ಕ್ಯಾಂಪಸ್‌ ಹಬ್ಬ


Team Udayavani, Nov 3, 2017, 11:26 AM IST

03-12.jpg

ಕಾಲೇಜು ಕ್ಯಾಂಪಸ್‌ ಅಂದಾಕ್ಷಣ ಎಲ್ಲರಿಗೂ ನೆನಪಾಗುವುದು ದೊಡ್ಡ ಕಟ್ಟಡ, ನೂರಾರು ಸ್ಟೂಡೆಂಟ್ಸ್‌ ಪಾಠ-ಪ್ರವಚನ, ಸೆಮಿನಾರ್‌, ಅಸೈನ್‌ಮೆಂಟ್‌, ಎಕ್ಸಾಂ- ಹೀಗೆ ಒಂದು ವೈವಿಧ್ಯಮಯ ಜಗತ್ತೇ ಕಣ್ಣಮುಂದೆ ಬರುತ್ತದೆ. ಆದರೆ, ಇವೆಲ್ಲದರ ಹೊರತಾಗಿಯೂ ಕಾಲೇಜು ಕ್ಯಾಂಪಸ್‌ ಒಂದು ಕಲರ್‌ಫ‌ುಲ್‌ ಜಗತ್ತು.

“ಸ್ಟೂಡೆಂಟ್‌ ಲೈಫ್ ಈಸ್‌ ಗೋಲ್ಡನ್‌ ಲೈಫ್’ ಎಂಬ ವಾಕ್ಯದಂತೆ ಕಾಲೇಜು ಜೀವನ ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಒಂದು ಮರೆಯಲಾಗದ ಅನುಭವ. ಗೆಳೆಯರೊಂದಿಗೆ ಜತೆಯಾಗಿ ಕಳೆದ ದಿನಗಳು, ಉಪನ್ಯಾಸಕರ ಬೈಗುಳ, ಜೀವನದ ಮೌಲ್ಯ ತಿಳಿಸಿಕೊಡುವ ಬುದ್ಧಿಮಾತುಗಳು, ಸ್ನೇಹ-ಪ್ರೀತಿಗಳ ಸಮ್ಮಿಲನ, ರಕ್ತ ಸಂಬಂಧಿಗಳಿಗಿಂತ ಮಿಗಿಲಾದ ಪರಸ್ಪರ ಬಾಂಧ‌ವ್ಯ- ಹೀಗೆ ಮರೆತರೂ ಹೃದಯದಲ್ಲಿ ಅಚ್ಚಳಿಯದೆ ಉಳಿಯುವ ನೆನಪುಗಳು. ಇಂಥ ಸುಂದರ ಜಗತ್ತಿನ ಹೊಸ ಆಕರ್ಷಣೆಯೇ ಕ್ಯಾಂಪಸ್‌ ಹಬ್ಬಗಳು. ಹಿಂದೆಯೆಲ್ಲ ವಿವಿಧ ಹಬ್ಬಗಳಾದ ದಸರಾ, ದೀಪಾವಳಿ, ಈದ್‌ ಮಿಲಾದ್‌, ಕ್ರಿಸ್‌ಮಸ್‌ ಅವರವರ ಮನೆಯಲ್ಲಿ ಅವರವರ ಸಂಪ್ರದಾಯದಂತೆ ಆಚರಿಸುತ್ತಿದ್ದರು, ಈಗಲೂ ಆಚರಿಸುತ್ತಾರೆ. ಆದರೆ ಈಗ ಕಾಲ ಬದಲಾಗಿದೆ, ಜೊತೆಗೆ ನಮ್ಮ ಜನರೂ ಬದಲಾಗುತ್ತಿ¨ªಾರೆ. ಈ ಬದಲಾವಣೆಯ ಒಂದು ಭಾಗವೇ ಧಾರ್ಮಿಕ ಹಬ್ಬಗಳನ್ನು ಜಾತಿ-ಮತ-ಪಂಥ ಪಂಗಡ ಹೀಗೆ ಎಲ್ಲವನ್ನೂ ಬದಿಗಿರಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಕಾಲೇಜು ಕ್ಯಾಂಪಸ್ಸುಗಳಲ್ಲಿ ಒಟ್ಟಾಗಿ ಆಚರಿಸುವುದು. ಇತ್ತೀಚೆಗೆ ಇಂತಹ ಹಬ್ಬಗಳಿಗೆ ನಮ್ಮ ಎಸ್‌ಡಿಎಮ್‌ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ ಸಾಕ್ಷಿಯಾಯಿತು. ಹಬ್ಬದ ದಿನ ವಿದ್ಯಾರ್ಥಿಗಳೆಲ್ಲ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವುದು, ಹಬ್ಬದ ಪ್ರಯುಕ್ತ ಕೆಲವು ಸ್ಪರ್ಧೆಗಳನ್ನು ಆಯೋಜಿಸುವುದು, ವಿಜೇತರಾದವರಿಗೆ ಹಬ್ಬದ ದಿನ ಬಹುಮಾನ ಕೊಡುವುದು, ಅತಿಥಿಗಳಿಂದ ಹಬ್ಬದ ಮಹತ್ವ ಸಾರುವ ಭಾಷಣ, ವಿವಿಧ ನೃತ್ಯ ಹಾಡುಗಳು ಇವೆಲ್ಲ  ಕ್ಯಾಂಪಸ್‌ ಹಬ್ಬದ ಸ್ಪೆಶಲ್‌.

