ಟುಕ್‌, ಟುಕ್‌ ಸದ್ದನು ಕೇಳಿದಿರಾ? ಬೆಟ್ಟದಗುಟುರ ನೋಡಿದಿರಾ?


Team Udayavani, Jun 17, 2017, 12:14 PM IST

4.jpg

ದೊಡ್ಡ ಮರಗಳಿರುವ ಪರ್ವತ ಪ್ರದೇಶದಲ್ಲಿ ಇರುವುದರಿಂದ ಇದರ ಇರುನೆಲೆಯನ್ನು ಆದರಿಸಿ ಇದಕ್ಕೆ ಅನ್ವರ್ಥಕವಾಗಿ ಬೆಟ್ಟದಗುಟುರ ಎಂಬ ಹೆಸರು ಬಂದಿದೆ. ಇದು ಮೈನಾ ಹಕ್ಕಿಗಿಂತ ಸ್ವಲ್ಪದೊಡ್ಡದು. ಈ ಗುಂಪಿಗೆ ಸೇರಿದ ಬಿಳಿ ಗೆರೆಗಳಿರುವ ರೇಖೆ ಕುತ್ತಿಗೆಯ ಗುಟುರ, ಕಂದು ತಲೆಯ ಗುಟುರ, ನೀಲಿ ಕುತ್ತಿಗೆಯ ಗುಟುರ, ಬಿಳಿ ಕೆನ್ನಯ ಗುಟುರ, ದೊಡ್ಡ ಗುಟುರದ ಗುಂಪಿನಲ್ಲಿ ಇದು ಸ್ವಲ್ಪದೊಡ್ಡ ಹಕ್ಕಿ ಎಂದರೆ ತಪ್ಪಾಗಲಾರದು. 32-33 ಸೆಂ.ಮೀ ದೊಡ್ಡದಾಗಿ ಇರುತ್ತದೆ. 200 ರಿಂದ 220 ಗ್ರಾಂ. ಭಾರಇರುತ್ತದೆ.  ಬಹು ಎತ್ತರದ ಗುಡ್ಡಗಾಡು, ಹಿಮಾಲಯ ಪರ್ವತ ಇದಕ್ಕೆ ತುಂಬಾ ಪ್ರಿಯ. ಅಲ್ಲಿರುವ ಎತ್ತರವಾದ ಮರ, ಸ್ವಲ್ಪ ಮೆತ್ತನೆಯ ಮರದ ದಿನ್ನೆ ಕೊರೆದು ಅಲ್ಲಿ ತನ್ನ ಗೂಡನ್ನು ನಿರ್ಮಿಸುತ್ತದೆ.  ಕೆಲವೊಮ್ಮೆ ಮರ ಕುಟುಕಗಳು ಕೊರೆದ ಮರದ ಹೊಟ್ಟೆಯನ್ನೂ ವಾಸಸ್ಥಾನ ಮಡಿಕೊಂಡು  ಸಂಸಾರಮಾಡುತ್ತದೆ.

 ಕೂಗಿನ ಮೂಲಕವೇ ತನ್ನ ಇರುನೆಲೆಯ ವ್ಯಾಪ್ತಿಯನ್ನು, ಬೆದರಿಕೆಯನ್ನು ಹಾಕುತ್ತದೆ.  ಇಂತಹ ಕೂಗು ತನ್ನ ಸಂಗಾತಿಯನ್ನು ಅರಸಲು, ಕರೆಯಲು ಇಲ್ಲವೇ ಗೂಡು ನಿರ್ಮಿಸಲು…ಹೀಗೆ ಭಿನ್ನದನಿಯನ್ನು ತೆಗೆಯುವ ನೈಪುಣ್ಯ  ಈ ಬೆಟ್ಟದಗುಟುರ ಹಕ್ಕಿಗೆ ಇದೆ.  ದಟ್ಟ ಕಾಡಿನ ದೊಡ್ಡ ಮರಗಳ ನಡುವೆಯೇ ಇರುವುದರಿಂದ ಇದು ಕಾಣುವುದು ಅಪರೂಪ. 

