ಮೀಸೆ ಎಂಬ ಆಸೆ 


Team Udayavani, Nov 2, 2018, 6:00 AM IST

s-24.jpg

ಹೇಳಿಕೇಳಿ ಹೆಣ್ಣುಮಕ್ಕಳಿಗೆ ಮೀಸೆ ಬಗ್ಗೆ ಒಂಥರಾ ಆಸಕ್ತಿ. ಅದು ತಮಗಿಲ್ಲವಲ್ಲ ಎಂಬ ಕಾರಣಕ್ಕಿರಬಹುದು. 

ಬಹಳ ದಿನಗಳ ಮೇಲೆ ಅಕಸ್ಮಾತ್‌ ಆಗಿ ಹೀಗೆ ಹೆಂಗಳೆಯರ ಜೊತೆ ಮಾತಾಡುತ್ತ ಇರುವಾಗಲೇ ಮೀಸೆಯ ವಿಚಾರ ಬಂತು. ಹೇಳಿಕೇಳಿ ಹೆಣ್ಣುಮಕ್ಕಳಿಗೆ ಮೀಸೆ ಬಗ್ಗೆ ಒಂಥರಾ ಆಸಕ್ತಿ. ಅದು ತಮಗಿಲ್ಲವಲ್ಲ ಎಂಬ ಕಾರಣಕ್ಕಿರಬಹುದು. ಹಾಗೆ ಮೀಸೆ ಇರುವ ಹೆಂಗಳೆಯರೂ ಇರುವರೆನ್ನಿ. ಅದು ಹಾರ್ಮೋನುಗಳ ಏರುಪೇರಿನಿಂದ ಆಗುವ  ಇರುಸುಮುರುಸು ಎಂದು ಓದಿದ ನೆನಪು. ಅಂದಿನಿಂದ ಅಂದರೆ, ಈ ಮೀಸೆ ವಿಚಾರ ತಲೆಗೆ ಬಂದಾಗಿನಿಂದ ನನ್ನ ತಲೆಯಲ್ಲಿ ಅದೊಂದೇ ಹುಳು ಕೊರೆಯಲಾರಂಭಿಸಿದೆ. ಹೇಳಿಕೇಳಿ ಮೀಸೆ ಗಂಡಸ್ತನದ ಬಹುದೊಡ್ಡ ಸಂಕೇತವಂತೆ. ಯಾವ ಗಂಡಿಗೆ ಆದ್ರೂ ಯಾರಾದ್ರೂ ಆತನ ಮೀಸೆ ವಿಚಾರಕ್ಕೆ ಬಂದ್ರೆ ಸಾಕು, ಅದನ್ನು ಹೀಯಾಳಿಸುವುದೋ ಕೆಣಕುವುದೋ ಮಾಡಿದರೆ ಸಖತ್‌ ಕೋಪ ಬರುತ್ತೆ ಅಂತ ಕೇಳಿದ್ದೆ. ಕಂಡಿದ್ದೆ ಕೂಡ.

ಹದಿನಾರು-ಹದಿನೇಳು ಪ್ರಾಯ ಉಕ್ಕುತ್ತಲೇ ಎಳೆತರುಣರಲ್ಲಿ ತುಟಿಮೇಲಿನ ಸಣ್ಣ ರೋಮಗಳು ನಿಧಾನಕ್ಕೆ ಬೆಳೆಯುತ್ತ ಮೀಸೆ ಎಂಬ ಗರ್ವದ ಗತ್ತಿನ ಹಗ್ಗ ಅವರನ್ನು ಜಗ್ಗತೊಡಗುವುದೇನೋ? ಆದರೂ ಚಿಗುರು ಮೀಸೆ ಮೂಡುವ ಹೊತ್ತಿನಲ್ಲಿ ಆ ಮುಖದಲ್ಲಿ ಅದೆಂಥ ಮಾರ್ದವತೆ. ಆದರೆ, ಕ್ರಮೇಣ ಆ ಮುಖ ಗಡಸಾಗುತ್ತ ಮುಖದ ಮೀಸೆಯ ಗಾತ್ರ ಮತ್ತು ಉದ್ದ ಹೆಚ್ಚುತ್ತ ಆ ಮೀಸೆ ತೊಟ್ಟವನು ಬದಲಾಗುತ್ತ ಹೋಗುವುದೇ ವಿಷಾದ. ಹೀಗಾಗಿ, “ಆಹಾ! ಮೀಸೆಯೇ ನಿನ್ನದೆಂಥ ಪ್ರಭಾವವೆ?’ ಎನ್ನಿಸಿದ್ದು ಉಂಟು.  

