ರಂಗ ಶಂಕರ: ಪ್ರಾತಃಕಾಲೇ ಪೂಜೆ,ಸಂಧ್ಯಾಕಾಲೇ ನಾಟಕಂ


Team Udayavani, Feb 25, 2017, 3:20 PM IST

14.jpg

ಇವರಿಗೆ ದೇವರಷ್ಟೇ ಪ್ರೀತಿ ನಾಟಕ. ಕಳೆದ 25 ವರ್ಷಗಳಿಂದ ಅಭಿಷೇಕ, ಪೂಜೆ, ಮಂಗಳಾರತಿಗೆ ತೋರುವ ಭಕ್ತಿಯನ್ನು ದುರ್ಯೋಧನ, ಜರಾಸಂಧನ ಪಾತ್ರಕ್ಕೂ ತೋರುವ ಮೂಲಕ ದೇವರನ್ನು ಕಾಣುತ್ತಾರೆ ಶಂಕರ್‌. 

“ಅಪ್ಪನ ರೀತಿನೇ ಆಗಬೇಕಲ್ಲ. ದೇವರೇ ನನ್ನನ್ನು ಈ ರೀತಿ ಮಾಡಪ್ಪಾ’  ಶಂಕರ್‌ ಘಾಟಿ ಸುಬ್ರಮಣ್ಯ ದೇವರ ಮುಂದೆ  ಈ ರೀತಿ ಕೇಳಿಕೊಳ್ಳುವ ಹೊತ್ತಿಗೇ ವಯಸ್ಸು 10 ದಾಟಿತ್ತು.  ಈ ರೀತಿ ಕೇಳಲು ಕಾರಣ ಅಪ್ಪನೇ.  ಅಪ್ಪ ಆದಿನಾರಾಯಣಪ್ಪ ದೊಡ್ಡಬಳ್ಳಾಪುರದ ಬಳಿಯ ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನದ ಪರಿಚಾರಕರು, ಅವರು ಕೂಡ ತಂದೆಯ ಕೆಲಸವನ್ನು ಬಿಡದೇ ಪಾಲಿಸುತ್ತಿದ್ದರು.  ರಾತ್ರಿ ಆದರೆ ಸಾಕು ಇದರ ಜೊತೆಗೆ ಬಣ್ಣ ಹಚ್ಚಿ ನಾಟಕ ಮಾಡುತ್ತಿದ್ದರು. ಶಂಕರನಿಗೆ ಇದೇ ಹುಚ್ಚು. ಅಪ್ಪನನ್ನು  ಡಂಬಾಸುರ, ಜರಾಸಂಧನ ಪಾತ್ರದಲ್ಲಿ ನೋಡಿದ ಮೇಲೆ ತಾನೂ ಹೀಗೆ ಆಗಬೇಕು ಅನಿಸಿತು. ಅಪ್ಪನ ಹಿಂದೆ ದೊಡ್ಡಬಳ್ಳಾಪುರ, ತುಮಕೂರುಗಳಿಗೆಲ್ಲಾ ಹೋಗುತ್ತಿದ್ದರು.  ಅಲ್ಲಿ ಅಹೋರಾತ್ರಿ ನಾಟಕ.  ಆಗೆಲ್ಲಾ ವಸ್ತ್ರಾಭರಣಗಳು ಕಡಿಮೆ. ಬದಲಾಗಿ ಸೀರೆಗಳನ್ನು ಸುತ್ತಿ ನಾಟಕವಾಡುತ್ತಿದ್ದರು.

 ಮಗನ ಕಣ್ಣುಗಳು ಅಪ್ಪನ  ಹಾವಾಭಾವದ ಮೇಲೂ, ಬಣ್ಣಹಚ್ಚಿಕೊಳ್ಳುವ ರೀತಿಯ ಕಡೆಗೂ ವಾಲಿತು. ಶಂಕರರನ್ನು ಎವೆಇಕ್ಕದೆ ಎಲ್ಲವನ್ನು ನೋಡನೋಡುತ್ತಲೇ ಪಾತ್ರವಾಗುತ್ತಿದ್ದರು.  ಅಪ್ಪ ರಾವಣನ ರೌದ್ರತೆ, ಸಂಭಾಷಣೆಯಲ್ಲಿ ತೋರುತ್ತಿದ್ದ ಭಾವಾಭಿವ್ಯಕ್ತಿ, ವೇದಿಕೆಯ ಮೇಲೆ ಕಲಾವಿದನಿಗೆ ಇರಬೇಕಾದ ಕನಿಷ್ಟ ಜ್ಞಾನಗಳೆಲ್ಲವೂ ಅರಿಯುತ್ತಾ ಹೋಯಿತು.