ಇದು, ದಪ್ಪತಲೆ, ಕಂದು ಕಪ್ಪಿನ ಕುಳ್ಳ ಕುತ್ತಿಗೆಯಿಂದ ಕೂಡಿದೆ. ಈ ಹಕ್ಕಿಗೆ, ದೊಡ್ಡ ತಿಳಿ ಹಳದಿ ಚುಂಚಿದೆ. ಅದರ ಮೇಲಾºಗದಲ್ಲಿ ಕಪ್ಪು ಬಣ್ಣದ ಗೆರೆ ಇದೆ. ಹಕ್ಕಿಗೆ ಹೆಚ್ಚು 
ವಯಸ್ಸಾದಂತೆ ಈಗೆರೆಯೂ ದೊಡ್ಡದಾಗುವುದೋ ಹೇಗೆ ಎಂಬುದನ್ನು ಅಧ್ಯಯನದಿಂದ ತಿಳಿಯಬೇಕಾಗಿದೆ. ಇತರ ಬಾರ್ಬೆಟ್‌ ಅಥವಾ ಗುಟುರಗಳಿಗೆ ಹೋಲಿಸಿದರೆ ಇದರ ಕೂಗೂ ಭಿನ್ನವಾಗಿದೆ.  ಕಂದುಕಪ್ಪು ಬಣ್ಣದ ತಲೆ ಇದರ ಕೆಳಗೆ ಸ್ವಲ್ಪ  ಹಳದಿ ಕುತ್ತಿಗೆ ಪಟ್ಟಿ, ಬಾಲದ ಬುಡದಲ್ಲಿ ಅಂದರೆ ರೆಂಪ್‌ನಲ್ಲಿ ಇರುವ ಕೆಂಪುಬಣ್ಣ ಇದನ್ನು ಗುರುತಿಸಲು ಸಹಕಾರಿ. ಬೆಟ್ಟದ ಗುಟುರವನ್ನು ಭಾರತದ ಪರ್ವತದ ಹಕ್ಕಿ ಅಂತಲೂ ಕರೆಯುತ್ತಾರೆ. 

ಸಾಮಾನ್ಯವಾಗಿ ವಲಸೆ ಹೋಗುವುದು ಕಡಿಮೆ. ಇರುವ ಜಾಗದಲ್ಲೇ ಇರುತ್ತದೆ. ಕೆಲವೊಮ್ಮೆ ಆಹಾರದ ಅಭಾವ, ಇಲ್ಲವೇ ಇರುನೆಲೆಯಲ್ಲಿ ತೊಂದರೆಯಾದರೆ ಮಾತ್ರ ಬೇರೆಡೆ ಹೋಗುವುದು. ಇತರ ಹಕ್ಕಿಗಳಂತೆ ಇದು ಪ್ರತಿ ವರ್ಷ ಅದೇ ಸಮಯದಲ್ಲಿ ವಲಸೆ ಹೋಗುವುದು ಕಡಿಮೆ. ಹಾಗಾಗಿ ಇದು ವಲಸೆ ಹಕ್ಕಿಯಲ್ಲ. ಹೊಟ್ಟೆಯ ಕೆಳಭಾಗದಲ್ಲಿ  ಕಂದು ಬಣ್ಣದಗೆರೆ ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ. ನಮ್ಮ ರಾಜ್ಯದಲ್ಲಿ ಆಲ, ಬಸರಿ, 
ಅತ್ತಿ ಹಣ್ಣು ಬಿಟ್ಟಾಗ ಅಲ್ಲೆ ಮರದಲ್ಲಿ ಕುಳಿತು ಟುಕ್‌, ಟುಕ್‌ಎಂದು ಕೂಗುತ್ತದೆ ಕೆಂಪು ಎದೆಗುಟರ. ಊರ ಮಧ್ಯೆ ಇಲ್ಲವೇ ಕಾಡಿನ ಮರಗಳಲ್ಲಿ ಕಾಣುವುದೂ ಕೂಡ ಈ ಗುಟುರದ ಪ್ರಬೇಧ. 