ಇತ್ತೀಚಿನ ದಿನಗಳಲ್ಲಿ ಕಾಲೇಜು ಕ್ಯಾಂಪಸ್‌ಗಳು ವಿವಿಧ ಕಾರಣಗಳಿಂದ ತನ್ನ ಮಹತ್ವ ಕಳೆದುಕೊಳ್ಳುತ್ತಿವೆ. ಲಕ್ಷ ಲಕ್ಷ ಡೊನೇಷನ್‌ ಪಡೆಯುವ ವಿದ್ಯಾಸಂಸ್ಥೆಗಳು ಕೇವಲ ಬ್ಯುಸಿನೆಸ್‌ ದಂಧೆಗಳಾಗಿ ಮಾರ್ಪಾಡಾಗುತ್ತಿದೆಯೇ ಹೊರತು ಒಬ್ಬನೇ ಒಬ್ಬ ಪರಿಪೂರ್ಣ ವಿದ್ಯಾವಂತನನ್ನು ಸೃಷ್ಟಿಸುತ್ತಿಲ್ಲ , ಇತ್ತೀಚಿನ ವಿದ್ಯಾವಂತ ಯುವಜನಾಂಗ ವಿವಿಧ, ರಾಜಕೀಯ ಪಕ್ಷಗಳ ಸಂಘಟನೆಗಳ ಆಮಿಷಕ್ಕೆ ಒಳಗಾಗಿ ತಮ್ಮ ಭವಿಷ್ಯವನ್ನು ಕಳೆದುಕೊಳ್ಳುತ್ತಿದೆ. ಯುವಜನಾಂಗ ತಮ್ಮ ಆಚಾರವಿಚಾರಗಳನ್ನು ಮರೆತು ಆಧುನಿಕತೆಯಲ್ಲಿ ಮುಳುಗಿ ಹೋಗಿ¨ªಾರೆ. ಇಂಥ ಮಲಿನಗೊಂಡ ಸಮಾಜಕ್ಕೆ ಕ್ಯಾಂಪಸ್‌ ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗದೆ ಅದು ಸಮಾಜಕ್ಕೆ  ಉತ್ತಮವಾದ ಸಂದೇಶವನ್ನೂ ಸಾರುತ್ತವೆೆ. ಹದೆಗೆಟ್ಟಿರುವ ಸಾಮಾಜಿಕ ಸೌಹಾರ್ದತೆಗೆ ಜಾತಿ-ಧರ್ಮ ಮರೆತು ಆಚರಿಸುವ ಕ್ಯಾಂಪಸ್‌ ಹಬ್ಬಗಳು ಸೌಹಾರ್ದತೆಯ ಮಾನವೀಯತೆಯ ಮಹಾಸಂದೇಶವನ್ನು ಸಾರುತ್ತದೆ, ವಿದ್ಯಾರ್ಥಿಗಳಲ್ಲಿ ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಮತ್ತೆ ನೆನಪಿಸುತ್ತದೆ. ಆದ್ದರಿಂದ ಕ್ಯಾಂಪಸ್‌ ಹಬ್ಬಗಳು ಎಲ್ಲ ರೀತಿಯಲ್ಲಿಯೂ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಹಾರಿಸ್‌ ಸೋಕಿಲ
ಎಸ್‌ಡಿಎಮ್‌ ಕಾಲೇಜು, ಉಜಿರೆ

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.