ಹೊನ್ನಮ್ಮ: ಚನ್ನಪಟ್ಟಣದ “ಚಿನ್ನ’ಮ್ಮ!


Team Udayavani, Sep 13, 2017, 7:40 AM IST

honnamma.jpg

ತಿಥಿ ಸಿನಿಮಾದ ಸೆಂಚುರಿ ಗೌಡ ನೆನಪಿದ್ದಾರಲ್ವಾ? ಜಗುಲಿಯ ಮುಂದೆ ಕುಕ್ಕರಗಾಲಿನಲ್ಲಿ ಕುಳಿತು ಹೋಗಿ ಬರುವವರಿಗೆ ಬೈಯುತ್ತಾ ಇರುವ ಮುದುಕರು ಎಲ್ಲ ಊರಿನಲ್ಲೂ ಇದ್ದಾರೆ. ಕಿರಿಕಿರಿ ಮಾಡ್ಬೇಡಿ ಅಂತ ಮಕ್ಕಳಿಂದ ಬೈಸಿಕೊಳ್ಳುತ್ತ, ರಾಮಾ- ಕೃಷ್ಣಾ ಅಂತ ಜಪ ಮಾಡುತ್ತಾ, ಕವಳ ಕುಟ್ಟುತ್ತ ಮೊಮ್ಮಕ್ಕಳಿಗೆ ಪುರಾಣದ ಕಥೆ ಹೇಳುವ ವಯಸ್ಸದು. ಆದರೆ ಈ ಅಜ್ಜಿ ಹಾಗಲ್ಲ. ಈಕೆಯ ವಯಸ್ಸಿಗೂ, ಉತ್ಸಾಹಕ್ಕೂ ತಾಳಮೇಳವೇ ಇಲ್ಲ. ಏನಾದರೂ ಸಮಸ್ಯೆ ಕಾಡಿದರೆ ಜಗುಲಿಕಟ್ಟೆಯಲ್ಲಿ ಕುಳಿತು ಗೊಣಗುವುದಿಲ್ಲ, ಬದಲಿಗೆ ಜಿಲ್ಲಾಧಿಕಾರಿ ಕಚೇರಿಯ ಬಾಗಿಲು ತಟ್ಟಿ ಬರುತ್ತಾರೆ.  

ಆಕೆಯ ಹೆಸರು ಹೊನ್ನಮ್ಮ. ವಯಸ್ಸು 86 ವರ್ಷ, ಹುಮ್ಮಸ್ಸು 30ರಷ್ಟು. ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ವಾಸ. ಒಬ್ಬಂಟಿಯಾಗಿ ಬದುಕುತ್ತಿರುವ ಗಟ್ಟಿ ವ್ಯಕ್ತಿತ್ವ ಅವರದ್ದು. ವರ್ಷ ಎಂಬತ್ತಾದರೂ ತುಂಬಾ ಸ್ವತಂತ್ರವಾಗಿ, ಒಬ್ಬರೇ ಎಲ್ಲಿಗೆ ಬೇಕಾದರೂ ಹೋಗಿ ಬರುತ್ತಾರೆ. ವರ್ಷದ ಹಿಂದೆ ಹೊನ್ನಮ್ಮನಿಗೆ ಊರಿನಲ್ಲಿ ಕೆಲವರಿಂದ ಸಮಸ್ಯೆ ಎದುರಾಯ್ತು. ಆಕೆ ಹೆದರಿಕೊಳ್ಳದೆ ಸೀದಾ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಡಿ.ಸಿ. ಮುಂದೆ ಕಷ್ಟ ಹೇಳಿಕೊಂಡರು. ಜಿಲ್ಲಾಧಿಕಾರಿ ಮಮತಾ ಗೌಡ ಕೂಡಲೇ ಅಧಿಕಾರಿಗಳೊಂದಿಗೆ ಮಾತಾಡಿ ಸಮಸ್ಯೆ ಪರಿಹರಿಸಿದರು. 
ಅಜ್ಜಿ ಅಷ್ಟಕ್ಕೇ ಸುಮ್ಮನಾಗಿಲ್ಲ. ಈಗಲೂ ಊರಿನ ಸಮಸ್ಯೆಗಳನ್ನು ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದು, ಶೀಘ್ರವಾಗಿ ಪರಿಹರಿಸಿ ಎಂದು ವಿನಯದಿಂದ ತಾಕೀತು ಮಾಡುತ್ತಾರೆ. ಹತ್ತನೇ ತರಗತಿ ಹುಡುಗಿಯೊಬ್ಬಳ ವಿದ್ಯಾಭ್ಯಾಸಕ್ಕೆ ನೆರವಾಗುವಂತೆ ಡಿ.ಸಿ.ಗೆ ಮನವಿ ಮಾಡಿದ್ದಾರೆ. ಯಾರಾದರೂ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಬೇಕೆಂದಿದ್ದರೆ ಅವರ ಜೊತೆಗೆ ಅಥವಾ ಯಾರಿಗಾದರೂ ಸಮಸ್ಯೆಯಿದ್ದರೆ ಅವರನ್ನು ಕರೆದುಕೊಂಡು ಹೊನ್ನಮ್ಮ ಡಿ.ಸಿ. ಆಫೀಸಿಗೆ ಹೋಗುತ್ತಿರುತ್ತಾರೆ. ದೊಡ್ಡಮಳೂರಿನಿಂದ ಜಿಲ್ಲಾಕೇಂದ್ರಕ್ಕೆ 15-18 ಕಿ.ಮೀ. ಒಬ್ಬಂಟಿಯಾಗಿ ಬಸ್‌ನಲ್ಲೇ ಓಡಾಡುವ ಆಕೆಯ ಉತ್ಸಾಹಕ್ಕೆ ಶರಣು ಹೇಳಲೇಬೇಕು. 

