ತಾಯಿ ಮತ್ತು ಮಗಳ ಸಮ್ಯಕ್‌ ಬಂಧ


Team Udayavani, Dec 13, 2019, 5:00 AM IST

sa-2

ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಬಹಳ ಪ್ರಾಮುಖ್ಯ ಇದೆ. ಸಂಬಂಧಗಳಿಲ್ಲದಿದ್ದರೆ ಬಹುಶಃ ನಮಗೆ ಪ್ರೀತಿ ಎಂದರೆ ಏನು, ಭಾವನೆಗಳೆಂದರೇನು, ನಂಬಿಕೆ ಎಂದರೆ ಏನು ಎನ್ನುವುದು ತಿಳಿಯುತ್ತಿರಲಿಲ್ಲ. ಯಾಕೆಂದರೆ, ಸಂಬಂಧಗಳ ಮೌಲ್ಯ ಅಂಥಾದ್ದು. ಇಂತಹ ಅದ್ಭುತ ಸಂಬಂಧಗಳಲ್ಲಿ ಒಂದು ತಾಯಿ ಮತ್ತು ಮಗಳ ಸಂಬಂಧ. ಒಮ್ಮೆ ಈಕೆ ಮಗಳಿಗೆ ತಾಯಿಯಾದರೆ, ಮುಂದೊಂದು ದಿನ ಮಗಳು ತನ್ನ ತಾಯಿಗೆ ತಾಯಿಯಾಗಿರುತ್ತಾಳೆ !

ಮೊದಲು ತಾಯಿಯೇ ಮಗಳಿಗೆ ಎಲ್ಲಾ ಆಗಿರುತ್ತಾಳೆ. ಈ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ತಾಯಿ ಕಲಿಸಿಕೊಡುತ್ತಾಳೆ. ಮಗಳು ತಾಯಿಯನ್ನು ನೋಡಿ ಎಲ್ಲವನ್ನು ಕಲಿತುಕೊಂಡಿರುತ್ತಾಳೆ. ತಾಯಿಯಂತೆ ಮಗಳು ನೂಲಿನಂತೆ ಸೀರೆ ಎಂಬ ಗಾದೆಯನ್ನು ನಾವು ಕೇಳಿರುತ್ತೇವೆ. ಇದು ತಾಯಿ ಮತ್ತು ಮಗಳ ವಿಚಾರದಲ್ಲಿ ನಿಜವಾಗಿರುತ್ತದೆ. ತಾಯಿ-ಮಗಳ ಬೆಲೆ ಇನ್ನಷ್ಟು ಹೆಚ್ಚಾಗುತ್ತದೆ. ಅದೇನೇ ಆದರೂ ತಾಯಿಮಗಳ ಸಂಬಂಧವನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಅವರ ನಡುವಿನ ಒಗ್ಗಟ್ಟಿಗೆ, ಪ್ರೀತಿಗೆ ನಮ್ಮಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ.

ಮಗಳು ತನ್ನ ಯೌವನಕ್ಕೆ ಕಾಲಿಟ್ಟಾಗ ತಾಯಿ ಗಂಭೀರವಾಗುತ್ತಾಳೆ. ಅವಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಕಾಳಜಿ ವಹಿಸುತ್ತಾಳೆ, ಅವಳು ಇಡುವ ಒಂದೊಂದು ಹೆಜ್ಜೆಯನ್ನು ತಾಯಿ ಎಚ್ಚರಿಸುತ್ತ ಇರುತ್ತಾಳೆ. ಮಗಳ ಎಲ್ಲಾ ಆರೈಕೆಗಳನ್ನು ತಾಯಿ ನೋಡಿಕೊಳ್ಳುತ್ತಾಳೆ. ಮಗಳು ಸಹ ತನ್ನ ಆಗುಹೋಗುಗಳನ್ನು, ಭಾವನೆಗಳನ್ನು ತಾಯಿಯೊಂದಿಗೆ ಹಂಚಿಕೊಳ್ಳುತ್ತಾಳೆ. ಇದರಿಂದ ಅವರಿಬ್ಬರ ಸಂಬಂಧ ಇನ್ನೂ ಗಟ್ಟಿಯಾಗುತ್ತ ಹೋಗುತ್ತದೆ. ಅದು ಹೇಗೆಂದರೆ, ಮಗಳು ತಾಯಿಯನ್ನು ಬಿಟ್ಟಿರುವುದಿಲ್ಲ. ತಾಯಿ ಮಗಳನ್ನು ಬಿಟ್ಟು ಕೊಡುವುದಿಲ್ಲ. ಇವರ ಅಮೂಲ್ಯವಾದ ಬಾಂಧವ್ಯಕ್ಕೆ ಎಂದೂ ಕೊನೆ ಎಂಬುದು ಇಲ್ಲ. ತಾಯಿಯ ಪ್ರೀತಿ ಮಗಳಿಗೆ ಎಲ್ಲಾ ಪ್ರೀತಿಗಿಂತಲೂ ಭಿನ್ನವಾಗಿರುತ್ತದೆ. ಅದರಿಂದ ತಾಯಿಯನ್ನು ತುಂಬಾ ಪ್ರೀತಿಸುತ್ತಾಳೆ.