 ಒಂದು ದಿನ ನಾನೇಕೆ ನಾಟಕ ಮಾಡಬಾರದು? ಘಾಟಿಯ ಸುಬ್ರಮಣ್ಯ ದೇವಾಲಯದ ಕೆಲಸಗಾರರನ್ನು ಸೇರಿಸಿ  ಸುಬ್ರಮಣ್ಯ ಕೃಪಾ ಪೋಷಕ ನಾಟಕ ಮಂಡಳಿ ಎಂಬ ತಂಡ ಕಟ್ಟಿಕೊಂಡರು. ಅದರಲ್ಲಿ ಶಂಕರರಿಗೆ “ಮೂರುವರೆ ವಜ್ರಗಳು’ ನಾಟಕದಲ್ಲಿ ಭೀಮನ ಪಾತ್ರ. ಶಂಕರರ ಅಭಿನಯ ನೋಡಿ ಇಡೀ ಊರಿಗೆ ಊರೇ ಚಪ್ಪಾಳೆ ತಟ್ಟಿತು. ಅಲ್ಲಿಂದ ಶುರುವಾಯ್ತು ಇವರ ರಂಗಯಾತ್ರೆ. ಒಂದು ಕಡೆ ಅಪ್ಪ ಹೆಗಲ ಮೇಲೆ ಇಟ್ಟಿದ್ದ ದೇವಾಲಯದ ಪರಿಚಾರಕರ ಜವಾಬ್ದಾರಿ. ಇನ್ನೊಂದು ಕಡೆ ನಾಟಕದ ಹವ್ಯಾಸ. 

ಅಪ್ಪನಿಗೂ ಗೊತ್ತಾಯ್ತು. ಇವನ ಒಳಗೊಬ್ಬ ಕಲಾವಿದ ಇದ್ದಾನೆ ಅಂತ. ಆಗಲೇ ಪರಕಾಯ ಪ್ರವೇಶದ ಗುಟ್ಟುಗಳನ್ನು, ಸ್ಟೇಜು, ಎದುರಿಗಿರುವ ಪ್ರೇಕ್ಷಕರನ್ನು ನಿಭಾವಣೆ ರೀತಿ, ಪಾತ್ರ ಮಾಡುವಾಗ ಹುಮ್ಮಸ್ಸು ತಂದು ಕೊಳ್ಳುವ ಬಗೆ ಎಲ್ಲವನ್ನು ಹೇಳಿಕೊಟ್ಟರು. 

ಇವೆಲ್ಲವೂ ಶಂಕರರ ಸ್ಟೇಜ್‌ಫಿಯರ್‌ ಎನ್ನುವ ಭೂತವನ್ನು ಓಡಿಸುವಲ್ಲಿ ನೆರವಾಯಿತು.  ಈ ಹೊತ್ತಿಗೆ- ಅಣ್ಣ ವೀರಭದ್ರ ಪ್ರಸಾದ್‌ ಮೈಕೋದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೂ ಇದೇ ರೀತಿಯ ನಾಟಕದ ಗೀಳು. ಬೆಂಗಳೂರಲ್ಲಿ ಸಾಮಾಜಿಕ ನಾಟಕಗಳನ್ನು ಆಡುತ್ತಿದ್ದರು. ನಾಗಾಭರಣ, ಉಮಾಶ್ರೀ ಇಂಥವರ ಜೊತೆ ಪಳಗಿದ್ದರು. ಅಣ್ಣನ ನಾಟಕಾಭಿರುಚಿ ಕೂಡ ಶಂಕರರ ಮೇಲಾಗಿ  ಪ್ರಬುದ್ಧವಾಗುತ್ತಾ ಹೋದರು. ಶಂಕರರ ಧ್ವನಿ, ಭಾವಗಳು ಭೀಮ, ರಾವಣ, ದುರ್ಯೋಧನರಂಥ ಘೋರ ಪಾತ್ರಗಳಿಗೆ ಹೇಳಿಮಾಡಿಸಿದಂತಿದೆ. ಈ ಕಾರಣಕ್ಕೆ ಬೇರೆ, ಬೇರೆ ಕಂಪೆನಿಗಳವರು “ನಮ್ಮಲ್ಲೂ ದುರ್ಯೋದನನಾಗಿ ಬನ್ನಿ’ ಅಂತ ಕರೆಯುತ್ತಾರೆ.  ಶಂಕರರು ದೇವಸ್ಥಾನದ ಪೂಜೆಯ ಜೊತೆ, ಜೊತೆಗೆ ನಾಡಿನಾದ್ಯಂತ ನಾಟಕವಾಡುತ್ತಲೇ ಅಭಿರುಚಿ ಉಳಿಸಿಕೊಂಡಿದ್ದಾರೆ. 