ಹೆಣ್ಣಿಗೆ ಹೆರಳು, ಗಂಡಿಗೆ ಮೀಸೆ ಮುಖಕ್ಕೆ ಶೋಭೆ ಎನ್ನುವ ಮಾತಿದೆ. ಹೆಣ್ಣುಗಳು ಹೆರಳನ್ನು ವಿವಿಧ ವಿನ್ಯಾಸಗಳಲ್ಲಿ ಪ್ರದರ್ಶಿಸುವಂತೆ ಗಂಡಿನ ಮೀಸೆಯ ವಿನ್ಯಾಸವೂ ಆಗಾಗ ಬದಲಾಗುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ. ಮೀಸೆಯಲ್ಲಿ ಕಿರು ಮೀಸೆ, ಕುರುಚಲು ಮೀಸೆ, ಪೊದೆ ಮೀಸೆ, ಗುರ್ಬಾಣಕ್ಕಿ ಮೀಸೆ, ತಲವಾರು ಮೀಸೆ, ಮುಖಕ್ಕಿಂತ ದೊಡ್ಡ ಮೀಸೆ, ಕಿವಿಯವರೆಗೂ ಹಬ್ಬಿದ ಮೀಸೆ… ಹೀಗೆ ಎಷ್ಟೊಂದು ಪ್ರಕಾರಗಳು. ಮೀಸೆ ತೊಟ್ಟವರಿಗೂ ಒಂದೊಂದು ನಮೂನೆಯ ಹೆಸರುಗಳು ಸೇರಿಕೊಂಡಿವೆ. ಮೀಸೆ ಮಾವ, ಮೀಸೆ ದೊಡ್ಡಪ್ಪ, ಮೀಸೆ ಮಾಸ್ತರ,  ಮೀಸೆ ರಾಮಣ್ಣ ಹೀಗೆ ಪೊಗದಸ್ತಾದ ಮೀಸೆಯಿಂದಲೇ ಸಮಾಜದಲ್ಲಿ ಗುರುತಿಸಿಕೊಂಡ ಜನರಿ¨ªಾರೆ. ಇನ್ನು ಮೀಸೆಯ ಮೇಲೆ ಬೆರಳಾಡಿಸಿಯೇ ಮಾತನಾಡುವ ಶೈಲಿ ಕೆಲವರ¨ªಾದರೆ, ದಪ್ಪ ಮೀಸೆಯಡಿಯಲ್ಲಿ ನಕ್ಕೂ ನಗದಂತೆ ನಟಿಸುವವರು ಇನ್ನು ಕೆಲವರು. ಚಿಂತೆಗೆ, ಇಲ್ಲ ಚಿಂತನೆಗೆ ತೊಡಗಿದಾಗೆಲ್ಲ ಮೀಸೆಯ ರೋಮವನ್ನು ಒಂದೊಂದಾಗಿ ಕಿತ್ತು ಕಿತ್ತು ಬೀಸುಡುವವರೂ ಇರುವರೆನ್ನಿ! 

ಮೀಸೆಗೆ ಹಗ್ಗ ಕಟ್ಟಿ ಮೋಟಾರಬೈಕು, ಆಟೋರಿಕ್ಷಾ, ಜೀಪು, ಕಾರು ಅದೆಲ್ಲ ಹೋಗಲಿ ಹತ್ತು ಗಾಲಿಯ ಟ್ರಕ್ಕನ್ನು ಜಗ್ಗಿ ಎಳೆದ ಭೀಮಬಲದ ಮೀಸೆ  ಜಟ್ಟಿಗಳಿದ್ದಾರೆ. ಅದಕ್ಕೇನೆನ್ನೋಣ? ರಾಮಾಯಣದ ರಾವಣ ತನ್ನ ಅಗಾಧವಾದ ಮೀಸೆಯಿಂದಲೇ ತನ್ನ ಎದುರಾಳಿಗಳ ಸುತ್ತಿ ಗರಗರನೇ ತಿರುಗಿಸುತ್ತಿದ್ದನಂತೆ. ಹೀಗೆ ಮೀಸೆಯ ಪರಾಕ್ರಮ ಅಸದಳ. 

