ಭಾರತಕ್ಕೆ ಸೋಲು, ಪಾಕಿಸ್ಥಾನಕ್ಕೆ ನೋವು!
Team Udayavani, Jul 2, 2019, 5:45 AM IST
ಲಂಡನ್: ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯ ಸೋತಿರುವುದಕ್ಕೆ ಭಾರತೀಯರಿಗಿಂತಲೂ ಹೆಚ್ಚು ಒದ್ದಾಡುತ್ತಿರುವುದು ಪಾಕಿಸ್ಥಾನದವರು. ಭಾರತದ ಸೋಲು-ಗೆಲುವಿನ ಮೇಲೆ ತನ್ನ ಭವಿಷ್ಯವನ್ನು ನಂಬಿಕೊಂಡಿದ್ದ ಪಾಕ್ ಕ್ರಿಕೆಟಿಗರು ಈಗ ಕೊಹ್ಲಿ ಪಡೆಯ ವೃತ್ತಿಪರತೆಯನ್ನು ದೂಷಿಸುತ್ತಿದ್ದಾರೆ.
ಭಾರತ ಗೆದ್ದಿದ್ದರೆ ಪಾಕಿಸ್ಥಾನದ ಸೆಮಿಫೈನಲ್ ಪ್ರವೇಶ ತುಸು ಸುಲಭವಾಗುತ್ತಿತ್ತು. ಈ ಕಾರಣಕ್ಕೆ ಶೋಯಿಬ್ ಅಖ್ತರ್ ಸೇರಿದಂತೆ ಪಾಕಿಗಳೆಲ್ಲ ಬದ್ಧ ವೈರಿ ಭಾರತವನ್ನು ಬೆಂಬಲಿಸಿದ್ದರು. ಸೋಲಿನ ಬಳಿಕ ಅವರು ಭಾರತದ ಮೇಲಿಟ್ಟಿದ್ದ ಕ್ಷಣಿಕ ಪ್ರೀತಿ ಈಗ ಆಕ್ರೋಶವಾಗಿ ಬದಲಾಗಿದೆ. ಪಾಕ್ನ ಮಾಜಿ ಕೋಚ್ ಹಾಗೂ ಕಮೆಂಟೇಟರ್ ವಕಾರ್ ಯೂನಿಸ್ ಟ್ವಿಟರ್ನಲ್ಲಿ ‘ನಿನ್ನೆ ನೀವು ನೀವಾಗಿರಲಿಲ್ಲ, ನೀವು ಆಡಿದ ರೀತಿ ನಿಮ್ಮ ನಿಜಬಣ್ಣವನ್ನು ಬಯಲುಗೊಳಿಸಿದೆ. ಪಾಕಿಸ್ಥಾನ ಸೆಮಿಫೈನಲ್ ಪ್ರವೇಶಿಸುತ್ತದೋ ಇಲ್ಲವೋ ಎನ್ನುವುದು ನನ್ನ ಚಿಂತೆಗೆ ಕಾರಣವಲ್ಲ, ಕೆಲವು ಚಾಂಪಿಯನ್ನರ ಕ್ರೀಡಾಸ್ಫೂರ್ತಿ ನಿನ್ನೆ ಪರೀಕ್ಷೆಗೊಡ್ಡಲ್ಪಟ್ಟಿತು ಮತ್ತು ಅದರಲ್ಲಿ ಅವರು ಕೆಟ್ಟದಾಗಿ ವಿಫಲಗೊಂಡಿದ್ದಾರೆ’ ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಾಚಾರಿ ಸಾವು
Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ
IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ
Karnataka CM ಸಿದ್ದುಗೆ ಮಿಷನ್ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್ ನಂಬಿಕೆ: ಜೆ.ಪಿ.ನಡ್ಡಾ