕೆಂಪಾಗಿ, ತೇಜಸ್ಸು ಕಳಕೊಳ್ಳುವುದಲ್ಲದೆ, ಕಣ್ಣಿನ ಸುತ್ತ ಕಪ್ಪು ವರ್ತುಲಗಳು ನಿರ್ಮಾಣ ಆಗಬಹುದು. ಎಳೆಯ ಸೌತೆಕಾಯಿಗಳನ್ನು ಕಣ್ಣಿನ ಸುತ್ತ ಇಟ್ಕೊಂಡು, ಕಿರುನಿದ್ರೆ ಮಾಡಿ. ರೋಸ್‌ವಾಟರ್‌ ಅನ್ನು ಕಣ್ಣಿಗೆ ಬಿಟ್ಕೊಳ್ತಾ ಇರಿ.

4. ಬಿಸಿಲಿಗೆ ಚರ್ಮವೂ ಬಹಳ ಸಂಕಟ ಅನುಭವಿಸುತ್ತೆ. ಅಲೋವೆರಾ ಜೆಲ್‌ ಬಳಸಿ ಸ್ನಾನ ಮಾಡಿ. ಕಡಲೆ ಹಿಟ್ಟನ್ನು ಸ್ನಾನಕ್ಕೆ ಬಳಸಿಯೂ ನಾವು ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಒಂದಂತೂ ನೆನಪಿರಲಿ… ಜಾಸ್ತಿ ಬಿಸಿ ನೀರಿನ ಸ್ನಾನ ಒಳ್ಳೇದಲ್ಲ.

5. ಬೆವರಿನಿಂದ ಬಚಾವ್‌ ಆಗಲು ದಿನಕ್ಕೆರಡು ಬಾರಿ ಸ್ನಾನ ಮಾಡಿ. ಕೆಮಿಕಲ್‌ ಮುಕ್ತವಾದ ಕೂಲಿಂಗ್‌ ಪೌಡರ್‌ ಉಪಯೋಗಿಸಿ. ಸ್ನಾನ ಮಾಡುವಾಗ ನೀರಿಗೆ ಪುದೀನಾ ಎಲೆ ಅಥವಾ ಲಿಂಬೆ ರಸವನ್ನು ಬಳಸುವುದರಿಂದ ಬೆವರನ್ನು ತಡೆಗಟ್ಟಬಹುದು.

6. ಬಿಸಿಲಿನ ಝಳಕ್ಕೆ ಕೈಕಾಲು ಒಡೆದರೆ ಹೆದರಬೇಡಿ. ಹೀಗೆ ಚರ್ಮ ಒರಟಾಗದೇ ಇರುವಂತೆ ಮಾಡಲು, ಮನೆಯಲ್ಲಿಯೇ ಮದ್ದಿದೆ. ಟೊಮೇಟೊ ರಸ, ಆಲೂಗಡ್ಡೆ, ಎಳೆ ಸೌತೆಕಾಯಿಯ ತುಣುಕುಗಳಿಂದ ಕೈಕಾಲಿಗೆ ಮಸಾಜ್‌ ಮಾಡುವುದರಿಂದ ಬಿರುಕುಗಳನ್ನು ಮುಚ್ಚಬಹುದು.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.