ಯಕ್ಷಗಾನದ ಪಾತ್ರಧಾರಿಗಳ ವಿವಿಧ ಪ್ರಕಾರದ ಮೀಸೆಗಳು ಕರಾವಳಿಯ ಜನರನ್ನು ಆಕರ್ಷಿಸುವ ಸಂಗತಿಗಳೇ. ಅದರಲ್ಲೂ ಆ ಮೀಸೆಗಳು ಮೊದಲು ಆಕರ್ಷಿಸುವುದು ಹೆಂಗಳೆಯರನ್ನು ಎಂಬುದರಲ್ಲಿ ಎರಡು ಮಾತಿಲ್ಲ. ಆ  ಪಾತ್ರಧಾರಿಯ ಕೆಣಕು ನಗು, ವ್ಯಂಗ್ಯ ನಗು, ಶಾಂತ ನಗು, ಕೆಲವೊಮ್ಮೆ ಬೀಭತ್ಸ ನಗು ಎಲ್ಲ ಮೀಸೆಯಡಿಯಲ್ಲಿಯೇ ಮೂಡಿಬಂದು ಗಂಡಸ್ತನದ ಗಂಡು ದನಿಗೆ ಇನ್ನಷ್ಟು ಮೆರುಗು ನೀಡುತ್ತಿತ್ತು.

ನಮ್ಮ ಊರಲ್ಲಿ ಒಬ್ಬ ಮೀಸೆ ರಾಮಣ್ಣ ಎಂಬವನಿದ್ದ. ಆತನ ಮಗಳು ನಮ್ಮ ವಾರಗೆಯವಳು. ಅವರು ಯಾವಾಗಲೂ ಮೀಸೆ ನೀವಿಯೇ ಮಾತನಾಡುತ್ತಿದ್ದರು. ನಮ್ಮ ಸ್ನೇಹಿತೆ ತನ್ನಪ್ಪನ ಭಯಂಕರ ಮೀಸೆಯೇ ದೊಡ್ಡ ಆಸ್ತಿ ಎಂಬಂತೆ ನಮ್ಮೆದುರು ತಂದೆಯ ಮೀಸೆಯ ವರ್ಣನೆ ಮಾಡುತ್ತಿದ್ದಳು. ಅದನ್ನು ಅವರು ಪೋಷಿಸುತ್ತಿರುವ ಸಂಗತಿಗಳನ್ನೆಲ್ಲ ಹೇಳುತ್ತಿದ್ದಳು. ಆದರೆ ನಮಗೋ ಶಾಲೆಗೆ ಹೋಗುವಾಗ ಆಕೆಯ ತಂದೆ ಎಲ್ಲಾದರೂ ಕಂಡರೆ ಭಯವಾಗುತ್ತಿತ್ತು. ಅವರು ಮೀಸೆಯನ್ನು ಸುರುಳಿಸುರುಳಿಯಾಗಿ ಹೊಸೆದು ಕಟ್ಟುತ್ತಿದ್ದರು. 

 ಬಾಲ್ಯದಲ್ಲಿ ನನ್ನ ಮೇಲೆ ತಂದೆಯ ಪ್ರಭಾವ ಬಹಳೇ ಇತ್ತೆನ್ನಿ. ಗರಿಗರಿಯ ಇಸ್ತ್ರಿ ಹಾಕಿದ ಬಟ್ಟೆಯನ್ನೆ ಸದಾ ತೊಡುತ್ತಿದ್ದ ನನ್ನ ತಂದೆ ಫ್ಯಾಶನ್‌ಪ್ರಿಯರಾಗಿದ್ದರು. ಅವರು ಹೆಚ್ಚಿನ ಸಮಯವೆಲ್ಲ ದಪ್ಪ ಮೀಸೆಯನ್ನೇ ಇಟ್ಟಿಕೊಂಡಿರುತ್ತಿದ್ದರೂ, ಆಗೊಮ್ಮೆ ಈಗೊಮ್ಮೆ  ಆ ಕಾಲದ ಪ್ರಸಿದ್ಧ ಹೀರೋ ರಾಜಕಪೂರನಂತೆ ಗುರ್ಬಾಣಕ್ಕಿ ಮೀಸೆ ಇಟ್ಟುಕೊಳ್ಳುತ್ತಿದ್ದರು. ಮತ್ತೆ ಕೆಲವೊಮ್ಮೆ ಇದ್ದ ಮೀಸೆಯನ್ನೆಲ್ಲ ಬೋಳಿಸಿ, ನಾರದನಂತೆ ಕಾಣುತ್ತಿದ್ದರು. ಆಗೆಲ್ಲ ನನ್ನಮ್ಮ ತಂದೆಯ ಖಯಾಲಿಗೆ ಬೈಯುತ್ತಲೋ, ಹುಸಿಮುನಿಸು ತೋರಿಸುತ್ತಲೋ ಇದ್ದರೆ ನನ್ನಪ್ಪ ಒಳಗೊಳಗೆ ಖುಷಿಯಾಗುತ್ತಿದ್ದುದು ನೆನಪು.

