![VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ](https://www.udayavani.com/wp-content/uploads/2024/06/vk-shahikala-415x256.jpg)
‘ಇಡಿ ಕುಟುಂಬ ದುಃಖಿತವಾಗಿದೆ’ : ರಾಣಿ ಎಲಿಜಬೆತ್ ಹೇಳಿದ್ದೇನು ..?
Team Udayavani, Mar 10, 2021, 3:41 PM IST
![“Whole Family Saddened”: Queen Vows To Address Harry-Meghan Racism Claims](https://www.udayavani.com/wp-content/uploads/2021/03/10-7-620x372.jpg)
ಲಂಡನ್ : ಜನಾಂಗೀಯ ತಾರತಮ್ಯಕ್ಕೆ ಸಂಬಂಧಿಸಿದ ಪ್ರಿನ್ಸ್ ಹ್ಯಾರಿ ಪತ್ನಿ ಮೇಘನ್ ಮಾರ್ಕೆಲ್ ಮಾಡಿರುವ ಆರೋಪಕ್ಕೆ ರಾಣಿ ಎಲಿಜಬೆತ್ ಪ್ರತಿಕ್ರಿಯೆ ನೀಡಿದ್ದಾರೆ.
ಮೇಘನ್ ಆರೋಪದ ಬಗ್ಗೆ ಕಳಕಳಿ ಹಾಗೂ ಕಾಳಜಿ ಇದೆ. ಸಮಸ್ಯೆಯನ್ನು ಕುಟುಂಬ ಖಾಸಗಿಯಾಗಿ ಬಗೆಹರಿಸಲಿದೆ ಎಂದು ಅವರು ಹೇಳಿದ್ದಾರೆ.
ಹ್ಯಾರಿ ಹಾಗೂ ಮೇಘನ್ ಗೆ ಕಳೆದ ಕೆಲವು ವರ್ಷಗಳು ಸವಾಲಿನಿಂದ ಕೂಡಿದ್ದವು ಎನ್ನುವ ವಿಚಾರ ತಿಳಿದು ಇಡಿ ಕುಟುಂಬ ದುಃಖಿತವಾಗಿದೆ ಎಂದು ಎಲಿಜಬೆತ್ ಪ್ರತಿಕ್ರಿಯಿಸಿದ್ದಾರೆ.
ಓದಿ : ನೇಣುಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ ; ಕೊಲೆ ಶಂಕೆ!
ಸದ್ಯ ಕೇಳಿಬಂದಿರುವ ಆರೋಪಗಳು ಜನಾಂಗೀಯ ತಾರತಮ್ಯಕ್ಕೆ ಸಂಬಂಧ ಪಟ್ಟಿದ್ದು, ಈ ಸಮಸ್ಯೆಗಳನ್ನು ಕುಂಟುಂಬವು ಖಾಸಗಿಯಾಗಿ ಬಗೆಹರಿಸಿಕೊಳ್ಳುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೆರಿಕದ ‘ಟಾಕ್ ಶೋ’ ನಿರೂಪಕಿ ಓಪ್ರಾ ವಿನ್ ಫ್ರೇ ಗೆ ನೀಡಿರುವ ಸಂದರ್ಶನದಲ್ಲಿ ಮೇಘನ್ ಮಾರ್ಕೆಲ್ ನೀಡಿದ ಹೇಳಿಕೆ ಬಳಿಕ ಬಂಕಿಂಗ್ಹ್ಯಾಮ್ ಅರಮನೆ ಒತ್ತಡವನ್ನು ಅನುಭವಿಸಿತ್ತು. ಈ ಸಂದರ್ಶನವು ಆದಿತ್ಯವಾರ ಪ್ರಸಾರವಾಗಿತ್ತು.
ಮೇಘನ್ ಸಂದರ್ಶನದಲ್ಲಿ ಏನು ಹೇಳಿದ್ದರು..?
