ಅರಿವಿನ ದೀಪ
Team Udayavani, Feb 4, 2020, 5:53 AM IST
17ನೇ ಶತಮಾನದ ಅತ್ಯಂತ ಪ್ರಸಿದ್ಧ ಗಣಿತಜ್ಞ ಗೆಲಿಲಿ ಗೆಲಿಲಿಯೋ ಮೊದಲಿಗೆ ತನ್ನ ತಂದೆಯ ಆಸೆಯನ್ನು ಪೂರೈಸಲಿಕ್ಕೆಂದು ಪೀಸಾ ವಿಶ್ವವಿದ್ಯಾಲಯದಲ್ಲಿ ವೈದ್ಯಶಾಸ್ತ್ರದ ಪದವಿ ತರಗತಿ ಸೇರಿದ್ದ.
ಅಲ್ಲೇ ಪಕ್ಕದಲ್ಲಿದ್ದ ಪೀಸಾ ದೇವಾಲಯದಲ್ಲಿ ದೇವತೆಯ ಮೂರ್ತಿಯ ಎದುರು ಒಂದು ಕಂಚಿನ ದೀಪವನ್ನು ಉದ್ದನೆ ಸರಪಳಿಗೆ ನೇತಾಡಿಸಿದ್ದರು. ದೀಪದ ಸರಪಳಿಯನ್ನು ಒಂದು ಬದಿಗೆ ಎಳೆದು ದೀಪ ಹೊತ್ತಿಸಿ ಬಿಡುವುದು ವಾಡಿಕೆಯಾಗಿತ್ತು. ಆಗ ಆ ಸರಪಳಿ ಸುಮಾರು ಹೊತ್ತು ಅತ್ತಿತ್ತ ಆಂದೋಲಿಸುತ್ತ ಕೊನೆಗೆ ನಡುಬಿಂದುವಿಗೆ ಬಂದು ತಟಸ್ಥವಾಗುತ್ತಿತ್ತು. ದಿನವೂ ಈ ಆಟ ನೋಡಲು ನಿಲ್ಲುತ್ತಿದ್ದ ಗೆಲಿಲಿಯೋ ಅತ್ತ ತುದಿಯಿಂದ ಇತ್ತ ತುದಿವರೆಗೆ ಓಲಾಡಲು ದೀಪ ತೆಗೆದುಕೊಳ್ಳುವ ಸಮಯವೆಷ್ಟು ಎನ್ನುವುದನ್ನು ನಾಡಿ ಹಿಡಿದು ಲೆಕ್ಕ ಹಾಕುತ್ತಿದ್ದ. ಪ್ರತಿ ಓಲಾಟವೂ ಹಿಂದಿನ ಓಲಾಟದಿಂದ ಎಷ್ಟು ಕಡಿಮೆಯಾಗುತ್ತಿದೆ, ಯಾವ ದರದಲ್ಲಿ ಅದರ ಆಂದೋಲನ ತಗ್ಗುತ್ತಿದೆ ಎನ್ನುವುದನ್ನು ಕೆಲವೇ ದಿನಗಳಲ್ಲಿ ಕರಾರುವಾಕ್ಕಾಗಿ ಲೆಕ್ಕ ಹಾಕಲು ಅವನಿಗೆ ಸಾಧ್ಯವಾಯಿತು. ಇದರಿಂದ ಗಣಿತದಲ್ಲಿ ಆಸಕ್ತಿ ಹುಟ್ಟಿತು. ಗಣಿತವನ್ನು ಕಲಿತರೆ ಈ ಜಗತ್ತಿನ ಎಲ್ಲ ರಹಸ್ಯಗಳನ್ನೂ ಅರಿಯಬಹುದು ಎನ್ನಿಸಿತು. ಅಪ್ಪನನ್ನು ಒಪ್ಪಿಸಿ, ವೈದ್ಯಶಾಸ್ತ್ರಕ್ಕೆ ಶರಣು ಹೊಡೆದು ಗಣಿತದ ತರಗತಿಗಳಿಗೆ ಸೇರಿಕೊಂಡ.
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