ಆದರೆ, ಅದ್ಯಾಕೋ ನನಗೆ ಮೀಸೆಯಿಲ್ಲದ ನನ್ನಪ್ಪನ ಮುಖವೇ ಚಂದವಾಗಿ ಕಾಣುತ್ತಿತ್ತು. ನಾವು ಬೆಳೆದು ದೊಡ್ಡವರಾಗುವ ಕಾಲಕ್ಕೆ  ಮೀಸೆಯಿಲ್ಲದ ಮುಖದ ಹೀರೋಗಳೇ ಸಿನೆಮಾ ರಂಗದ ಓಡುವ ಕುದುರೆಗಳಾಗಿದ್ದ ಕಾಲ. ಹಿಂದಿ ಚಲನಚಿತ್ರದಲ್ಲಿ ಆಗಷ್ಟೇ ಯುವ ನಾಯಕರು ಒಬ್ಬರಾದ ಮೇಲೊಬ್ಬರು ನಾರದನ ಮುಖದಲ್ಲಿಯೇ ಪ್ರಸಿದ್ಧರಾಗಿದ್ದರು. ಒಂದಿಷ್ಟು ಹಳೆ ತಲೆಮಾರಿನ ಅಮಿತಾಭ್‌ ಬಚ್ಚನ್‌ನನ್ನು ಹಿಡಿದು ನಂತರದ ಮಿಥುನ ಚಕ್ರವರ್ತಿ, ಸುನಿಲ್‌ ದತ್ತ, ಆ ನಂತರ ಬಂದ ಶಾರುಖ್‌ ಖಾನ್‌, ಅಮೀರಖಾನ್‌, ಸಲ್ಮಾನ್‌ ಖಾನ್‌, ಅಕ್ಷಯಕುಮಾರ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗಬಹುದು. ಕನ್ನಡ ಸಿನೆಮಾ ಕೂಡ ಇದಕ್ಕೆ ಪೈಪೋಟಿ ಎಂಬಂತೆ ರಾಜಕುಮಾರನ ಮೂರು ಮಕ್ಕಳು ಮೀಸೆಯಿಲ್ಲದೇ ಪ್ರಸಿದ್ಧರಾಗಿದ್ದರು. ಇದರ ಪ್ರಭಾವವೋ ಎಂಬಂತೆ ನಾನು ಮೀಸೆ ಇದ್ದ ನಾಯಕನಿಗಿಂತ ಮೀಸೆ ಇಲ್ಲದ ಮುಖಗಳನ್ನೆ ಇಷ್ಟಪಡುತ್ತಿದ್ದೆ. 