ಬೆಟ್ಟದ ಬಾರ್ಬೆಟ್‌ ಒಂದು ನಿಮಿಷದಲ್ಲಿ ಸುಮಾರು 30 ಸಲ ಟುಕ್‌, ಟುಕ್‌ ಎಂದು ಕೂಗುವುದು. ಇದು ಒಂದೇ ರಾಗದಲ್ಲಿ ಮತ್ತು ಶೈಲಿಯಲ್ಲಿರುತ್ತದೆ. ಹೀಗೆ ಕೂಗುವಾಗ ಕೊಕ್ಕು ಮುಚ್ಚಿರುವುದು ವಿಶೇಷ.  ಚುಂಚು ಮುಚ್ಚಿ, ಕುತ್ತಿಗೆಯನ್ನು ಉಬ್ಬಿಸಿ ಸ್ವರ ಹೊರಡಿಸುತ್ತದೆ. ಇದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕ ಬೇಕಾಗಿದೆ. ಡಿಸೆಂಬರ್‌-ಜನವರಿ ಇದು ಮರಿಮಾಡುವ ಸಮಯ.  ಈ ಸಂದರ್ಭದಲ್ಲಿ ಇದು ಕೂಗುತ್ತಲೇ ಇರುತ್ತದೆ. ಜನವರಿ-ಏಪ್ರಿಲ್‌ ಅವಧಿಯಲ್ಲಿ ಮರಗಳ ಟೊಂಗೆ, ಡೊಂಗರಗಳಲ್ಲಿ ಗೂಡು ಮಾಡಿಕೊಂಡು ಅದರಲ್ಲಿ 3-4 ಬಿಳಿ 
ತತ್ತಿ ಇಟ್ಟು ಕಾವು ಕೊಟ್ಟು ಮರಿಮಾಡುತ್ತದೆ. ಗಂಡು -ಹೆಣ್ಣು ಸೇರಿ ಮರಿಗಳ ರಕ್ಷಣೆ ಮಾಡುತ್ತದೆ.  ಗುಟುಕು ನೀಡುತ್ತವೆ.  ಹಾರಲು ಕಲಿಸುತ್ತದೆ.  ಮರಿ ಬಲಿತು ದೊಡ್ಡದಾಗಿ ಸ್ವತಂತ್ರವಾಗಿ ಬದುಕಲು ಬೇಕಾದ ತರಬೇತಿಯನ್ನು ತಂದೆತಾಯಿಯ ಜೊತೆಯಲ್ಲೆ ಕಲಿಯುತ್ತದೆ. 
ಕಾಡಿನ ಅಳಿವು ,ದೊಡ್ಡ ಮರಗಳು ಕಡಿಮೆಯಾಗುತ್ತಿರುವುದರಿಂದ ಇದರ ಇರುನೆಲೆಗಳಿಗೆ ಸಂಚಕಾರ ಬಂದು,  ಸಂಖ್ಯೆ ಕಡಿಮೆಯಾಗುತ್ತಿದೆ. ಈ ಸುಂದರ ಪಕ್ಷಿಯ ಉಳಿವಿಗಾಗಿ, ಕಾಡು ಬೆಳೆಸಿ, ಅಲ್ಲಿ ದೊಡ್ಡ ಮರಗಳನ್ನು ರಕ್ಷಿಸಬೇಕಾಗಿದೆ. 

ಪಿ. ವಿ. ಭಟ್‌ ಮೂರೂರು 

ಟಾಪ್ ನ್ಯೂಸ್

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.