ನಳಿನಾಕ್ಷಿ ಕೇಳೆ ಈಗ…
Team Udayavani, Feb 17, 2017, 3:45 AM IST
ನಾವು ಸಾಮಾನ್ಯವಾಗಿ ಕಣ್ಣನ್ನು ತುಂಬ ಹಗುರವಾಗಿ ತೆಗೆದುಕೊಂಡುಬಿಡುತ್ತೇವೆ. ಅದಕ್ಕೂ ಒಂದು ಆರೈಕೆ ಬೇಕು, ಅದಕ್ಕೂ ಪೊಷಕಾಂಶದ ಅಗತ್ಯವಿದೆ, ಅದನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ನಮಗೆ ಅನ್ನಿಸಿರುವುದೇ ಇಲ್ಲ. ಆದರೆ ನಿಮಗೆ ಗೊತ್ತಿರಲಿ, ಉತ್ತಮವಾದ ಎಕ್ಸರ್ಸೈಜ್ನಿಂದ ಮಾತ್ರವೇ ನಿಮ್ಮ ಕಣ್ಣಿನ ಆಕಾರ, ಆರೈಕೆ ಚೆನ್ನಾಗಿ ಆಗೋದಕ್ಕೆ ಸಾಧ್ಯ. ಅಚ್ಚರಿ ಆಗಬಹುದು, ಆದರೂ ಇದು ಸತ್ಯ. ನಿಮ್ಮ ಕಣ್ಣಿನ ಅತ್ಯುತ್ತಮ ಕ್ರಿಯೆಗೆ ಒಳ್ಳೆಯ ಎಕ್ಸರ್ಸೈಜ್ ಅತ್ಯಗತ್ಯ. ನಿಮ್ಮ ಹೃದಯ, ಶ್ವಾಸಕೋಶಕ್ಕೆ ಹೇಗೆ ಎಕ್ಸರ್ ಸೈಜ್ ಉಪಕಾರಿಯೋ, ಕಣ್ಣಿನ ಆರೋಗ್ಯಕ್ಕೂ ಒಳ್ಳೆಯ ಎಕ್ಸರ್ಸೈಜ್ ಉಪಯೋಗಿ. ಕಣ್ಣಿಗೂ ನಿಮ್ಮ ಸ್ಥೂಲ ದೇಹಕ್ಕೆ ಒಂದು ನಂಟಿದೆ.ನಿಮ್ಮ ಸ್ಥೂಲಕಾಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದರೆ, ಕಣ್ಣಿಗೆ ಬೇಕಾದ ಎಕ್ಸರ್ಸೈಜ್ ಮಾಡುವುದು ಅತ್ಯಗತ್ಯ. ಕಣ್ಣಿನ ನರಗಳು ದೇಹದ ಹಲವು ಅಂಗಗಳಿಗೆ ಹೊಂದಿಕೊಂಡಿದ್ದು ಅದು ನಿಮ್ಮ ಆರೋಗ್ಯವನ್ನು ನಿಯಂತ್ರಿಸುತ್ತಿರುತ್ತದೆ.
ಅದಕ್ಕೇನು ಮಾಡಬೇಕು?
ವಾರಕ್ಕೆ 2-3 ಬಾರಿ ಅಂದರೆ 30ರಿಂದ 40 ನಿಮಿಷದಷ್ಟು ಅವಧಿ ವಾಕಿಂಗ್ ಮಾಡಿದರೆ ನಿಮ್ಮ ಕಣ್ಣಿನ ನರಗಳ ಮೇಲೆ ಬೀಳುವ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಸಿಹಿಮೂತ್ರ ಖಾಯಿಲೆ ಮಿತಿಮೀರಿ ಅದು ಕುರುಡಿಗೆ ಕಾರಣವಾಗುವ ವಿಷಯ ನಿಮಗೆ ಗೊತ್ತಲ್ಲ, ಹೆಚ್ಚಿನ ಸಂದರ್ಭದಲ್ಲಿ ಸರಿಯಾದ ಆಹಾರ ತೆಗೆದುಕೊಳ್ಳದೇ ಅಥವಾ ಎಕ್ಸರ್ಸೈಜ್ ಮಾಡದೇ ಇರುವುದೇ ಇದಕ್ಕೆ ಕಾರಣವಾಗಿರುತ್ತದೆ. ವಯೋಸಹಜವಾಗಿ ದೇಹ ಹಣ್ಣಾಗುತ್ತ ಅದೇ ಕಣ್ಣು ಹೋಗುವುದಕ್ಕೂ ಕಾರಣವಾಗುತ್ತದೆ. ಆದರೆ, ನಿರಂತರವಾಗಿ ದೇಹವನ್ನು ಎಕ್ಸರ್ಸೈಜ್ ಮೂಲಕ ಚೆನ್ನಾಗಿ ಇಟ್ಟುಕೊಂಡರೆ ಖಂಡಿತ ಕಣ್ಣು ಸುಂದರವಾಗಿ ಇರಲು ಸಾಧ್ಯ.
ಎಕ್ಸರ್ಸೈಜ್ ಅಂದ್ರೇನು?
ಅಷ್ಟಕ್ಕೂ ಎಕ್ಸರ್ಸೈಜ್ ಅಂದರೆ ಏನು? ಬೆವರಿಳಿಸು, ಕುಳಿತೇಳು, ಭಾರ ಎತ್ತು, ಮೈ ಬಗ್ಗಿಸಿ ಸಾಮು ತೆಗೆ- ಇದಲ್ಲ ಅರ್ಥ. ಎಕ್ಸರ್ಸೈಜ್ ಅಂದರೆ ನಿಮ್ಮ ಲೈಫ್ ಸ್ಟೈಲ್ ಕೂಡ. ಅಂದರೆ ನೀವೇನು ತಿನ್ನುತ್ತೀರಿ, ಎಷ್ಟು ಹೊತ್ತು ದೇಹಕ್ಕೆ ವ್ಯಾಯಾಮ ಒದಗಿಸುತ್ತೀರಿ, ಹೇಗೆ ನಿಮ್ಮ ದೇಹವನ್ನು ನೋಡಿಕೊಳ್ಳುತ್ತೀರಿ- ಇವೆಲ್ಲ ಮುಖ್ಯ. ಕೆಲ ಅಧ್ಯಯನಗಳು ಹೇಳುವ ಪ್ರಕಾರ- ನೀವು ಎಷ್ಟು ದೇಹವನ್ನು ಎಲ್ಲಾ ರೀತಿಯಲ್ಲೂ ಚೆನ್ನಾಗಿಟ್ಟುಕೊಳ್ಳುತ್ತೀರೋ ಅಷ್ಟು ನಿಮ್ಮ ಕಣ್ಣಿನ ಮೇಲೆ ಬೀಳುವ ಒತ್ತಡ ಕಮ್ಮಿಯಾಗುತ್ತದೆ. ಸಂಗೀತ, ನೃತ್ಯ ಹಿನ್ನೆಲೆ ಇರುವ ಏರೋಬಿಕ್ಸ್ ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