ನನಗೆ  ಮೀಸೆ ಎಂದರೆ ಅಂತಹ ಆಕರ್ಷಣೆ ಇಲ್ಲದ ಕಾರಣ ನಾನು ಬಯಸುತ್ತಿದ್ದುದು ಮೀಸೆ ಇಲ್ಲದ ಮಾರ್ದವ ಮುಖಕ್ಕಾಗಿ. ಆದರೆ, ನನ್ನ ದುರದೃಷ್ಟಕ್ಕೆ ಮೀಸೆ ಗಂಡನೇ ಸಿಗಬೇಕೆ? ನನ್ನ ಪತಿ ಮಹಾಶಯ ದಪ್ಪ ಮೀಸೆಯಲ್ಲಿ ಮೋಹಕವಾಗೇ ಕಾಣುತ್ತಿದ್ದ. ಆದರೆ, ಅದರಿಂದಾಗುವ ಕಿರಿಕಿರಿ ಏನೆಂದು ಆನಂತರವೇ ತಿಳಿದಿದ್ದು. ಮದುವೆಯಾದ ಮೇಲೆ ಏನೂ ಮಾಡಲಾಗದೇ ಮೀಸೆಯನ್ನು ತೆಗೆದರೆ ಒಳ್ಳೆಯದೆಂದು ನಾಚುತ್ತ ಸಲಹೆ ನೀಡಿದೆ. ಆ ಮೀಸೆಯ ಉಪಟಳವ ನೆನೆದು, ಅದು ಚುಚ್ಚಿದರೆ ಎಂಬ ಭಯಕ್ಕೆ ಹೆದರಿ. ಆದರೆ ಆ ಪುಣ್ಯಾತ್ಮ, “ಪ್ರಥಮ ಚುಂಬನಂ ದಂತಭಗ್ನಂ’ ಅಂತ ಮಾತಿದೆ. “ನಿನ್ನ ಮದುವೆಯಾದದ್ದಕ್ಕೆ ಪ್ರಥಮ ಚುಂಬನಂ ಮೀಸೆ ಭಗ್ನಂ ಮಾಡಿಕೊಳ್ಳೋಕೆ ನಾನೊಲ್ಲೆ’ ಎಂದುಬಿಟ್ಟ. ಈಗಲೂ ಕೂಡಾ ಅವನಿಗೆ ಮೀಸೆ ಎಂದರೆ ಬಹು ಹೆಮ್ಮೆ. ಆದರೆ ಅದು ಮೊದಲಿಗಿಂತ ಹೆಚ್ಚು ದಪ್ಪಗಾಗಿದೆ. ಆದರೆ, ಅಲ್ಲಲ್ಲಿ ಇಣುಕುವ ಬಿಳಿ ಕೂದಲುಗಳೂ ಅವರ ನಿದ್ದೆಗೆಡಿಸುತ್ತವೆ. ಆಗಾಗ ಬಣ್ಣ ಸವರಿಕೊಂಡರೂ ಮೂರೇ ದಿನಕ್ಕೆ ತಮ್ಮ ಉಪಸ್ಥಿತಿ ತೋರುವ ಅವುಗಳನ್ನು ಆಗಾಗ ಸಣ್ಣ ಕನ್ನಡಿ ಹಿಡಿದು ಕತ್ತರಿಸಿಕೊಳ್ಳುತ್ತಲೂ ಇಲ್ಲ ಒಂದೊಂದೆ ಜಗ್ಗಿ ಹಿಡಿದು ಕಿತ್ತು ಹಾಕುತ್ತಲೋ ಇರುವುದ ನೋಡಿ ನನಗೋ ತಮಾಷೆ. ಸುಮ್ಮನೆ ನಾ ಹೇಳಿದಂತೆ ಕೇಳಿದಿದ್ದರೆ ಈ ಅವಸ್ಥೆ ಇತ್ತಾ? 

ಮಹಿಳಾ ಮಣಿಗಳೆಗೆಲ್ಲ ಗೊತ್ತು, ಮೀಸೆಯ ಕಿರಿಕಿರಿಯ ಮಹತ್ಕಾರ್ಯ. ಇನ್ನು ಚಿಕ್ಕ ಮಕ್ಕಳು ಕೂಡ ಹೆಂಗಳೆಯರು ಲೊಚಲೊಚನೆ ಮುತ್ತಿಟ್ಟರೂ ಖುಷಿಯಿಂದ ಕೇಕೆ ಹಾಕಿದರೆ, ಮೀಸೆ ಮಾಮನ ಒಂದೆ ಮುತ್ತಿಗೆ ಗೋಳೊ ಎಂದು ಅಳುತ್ತವೆ. ಈಗ ನೀವೇ ಹೇಳಿ ಗಂಡಸ್ತನದ ಒಂದೇ ಕಾರಣಕ್ಕೆ ಈ ಮೀಸೆ ಮುಖದಲ್ಲಿರಬೇಕೆ ಅಥವಾ ಮಕ್ಕಳೂ ಅಪ್ಪನ ಮುದ್ದನ್ನು ಬಯಸುವಂತೆ ಹೆಂಡತಿಯೂ ಗಂಡನ ಮಾರ್ದವ ಮುಖವನ್ನು ಕೈಲಿಡಿದು ಮುದ್ದಿಸುವಂತೆ ಲಕಲಕನೇ ಹೊಳೆವ ಮೀಸೆಯಿಲ್ಲದ ಮುಖವಿರಬೇಕೆ? ಆಯ್ಕೆ ನಿಮ್ಮದು. 

ನಾಗರೇಖಾ ಗಾಂವಕರ

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.