ಬರೆದ ಪುಟವನ್ನು ತಿಂದು ಮಾತು ಉಳಿಸಿಕೊಂಡ ಸಂಪಾದಕ!
"ವಿಸ್ಡನ್ ಕ್ರಿಕೆಟ್' ಪತ್ರಿಕೆಯ ಸಂಪಾದಕ ಡೇವಿಡ್ ಫ್ರಿತ್ ಮಾಡಿದ್ದೇನು?
Team Udayavani, May 19, 2019, 6:00 AM IST
ಹಿಂದಿನೆರಡೂ ವಿಶ್ವಕಪ್ ಗಳಲ್ಲಿ ಅತ್ಯಂತ ಹೀನಾಯವಾಗಿ ಸೋತು ಹೋಗಿದ್ದ ಭಾರತ 1983ರಲ್ಲಿ ವಿಶ್ವಕಪ್ ಎತ್ತಲಿದೆ ಎಂದು ಭವಿಷ್ಯ ನುಡಿಯಲು ಯಾರು ತಾನೇ ಸಿದ್ಧರಿದ್ದರು?! ಹೀಗೆ ಹೇಳಿದ್ದೇ ಆದರೆ ಅವರನ್ನು ಮೂರ್ಖರ ಸಾಲಿಗೆ ಸೇರಿಸಬೇಕಿತ್ತು!
ಪರಿಸ್ಥಿತಿ ಹೀಗಿರುವಾಗ “ವಿಸ್ಡನ್ ಕ್ರಿಕೆಟ್’ ಪತ್ರಿಕೆಯ ಸಂಪಾದಕ ಡೇವಿಡ್ ಫ್ರಿತ್, “ಭಾರತದಂಥ ತಂಡವನ್ನು ಇಂಥ ಪ್ರತಿಷ್ಠಿತ ಕೂಟಕ್ಕೆ ಆರಿಸಲೇಬಾರದು. ಭಾರತಕ್ಕೆ ಚಾಂಪಿಯನ್ ಆಗಲು ಖಂಡಿತ ಸಾಧ್ಯವಿಲ್ಲ’ ಎಂದು ಬರೆದಿದ್ದರು. ಇನ್ನೂ ಮುಂದು ವರಿದು, “ಅಕಸ್ಮಾತ್ ಭಾರತ ವಿಶ್ವಕಪ್ ಎತ್ತಿದ್ದೇ ಆದಲ್ಲಿ ನಾನಿಲ್ಲಿ ಬರೆದುದನ್ನು ಕಾಗದ ಸಮೇತ ನುಂಗುತ್ತೇನೆ’ ಎಂದು ಚಾಲೆಂಜ್ ಕೂಡ ಹಾಕಿದ್ದರು.
ಗೆದ್ದೇ ಬಿಟ್ಟಿತಲ್ಲ ಭಾರತ!
ಡೇವಿಡ್ ಫ್ರಿತ್ಗೆ ತಾನು ಬರೆ ದದ್ದು ನೆನಪಿನಲ್ಲಿತ್ತೋ ಇಲ್ಲವೋ, ಆದರೆ ನ್ಯೂ ಜೆರ್ಸಿಯಲ್ಲಿರುವ ಭಾರತೀಯ ಮೂಲದ ಮಾನ್ ಸಿಂಗ್ ಎಂಬ ಓದುಗರೊಬ್ಬರು ಇದನ್ನು ನೆನಪಿಸಿದರು. ಫ್ರಿತ್ ಹಿಂದೇಟು ಹಾಕಲಿಲ್ಲ. ಕೊಟ್ಟ ಮಾತಿನಂತೆ ಆ ಬರಹವುಳ್ಳ ವಿಸ್ಡನ್ ಪತ್ರಿಕೆಯ ಪುಟಗಳನ್ನು ಹರಿದು ತಿಂದೇ ಬಿಟ್ಟರು. ಮುಂದಿನ ಸಂಚಿಕೆ ಯಲ್ಲಿ ತಾನು ಕಾಗದ ತಿನ್ನುತ್ತಿರುವ ಚಿತ್ರವನ್ನೂ ಪ್ರಕಟಿಸಿ ಓದುಗರಿಂದ ಶಹಬ್ಟಾಸ್ಗಿರಿ ಪಡೆದರು!
ಫ್ರಿತ್ ಕಾಗದ ತಿನ್ನುತ್ತಿರುವ ಚಿತ್ರ ಹಾಗೂ ಮಾನ್ ಸಿಂಗ್ ಅವರ ಪತ್ರ 1983ರ ಸೆಪ್ಟಂಬರ್ ಸಂಚಿಕೆಯ “ವಿಸ್ಡನ್’ ಸಂಚಿಕೆಯಲ್ಲಿ ಒಟ್ಟೊಟ್ಟಿಗೇ ಪ್ರಕಟವಾಗಿತ್ತು.