ಥ್ರಿಲ್ಲರ್ ಕಥೆಗಳು
Team Udayavani, Jan 1, 2019, 12:30 AM IST
ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!
1. ಬ್ಯೂಟಿ ಪಾರ್ಲರ್ನಲ್ಲಿ ಜಾಸ್ತಿ ಕೆಲಸ ಇದ್ದಿದ್ದರಿಂದ, ಪಲ್ಲವಿ ಆ ರಾತ್ರಿ ಪಾರ್ಲರ್ನಲ್ಲಿಯೇ ಮಲಗಿದಳು. ಮಳೆಯ ಕಾರಣ ಕರೆಂಟ್ ಕೂಡಾ ಇರಲಿಲ್ಲ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಒಳಗಿನಿಂದ ನೀರು ತೊಟ್ಟಿಕ್ಕುತ್ತಿರುವ ಸದ್ದು ಕೇಳಿತು. ಗಾಬರಿಯಾಗಿ, ಬೆಂಕಿಪೊಟ್ಟಣ ಹುಡುಕಿ, ಕಡ್ಡಿ ಗೀರಿ, ಸದ್ದು ಬಂದ ಕಡೆ ತಿರುಗಿದಾಗ ಕಂಡಿದ್ದು, ಕನ್ನಡಿ ಮುಂದೆ ಕೂತು ತನ್ನ ರಕ್ತಸಿಕ್ತ ಕೈಗೆ ಮೆಹಂದಿ ಹಾಕಿಕೊಳ್ಳುತ್ತಿದ್ದ ಮಹಿಳೆ!
2. ಕಾಡಿನಲ್ಲಿ ಕಳೆದುಹೋಗಿದ್ದ ಪ್ರವಾಸಿಗರಿಗೆ, ಅರಣ್ಯ ಇಲಾಖೆಯ ಭೈರ ಎಂಬಾತ ಎದುರಾಗಿ, ಅವರನ್ನು ಸಮಾಧಾನ ಪಡಿಸಿ ಕಾಡಿನ ಅಂಚಿಗೆ ತಂದು ಬಿಟ್ಟು ಹೋದ. ಅಲ್ಲಿಂದ ಸೀದಾ ಅರಣ್ಯ ಇಲಾಖೆಯ ಕಚೇರಿಗೆ ಬಂದ ಪ್ರವಾಸಿಗರು, ನಡೆದ ಘಟನೆಯನ್ನು ವಿವರಿಸಿದರು. ಆಗ ಅಲ್ಲಿನ ಅಧಿಕಾರಿ, ಯಾರು, ಭೈರನೇ? ಆತ, ಆರು ತಿಂಗಳ ಹಿಂದಷ್ಟೇ ಆನೆ ದಾಳಿಗೆ ಸಿಲುಕಿ ತೀರಿಕೊಂಡನಲ್ಲ? ಎಂದಾಗ ಪ್ರವಾಸಿಗರು ಬೆಚ್ಚಿಬಿದ್ದರು.
3. ಬಾರ್ನಲ್ಲಿ ಕುಡಿದು ಚಿತ್ತಾದ ನಾಲ್ವರು ಗೆಳೆಯರು, ಯಾವುದಾದರೂ ವಾಹನವನ್ನು ಅಡ್ಡಗಟ್ಟಿ ಕೀಟಲೆ ಮಾಡೋಣ ಎಂದು ಯೋಚಿಸಿದರು. ಅದೇ ಸಮಯಕ್ಕೆ ಬಂದ ಆಟೋಕ್ಕೆ ಕೈ ಅಡ್ಡ ಹಾಕಿ, ಪ್ರಯಾಣಿಕರ ಸೋಗು ಹಾಕಿದರು. ಆಟೋ ಸ್ವಲ್ಪ ದೂರ ಹೋಗುತ್ತಿದ್ದಂತೆ ಡ್ರೈವರ್ಗೆ ಚಾಕು ತೋರಿಸಿ, ಹಣ ಕೊಡು, ಇಲ್ಲದಿದ್ದರೆ ಕೊಂದುಬಿಡುತ್ತೇವೆ ಎಂದು ಹೆದರಿಸಿದರು. ಕೊಡ್ತೀನಿ ಇನ್ನೂ ಸ್ವಲ್ಪ ಹೊತ್ತು ತಡೆಯಿರಿ ಎಂದು ಚಾಲಕ ಒಮ್ಮೆಗೆ ತನ್ನ ಇಡೀ ಕತ್ತನ್ನು ಹಿಂದೆ ತಿರುಗಿಸಿ, ಭಯಾನಕ ಮುಖ ತೋರಿದಾಗ ಕುಡಿದ ನಶೆ ಜರ್ರನೇ ಇಳಿದುಹೋಯಿತು.
ಪುರುಷೋತ್ತಮ್ ವೆಂಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…