ಶಂಕರ್‌ ಸುಮಾರು 25 ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ಸುತ್ತಮುತ್ತಲ ಜಿಲ್ಲೆ, ಹಳ್ಳಿಯವರಿಗೆಲ್ಲಾ ಚಿರಪಚಿತರು. ಶಂಕರ್‌ ಅನ್ನೋದಕ್ಕಿಂತ ಹೆಚ್ಚಾಗಿ ದುರ್ಯೋಧನನಾಗಿ ಒಂದು ಸಲ ಅವರ ಘರ್ಜನಾಯುಕ್ತ ಪಾತ್ರವನ್ನು ನೋಡಿದವರಿಗೆ ಮನದಲ್ಲಿ ಅಚ್ಚೊತ್ತುತ್ತದೆ.  “ನನಗೆ ಸಿನಿಮಾದಲ್ಲೂ ಅವಕಾಶ ಬಂದಿತ್ತು. ಆದರೆ ದೇವಸ್ಥಾನದ ಜವಾಬ್ದಾರಿ ಹೆಚ್ಚಿದೆ. ಅದನ್ನು ಬಿಡುವಹಾಗಿಲ್ಲ. ಪ್ರತಿದಿನ ಬೆಳಗ್ಗೆ ದೇವರ ಪೂಜೆ ಸಾಮಗ್ರಿ ಸಿದ್ಧ ಮಾಡಬೇಕು, ನೀರು ತರಬೇಕು, ಅಭಿಷೇಕ, ಅಲಂಕಾರ, ಮಂಗಳಾರತಿ ಸಮಯದಲ್ಲಿ ಅಣಿಮಾಡುವ ಜವಾಬ್ದಾರಿ ಇರುತ್ತದೆ.  ಆದ್ದರಿಂದ ನಾನೇ ಹಿಂದೆ ಸರಿದೆ’ ಅಂತಾರೆ ಶಂಕರ್‌.

ಹಾಗಂತ ನಾಟಕದ ನಂಟನ್ನು ಬಿಟ್ಟಿಲ್ಲ. ದೇವಸ್ಥಾನದ ಪೂಜೆ ಪುನಸ್ಕಾರದ ಜೊತೆ ರಿಹರ್ಸಲ್‌ ಮಾಡೋದು, ನಾಟಕವಾಡೋದು  ಹೀಗೆ ಕಂಬಿಯ ಮೇಲಿನ ನಡಿಗೆ ಜೋರಾಗೇ ಇದೆ. 

“ನನಗೆ ಮನೆಯವರ ನೆರವಿನ ಜೊತೆಗೆ ದೇವಸ್ಥಾನದ ಸಿಬ್ದಂದಿಯ ನೆರವು ಚೆನ್ನಾಗಿದೆ.  ಅದಕ್ಕೆ ಇಷ್ಟು ವರ್ಷಗಳ ಕಾಲ ದುರ್ಯೋಧನ, ಜರಾಸಂಧನಾಗಿರೋದು’ ಅಂತಾರೆ ಶಂಕರ್‌.

ಗುರುರಾಜ್‌
ಚಿತ್ರಗಳು- ಡಿ. ಸಿ. ನಾಗೇಶ್‌

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.