ಯಕ್ಷಗಾನ ಹೀಗೆಯೇ ಇದ್ದರೆ ಒಳಿತೇನೋ!


Team Udayavani, Jul 14, 2017, 10:10 AM IST

6.jpg

ಇತ್ತೀಚೆಗೆ ಉಡುಪಿ ಪೂರ್ಣಪ್ರಜ್ಞ  ಆಡಿಟೋರಿಯಂನಲ್ಲಿ ಪೂಜ್ಯ ಪಲಿಮಾರು ಶ್ರೀಗಳ ಜನ್ಮನಕ್ಷತ್ರದ ಅಂಗವಾಗಿ ಶ್ರೀಗಳ ಅಭಿಮಾನಿ ಬಳಗದವರಿಂದ ಪ್ರದರ್ಶಿಸಲ್ಪಟ್ಟ ಯಕ್ಷಗಾನ ಕಾರ್ಯಕ್ರಮವು ಸರ್ವ ಕಲಾವಿದರ ಮೇರು ವ್ಯಕ್ತಿತ್ವ, ಪ್ರತಿಭಾಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಸಭ್ಯ ಕಲಾವಿದನೊಬ್ಬ ತನ್ನಲ್ಲಿ ಅಡಕವಾಗಿರುವ ಕಲಾಪ್ರೌಢಿಮೆಯನ್ನು ಯಾವ ರೀತಿಯಲ್ಲಿ ಅಭಿವ್ಯಕ್ತಿ ಪಡಿಸಬಹುದೆಂಬುದನ್ನು ಅಂದು ಪಾತ್ರ ವಹಿಸಿದ್ದ ಹಾಸ್ಯ ಕಲಾವಿದರು ತೋರಿಸಿಕೊಟ್ಟರು. ತನ್ನ ಹಾವ- ಭಾವ-ಮಾತುಗಳಿಂದ ನೆರೆದ  ಕಲಾಭಿಮಾನಿಗಳ ಹೃನ್ಮನವನ್ನು ತಣಿಸುವಲ್ಲಿ ಸೈ ಎನಿಸಿಕೊಂಡರು.

ಹಾಸ್ಯ ಎಂಬುದು ದ್ವಂದ್ವಾರ್ಥದ ಮಾತುಗಳು, ವಿಕಾರ ಭಾವಭಂಗಿ ಎಂಬಷ್ಟಕ್ಕೆ ಸೀಮಿತವಾದ ಈ ಕಾಲಘಟ್ಟದಲ್ಲಿ  ಇಂತಹ ಒಂದಾದರೂ ಸಭ್ಯ ಪ್ರದರ್ಶನವನ್ನು ಕಾಣುವ ಅವಕಾಶ ಪ್ರೇಕ್ಷಕರ ಕಣ್ಣುಗಳಿಗೆ ಒದಗಿಬಂದದ್ದು  ಭಾಗ್ಯವೇ ಸರಿ. 

ಇನ್ನೊಂದು ಅಪರೂಪದ ಸನ್ನಿವೇಶವಾಗಿ ಇಬ್ಬರು ಹಿರಿಯ ಮೇರು ಕಲಾವಿದರು ಈ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪರಸ್ಪರ ವಿರೋಧ ಪಕ್ಷದ ಸನ್ನಿವೇಶದಲ್ಲಿದ್ದರೂ ಒಬ್ಬರಿಗೊಬ್ಬರು ಗೌರವಪೂರ್ಣವಾದ ಮಾತುಗಳು, ಹಾವಭಾವಗಳಿಂದ ಅಭಿನಯಿಸಿದ್ದು ಪ್ರೇಕ್ಷಕರಲ್ಲಿ ಧನ್ಯತಾಭಾವನೆ ಮೂಡಿಸಿತು. ಅಷ್ಟೇ ಅಲ್ಲದೆ ಉಳಿದ ಎಲ್ಲ ಹಿಮ್ಮೇಳ- ಮುಮ್ಮೇಳ ಕಲಾವಿದರು ಪ್ರೇಕ್ಷಕ ವರ್ಗಕ್ಕೆ ಅಪರೂಪದ ಒಳ್ಳೆಯ ಯಕ್ಷಗಾನ ಪ್ರದರ್ಶನವನ್ನು ಆಸ್ವಾದಿಸಲು ಅವಕಾಶ ಮಾಡಿಕೊಟ್ಟರು. ಇಂತಹ ಅಪರೂಪದ ಕಾರ್ಯಕ್ರಮವನ್ನು ಸಂಪೂರ್ಣವಾಗಿ ವೀಕ್ಷಿಸಿದ ಪೂಜ್ಯ ಶ್ರೀಗಳು ಎಲ್ಲ ಕಲಾವಿದರನ್ನು ಮನಃಪೂರ್ವಕವಾಗಿ ಆಶೀರ್ವದಿಸಿದ್ದು ಕಲಾವಿದರ ಸುಯೋಗವೇ ಸರಿ. ಇಂತಹ ಸದಭಿರುಚಿಯ ಪ್ರದರ್ಶನಗಳು ಕೇವಲ ಪಿ.ಪಿ.ಸಿ. ಹಾಲ್‌ಗೆ ಮಾತ್ರ ಸೀಮಿತವಾಗದೆ ಎಲ್ಲ ಕಡೆ ನಡೆಯಲಿ.

ಓರ್ವ ಅಭಿಮಾನಿ ಪ್ರೇಕ್ಷಕ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.