ಪಿ.ಟಿ.ಉಷಾ ಬಯೋಪಿಕ್ಗೆ ಸೈ ಎಂದ ಕ್ಯಾಟ್!
Team Udayavani, May 3, 2019, 6:00 AM IST
ಬಾಲಿವುಡ್ನಲ್ಲಿ ಸದ್ಯಕ್ಕಂತೂ ಬಯೋಪಿಕ್ ಸಿನಿಮಾಗಳ ಹವಾ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಒಂದರ ಹಿಂದೆ ಒಂದರಂತೆ ಬರುತ್ತಿರುವ ಬಯೋಪಿಕ್ ಸಿನಿಮಾಗಳಿಗೆ ಪ್ರೇಕ್ಷಕರಿಂದಲೂ ಭಾರೀ ರೆಸ್ಪಾನ್ಸ್ ಬರುತ್ತಿರುವುದರಿಂದ, ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರ ಚಿತ್ತ ಬಯೋಪಿಕ್ ಸಿನಿಮಾಗಳತ್ತ ನೆಟ್ಟಿದೆ. ಮೂಲಗಳ ಪ್ರಕಾರ ಸದ್ಯ ಬಾಲಿವುಡ್ನ ಸ್ಟಾರ್ ನಟರು, ನಿರ್ಮಾಪಕರು, ನಿರ್ದೇಶಕರ ಸುಮಾರು ಹದಿನೈದಕ್ಕೂ ಹೆಚ್ಚು ಬಯೋಪಿಕ್ ಸಿನಿಮಾಗಳು ತೆರೆಗೆ ಬರಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿವೆ. ಈಗ ಈ ಸಾಲಿಗೆ ಖ್ಯಾತ ಕ್ರೀಡಾ ತಾರೆ, ಅಥ್ಲೆàಟ್ ಪಿ.ಟಿ. ಉಷಾ ಬಯೋಪಿಕ್ ಸೇರ್ಪಡೆ ಆಗುತ್ತಿದೆ.
ಹೌದು, ಕಳೆದ ಮೂರು-ನಾಲ್ಕು ವರ್ಷಗಳಿಂದ ಪಿ.ಟಿ. ಉಷಾ ಅವರ ಕ್ರೀಡಾ ಜೀವನ ಮತ್ತು ಸಾಧನೆ ಸಿನಿಮಾವಾಗಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದ್ದರೂ, ಈ ಬಗ್ಗೆ ಅಧಿಕೃತ ಘೋಷಣೆ ಎಲ್ಲೂ ಹೊರಬಿದ್ದಿರಲಿಲ್ಲ. ಆದರೆ, ಈಗ ಪಿ.ಟಿ. ಉಷಾ ಬಯೋಪಿಕ್ ಸಿನಿಮಾವಾಗುತ್ತಿರುವುದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಅಂದ ಹಾಗೆ, ಪಿ.ಟಿ. ಉಷಾ ಬಯೋಪಿಕ್ ಸಿನಿಮಾವನ್ನು ರೇವತಿ ಎಸ್. ವರ್ಮ ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಆರಂಭಗೊಂಡಿದ್ದು, ಚಿತ್ರತಂಡದ ಮೂಲಗಳ ಪ್ರಕಾರ ಇದೇ ಮೇ ಅಂತ್ಯಕ್ಕೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಈ ಚಿತ್ರದಲ್ಲಿ ಪಿ.ಟಿ. ಉಷಾ ಪಾತ್ರವನ್ನು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಿರ್ವಹಿಸಲಿದ್ದಾರೆ ಎನ್ನಲಾಗಿದ್ದು, ಚಿತ್ರತಂಡ ಕೂಡ ಮೊದಲು ಪಿ. ಟಿ. ಉಷಾ ಪಾತ್ರಕ್ಕೆ ಪ್ರಿಯಾಂಕಾ ಚೋಪ್ರಾರನ್ನು ಅಪ್ರೋಚ್ ಮಾಡಿತ್ತು. ಆದರೆ, ಕಾರಣಾಂತರದಿಂದ ಪ್ರಿಯಾಂಕಾ ಚೋಪ್ರಾ ಈ ಚಿತ್ರವನ್ನು ಒಪ್ಪಿಕೊಳ್ಳದ ಕಾರಣ, ಸದ್ಯ ಆ ಪಾತ್ರಕ್ಕೆ ಕತ್ರಿನಾ ಕೈಫ್ ಅವರನ್ನು ಆಯ್ಕೆ ಮಾಡಲಾಗಿದೆ.
ಸದ್ಯಕ್ಕೆ ಕತ್ರಿನಾ, ಸಲ್ಮಾನ್ ಖಾನ್ ಜೊತೆ ಭಾರತ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಚಿತ್ರ ಇದೇ ಜೂನ್ ಮೊದಲ ವಾರ ತೆರೆಗೆ ಬರುತ್ತಿದೆ. ಇದರ ಜೊತೆ ಜೊತೆಗೇ ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಜೊತೆಗೂ ಕತ್ರಿನಾ ಅಭಿನಯಿಸುತ್ತಿದ್ದಾರೆ. ಇನ್ನು ಪಿ. ಟಿ. ಉಷಾ ಬಯೋಪಿಕ್ ಕಥೆ ಮತ್ತು ತನ್ನ ಪಾತ್ರವನ್ನು ಮೆಚ್ಚಿಕೊಂಡಿರುವ ಕತ್ರಿನಾ ಕೈಫ್, ಇಂಥ ಚಿತ್ರವನ್ನು ಮಾಡಲು ತಾನು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಚಿತ್ರದ ಪಾತ್ರಕ್ಕಾಗಿ ಕತ್ರಿನಾ ಒಂದಷ್ಟು ಹೋಮ್ವರ್ಕ್ ಮಾಡಿಕೊಳ್ಳಲು ಶುರುಮಾಡಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಪಿ.ಟಿ. ಉಷಾ ಬಯೋಪಿಕ್ ಮುಂದಿನ ವರ್ಷದ ಮಾರ್ಚ್ ವೇಳೆಗೆ ತೆರೆಗೆ ಬರಲಿದೆ. ಒಟ್ಟಾರೆ ಬಿಗ್ಸ್ಕ್ರೀನ್ ಮೇಲೆ ಕತ್ರಿನಾ ಓಟ ಎಷ್ಟರ ಮಟ್ಟಿಗೆ ವಕೌìಟ್ ಆಗಲಿದೆ ಅನ್ನೋದು ಚಿತ್ರ ರಿಲೀಸ್ ಆದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