ಓಡಿ ಬರುವೆ, ಎಲ್ಲ ಬಂಧವ ಮೀರಿ…


Team Udayavani, Jul 25, 2017, 10:31 AM IST

25-JOSH-8.jpg

ಹಾಯ… ಮನದ ಹುಡ್ಗ, 
ದಿನಗಟ್ಟಲೆ ಮಾತನಾಡಿದರೂ ಈ ಪತ್ರ ಬೇರೆ ಓದಬೇಕಾ? ಎಂದು ಬೇಸರಿಸಬೇಡ. ಸೂರ್ಯನ ಸ್ಥಾನವನ್ನು ಚಂದ್ರ ಆಕ್ರಮಿಸಿ ಅದಲು ಬದಲಾದರೂ ಮುಗಿಯದ ನಮ್ಮ ಮಾತಿನ ಸರಣಿಯಲ್ಲಿ ಅದೆಷ್ಟೇ ಕನಸು, ಮೆಚ್ಚುಗೆ ಸೂಸಿದರೂ ಪತ್ರ ನೀಡುವ ಆತ್ಮೀಯತೆ, ಸುಮಧುರ ಭಾವ, ತನ್ಮಯತೆಯನ್ನು ಮತಾವ ಪರಿಕರವೂ ನೀಡದು.  

ನೀನೊಬ್ಬ ಸರಳ, ಸಹಜ, ಸುಂದರ ಹುಡುಗ ಕಣೋ. ಬೇಡದೆ ವರ ಕೊಡದ ದೇವರಿಲ್ಲ. ಅಳದೆ ಹಾಲುಣಿಸುವ ತಾಯಿಯಿಲ್ಲವೆನ್ನುತ್ತಾರೆ. ಆದರೆ, ಏನೊಂದೂ ಕೇಳದೆ ಅಷ್ಟೊಂದು ಸುಪ್ರೀತಿಯನ್ನು ನೀಡುವ ನಿನ್ನ ಮನದ ಚೆಲುವು ಅವ್ಯಕ್ತ ಕಣೋ. ನಿನ್ನದು ವೃತ್ತಿಪರ ಕಾಳಜಿ ಬಿಡು. ನಾನು ಸದಾ ಖುಷಿಯಿಂದಿರಬೇಕು, ಕಂಬನಿ ಮಿಡಿಯಬಾರದೆಂದು ಹಂಬಲಿಸುವೆಯಲ್ಲ; ಅದಕ್ಕಾಗಿ ಎಂಥ ರಿ… ತೆಗೆದುಕೊಳ್ಳಲೂ ಹೊರಡುವೆಯಲ್ಲ? ಆ ನಿನ್ನ ಗುಣಕ್ಕೆ ನಾನು ಸೋತು ಹೋದೆ. ಆ ನಿನ್ನ ಮುಗ್ಧ ಒಲವಿಗೆ ಮರುಳಾಗಿ ಹೋದೆ. ಮನದ ಹೂ ಪಕಳೆಗೆ ಪ್ರೀತಿಯ ಸುವಾಸನೆ ಸುತ್ತಿದವ ನೀನು. ಸಿಂಗಾರದ ಕನಸಿಗೆ ರಂಗವಲ್ಲಿ ತುಂಬಿ ಬದುಕಿಗೆ ಸಂತಸ ತಂದ ಕಿನ್ನರ ನೀನು. ಹೆಣ್ಣಿನ ಅಂತರಂಗದ ನೋವ ಭೇದಿಸಿ ಸಾಂತ್ವನ, ನಲಿವಿನ ಸ್ವರ್ಗ ಸೂಸುವ ಪ್ರೇಮಮೂರ್ತಿ ನೀನು. ನಿನಗೆ ನಾನೇ ಜಗತ್ತು, ನನಗೆ ನಿನ್ನ ಆಸರೆಯೇ ಸಂಪತ್ತು. ಆದರೆ, ಈ ಜಗತ್ತಿನಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಸಂಪತ್ತು ಅವಶ್ಯಕ. ಜೊತೆಗೆ ಪರಿಶ್ರಮ, ದೃಢ ಸಂಕಲ್ಪ ನಮ್ಮಿಬ್ಬರಲ್ಲೂ ಅಚ್ಚಳಿಯದೆ ಇರಬೇಕಾದುದು ಅಗತ್ಯ. ಅದು ಕೊನೆವರೆಗೂ ನಮ್ಮದಾಗಿರಲಿ. ಇಷ್ಟಾಗಿಬಿಟ್ಟರೆ, ಸುಖದ ದಾಂಪತ್ಯ ಜೀವನ ನಮ್ಮದಾಗುತ್ತದೆ. ಅಂದು ಬರುವೆ ಓಡೋಡಿ ಎಲ್ಲ ಬಂಧನಗಳ ಮೀರಿ. ಅಲ್ಲಿವರೆಗೂ ತಾಳ್ಮೆಯಿಂದಿರೂ ಚಿನ್ನಾ. 

ಇಂತಿ ನಿನ್ನ 
ಪಲ್ಲವಿ ಎಡೆಯೂರು  

 

ಟಾಪ್ ನ್ಯೂಸ್

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.