ಹತ್ತನೇ ವರ್ಷಕ್ಕೆ ಮದ್ವೆ!
“ಏನಜ್ಜಿ ಈ ವಯಸ್ಸಲ್ಲೂ ಇಷ್ಟೊಂದೆಲ್ಲಾ ಓಡಾಡ್ತೀರ? ಏನ್‌ ಓದಿದ್ದೀರಿ?’ ಅಂತ ಮಾತಾಡಿಸಿದಾಗ, “ಅಯ್ಯೋ ನಂಗೆ ಮದ್ವೆ ಆದಾಗ ಬರೀ 10 ವರ್ಷ. ಇನ್ನು ಓದೋದೆಲ್ಲಿಂದ? ನಾಕೋ, ಐದೋ ಕ್ಲಾಸಲಿದ್ದಾಗ್ಲೆà ಮದ್ವೆ ಮಾಡಿºಟ್ರಾ. ಮಗ್ಗಿಪುಸ್ತಕ, ಪಾಟೀಚೀಲಕ್ಕೆ ಓದು ಮುಗೀತು’ ಅಂತಾರೆ ಹೊನ್ನಮ್ಮ. ಗಂಡ ತೀರಿ ಹೋಗಿದ್ದಾರೆ. ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಈಗ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. 

ಜಿಲ್ಲಾಧಿಕಾರಿ ಮಮತಾ ಗೌಡ ಅವರಿಗೂ ಅಜ್ಜಿಯ ಹುಮ್ಮಸ್ಸನ್ನು ನೋಡಿ ಅಚ್ಚರಿ ಮತ್ತು ಖುಷಿ. ಅವರ ಸಮಸ್ಯೆಗಳಿಗೆ ಖುದ್ದಾಗಿ ಸ್ಪಂದಿಸಿದ್ದು, ಆಕೆಯಿರುವಲ್ಲಿಗೇ ಹೋಗಿ ಕಾಟ ಕೊಟ್ಟವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

“ಹೊನ್ನಮ್ಮಜ್ಜಿ ಈ ವಯಸ್ಸಿನಲ್ಲೂ ಇಂಡಿಪೆಂಡೆಂಟ್‌, ಎನರ್ಜಿಟಿಕ್‌ ಆಗಿರೋದನ್ನು ನೋಡಿದ್ರೆ ತುಂಬಾ ಖುಷಿಯಾಗುತ್ತೆ. ಆಫೀಸಿಗೆ ಆಗಾಗ ಬರುತ್ತಿರುತ್ತಾರೆ. ಅವರ ಉತ್ಸಾಹ, ಜನಪರ ಕಾಳಜಿ ಎಲ್ಲರಿಗೂ ಮಾದರಿಯಾಗಲಿ’.

-ಮಮತಾ ಗೌಡ, ರಾಮನಗರ ಜಿಲ್ಲಾಧಿಕಾರಿ

ಟಾಪ್ ನ್ಯೂಸ್

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.