ಮಗಳು ಮದುವೆಯ ವಯಸ್ಸಿಗೆ ಬಂದು, ಅವಳ ಮದುವೆಯಾದಾಗ ತಾಯಿ ಮತ್ತು ಮಗಳ ನಡುವಿನ ಅಂತರವನ್ನು ವ್ಯಕ್ತಪಡಿಸುತ್ತದೆ, ಆಗ ಮಗಳು ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾಳೆ. ತಾಯ್ತನವನ್ನು ಅನುಭವಿಸುತ್ತಾಳೆ. ಆಗ ತನ್ನ ತಾಯಿಯ ಕಷ್ಟಗಳು ನೆನಪಿಗೆ ಬರುತ್ತವೆ. ಅಷ್ಟರಲ್ಲಿ ಮಗಳು ಇನ್ನೊಂದು ಮಗುವಿಗೆ ತಾಯಿಯಾಗಿರುತ್ತಾಳೆ. ತಾಯಿ ಮಧ್ಯ ವಯಸ್ಸಿಗೆ ಬಂದಾಗ ಮಗಳು ಈ ತಾಯಿಗೆ ತಾಯಿಯಾಗಿದ್ದು ಆರೈಕೆ ಮಾಡುತ್ತಾಳೆ. ಆ ದೇವರ ಸೃಷ್ಟಿಯೇ ಅಂತಹದ್ದು. ಅಳಿದುಹೋಗುವ ಮುನ್ನ ಅರಿತುಕೊಳ್ಳುವುದು ಹೇಗೆ ಎಂಬುದನ್ನು ಸಂಬಂಧಗಳಲ್ಲಿ ಕೊಟ್ಟಿದ್ದಾರೆ.

ಈ ಜೀವನದ ಜಂಜಾಟದಲ್ಲಿ ಸುಂದರವಾದ ಸಂಬಂಧಗಳನ್ನು ಕಂಡಾಗ ಇನ್ನಷ್ಟು ಬದುಕುವ ತವಕ ಹೆಚ್ಚಾಗುತ್ತದೆ. ಅದರಲ್ಲಿಯೂ ತಾಯಿ ಮತ್ತು ಮಗಳ ಸಂಬಂಧವನ್ನು ಮಾತಿನಿಂದ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಈ ತಾಯಿಯ ಋಣ ತೀರಿಸಬೇಕೆಂದು ಮಗಳು ತನಗೆ ಮರುಜನ್ಮವಿದ್ದರೆ ತನ್ನ ತಾಯಿಯೇ ಮಗುವಾಗಿ ಬರಬೇಕೆಂದು ಆ ದೇವರಲ್ಲಿ ಪ್ರಾರ್ಥಿಸುತ್ತಾಳೆ.

ತನ್ನ ಪ್ರಪಂಚವೇ ತಾಯಿ ಎಂದುಕೊಂಡ ಮಗಳು, ಮಗಳೇ ತನ್ನ ಪ್ರಪಂಚ ಎಂದುಕೊಂಡ ತಾಯಿ… ಎಷ್ಟು ಸುಂದರ ಈ ಸಂಬಂಧ ಅಲ್ಲವೆ!

ರೋಶ್ನಿ
ತೃತೀಯ ಬಿ. ಕಾಂ., ಮಿಲಾಗ್ರಿಸ್‌ ಕಾಲೇಜ್‌, ಕಲ್ಯಾಣಪುರ

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.