‘ನನ್ನ ಮಗ ಆರ್ಚಿ ನನ್ನ ಗರ್ಭದಲ್ಲಿದ್ದಾಗ ರಾಜ ಮನೆತನ ಆತಂಕದಲ್ಲಿತ್ತು. ಮಗುವೇನಾದರೂ ಹುಟ್ಟಿದರೆ ಅದರ ಚರ್ಮ ಎಷ್ಟು ಗಾಢವಾಗಿರಬಹುದು ಎಂಬೆಲ್ಲ ಚರ್ಚೆಗಳ ರಾಜಮನೆತನದಲ್ಲಿ ನಡೆಯುತ್ತಿತ್ತು. ನಾನು ಮಾತ್ರ ರಕ್ಷಣೆಗೆ ಒಳಪಟ್ಟಿರಲಿಲ್ಲ. ಆದರೆ, ಕುಟುಂಬದ ಇತರ ಸದಸ್ಯರನ್ನು ರಕ್ಷಿಸಿಕೊಳ್ಳಲು ಅವರು ಸುಳ್ಳು ಹೇಳಲು ಸಿದ್ಧರಿದ್ದರು. ನನ್ನನ್ನು ಮತ್ತು ನನ್ನ ಗಂಡನನ್ನು ರಕ್ಷಿಸಲು ಸತ್ಯವನ್ನು ಹೇಳಲು ಅವರು ಸಿದ್ಧರಿರಲಿಲ್ಲ’ಎಂದು ಆದಿತ್ಯವಾರ ಪ್ರಸಾರವಾದ ಸಂದರ್ಶನದಲ್ಲಿ ಮೇಘನ್ ಮಾರ್ಕೆಲ್ ಹೇಳಿಕೊಂಡಿದ್ದರು.
ರಾಜ ಮನೆತನದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಬೆಂಬಲ ಇಲ್ಲದ ಕಾರಣದಿಂದಾಗಿ ಆತ್ಮಹತ್ಯೆಯ ಯೋಚನೆಯೂ ಬಂದಿತ್ತು ಎಂದು ಅವರು ಹೇಳಿದ್ದರು.
ಓದಿ : ಕೇರಳದಲ್ಲೂ ಕಾಂಗ್ರೆಸ್ ಗೆ ಆಘಾತ, ಪಕ್ಷ ತೊರೆದ ಪಿ.ಸಿ ಚಾಕೋ: ಏನಿದು ಜಟಾಪಟಿ
ಟಾಪ್ ನ್ಯೂಸ್
![VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ](https://www.udayavani.com/wp-content/uploads/2024/06/vk-shahikala-415x256.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ](https://www.udayavani.com/wp-content/uploads/2024/06/pannun-150x84.jpg)
Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ
![canada](https://www.udayavani.com/wp-content/uploads/2024/06/canada-1-150x90.jpg)
G7 ಶೃಂಗಕ್ಕೆ ಮೋದಿಗೆ ಆಹ್ವಾನ: ಸ್ಪಷ್ಟ ಉತ್ತರ ನೀಡದ ಕೆನಡಾ!
![1-wqeqwewqe](https://www.udayavani.com/wp-content/uploads/2024/06/1-wqeqwewqe-1-150x84.jpg)
Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು
![police USA](https://www.udayavani.com/wp-content/uploads/2024/06/police-USA-150x84.jpg)
ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್: ಇಬ್ಬರು ಸಾವು
![Marriage of 72-year-old man with 12-year-old girl; The father sold his daughter for money!](https://www.udayavani.com/wp-content/uploads/2024/06/child-150x83.jpg)
Charsadda: 12ರ ಬಾಲಕಿಯೊಂದಿಗೆ 72 ರ ವೃದ್ಧನ ವಿವಾಹ; ಹಣಕ್ಕಾಗಿ ಮಗಳನ್ನೇ ಮಾರಿದ ತಂದೆ!
MUST WATCH
ಹೊಸ ಸೇರ್ಪಡೆ
![VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ](https://www.udayavani.com/wp-content/uploads/2024/06/vk-shahikala-150x92.jpg)
VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ
![Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ](https://www.udayavani.com/wp-content/uploads/2024/06/pannun-150x84.jpg)
Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ
![2-thirthahalli](https://www.udayavani.com/wp-content/uploads/2024/06/2-thirthahalli-150x90.jpg)
Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ
![NEET ಬೃಹತ್ ಹಗರಣ: ವಿಪಕ್ಷ ಆಕ್ರೋಶ ತೀವ್ರ](https://www.udayavani.com/wp-content/uploads/2024/06/NEET-A-150x89.jpg)
NEET ಬೃಹತ್ ಹಗರಣ: ವಿಪಕ್ಷ ಆಕ್ರೋಶ ತೀವ್ರ
![1-24–monday](https://www.udayavani.com/wp-content/uploads/2024/06/1-24-monday-1-150x90.jpg)
Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.