ಜಾಗ್ವಾರ್ ಲ್ಯಾಂಡ್ ರೋವರ್ : ಆ್ಯಂಟಿ ವೈರಸ್ ತಂತ್ರಜ್ಞಾನ ಕೋವಿಡ್ ವಿರುದ್ಧ ಪರಿಣಾಮಕಾರಿ !


ಶ್ರೀರಾಜ್ ವಕ್ವಾಡಿ, May 19, 2021, 5:24 PM IST

Jaguar Land Rover has announced that its future cabin air purification technology has been shown in laboratory tests to inhibit viruses and airborne bacteria by as much as 97 percent including Covid-19.

 

  • ಜೆ ಎಲ್‌ ಆರ್‌ ನ ಹೊಸ ವಾಯು ಶುದ್ಧೀಕರಣ ತಂತ್ರಜ್ಞಾನವು ಮೊದಲಿಗಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರಲಿದೆ.
  • ಇದು ಶೇಕಡಾ 97 ರಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳೊಂದಿಗೆ ಹೋರಾಡಬಲ್ಲದು.
  • ಕೊರೊನಾವೈರಸ್ ವಿರುದ್ಧ ಶೇಕಡಾ 99.995 ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿದೆ.

ಕೋವಿಡ್ ಸೋಂಕು ವಿಶ್ವವ್ಯಾಪಿ ಹರಡಿದಂದಿನಿಂದ ಹಲವು ಕಾರ್ಪೋರೇಟ್ ಸಂಸ್ಥೆಗಳು, ತಮ್ಮ ಉತ್ಪನ್ನಗಳಲ್ಲಿ ಆ್ಯಂಟಿ ವೈರಸ್ ಅಥವಾ ನಿರ್ದಿಷ್ಟವಾಗಿ ಕೋವಿಡ್ ವಿರುದ್ಧ ಹೋರಾಡುವ ಗುಣಗಳನ್ನು ಪರಿಚಯಿಸಿದೆ. ಸಾಬೂನು, ಸ್ಯಾನಿಟೈಸರ್ ಗಳು ಮಾತ್ರವಲ್ಲದೆ ಹಲ್ಲುಜ್ಜುವ ಬ್ರಶ್, ಎಸಿ, ಪೈಂಟ್, ಪ್ಲೈವುಡ್ ಎಲ್ಲವೂ ಸಾಂಕ್ರಾಮಿಕ ರೋಗದ ವಿರುದ್ಧ ಸಮರ ಸಾರಿದವು. ಅದಕ್ಕೀಗ ಹೊಸ ಸೇರ್ಪಡೆ ಜಾಗ್ವಾರ್ ಲ್ಯಾಂಡ್ ರೋವರ್ ಕಾರು!

ತಮ್ಮ ಕಾರುಗಳಲ್ಲಿ ಪ್ರಸ್ತುತ ಇರುವ ಪಿಎಂ 2.5 ಫಿಲ್ಟರ್ ಮತ್ತು ನ್ಯಾನೋ ಟೆಕ್ನಾಲಜಿ ಫಿಲ್ಟರ್ ನನ್ನು ಬದಲಿಸಿ, ಹೊಸ ವಾಯು ಶುದ್ಧೀಕರಣ ವ್ಯವಸ್ಥೆಯನ್ನು ಪರಿಚಯಿಸಲು ಜಾಗ್ವಾರ್ ಲ್ಯಾಂಡ್ ರೋವರ್ (ಜೆ ಎಲ್‌ ಆರ್) ಮುಂದಾಗಿದೆ. ಈ ಹೊಸ ಫಿಲ್ಟರ್ ನನ್ನು ನ್ಯಾನೋ ಎಕ್ಸ್ ಎಂದು ಕರೆಯಲಾಗುತ್ತದೆ. ಪ್ಯಾನಸೋನಿಕ್ ಸಂಸ್ಥೆಯು ಇದನ್ನು ಅಭಿವೃದ್ಧಿಪಡಿಸುತ್ತಿದೆ.

ಈ ನೂತನ ವಾಯು ಶುದ್ಧೀಕರಣ ತಂತ್ರಜ್ಞಾನವನ್ನು ಎರಡು ಪ್ರತ್ಯೇಕ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಪರೀಕ್ಷಿಸಿವೆ. ಪರ್ಫೆಕ್ಟಸ್ ಬಯೋಮೆಡ್ (ಲಿ.) ಸಂಸ್ಥೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ, 30 ನಿಮಿಷಗಳಲ್ಲಿ ಶೇ.97ರಷ್ಟು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು ಎಂದು ಫಲಿತಾಂಶ ಬಂದಿದೆ.

ಇದನ್ನೂ  ಓದಿ : ಕೋವಿಡ್ ಕಾಲದಲ್ಲಿ ಶಿಕ್ಷಣ ಪ್ರಕ್ರಿಯೆ: ತಜ್ಞರ ಸಮಿತಿ ರಚನೆ- ಸುರೇಶ್ ಕುಮಾರ್

ಅದಲ್ಲದೆ, ನಿರ್ದಿಷ್ಟವಾಗಿ ಕೋವಿಡ್ ವೈರಸ್ ನನ್ನು ಗುರಿಯಾಗಿಸಿಕೊಂಡು, ಟೆಕ್ಸೆಲ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಎರಡು ಗಂಟೆಗಳೊಳಗೆ ಶೇಕಡಾ. 99.995 ರಷ್ಟು ಯಶಸ್ಸಿನ ಪ್ರಮಾಣವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಸರಳವಾಗಿ ಹೇಳುವುದಾದರೆ, ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ಪರಿಚಯಿಸಲು ಹೊರಟಿರುವ ಹೊಸ ನ್ಯಾನೋ ಎಕ್ಸ್ ತಂತ್ರಜ್ಞಾನವು ಹಳೆಯ ನ್ಯಾನೋ ತಂತ್ರಜ್ಞಾನಕ್ಕಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಸಾಮಾನ್ಯವಾಗಿ ವಾಯು ಶುದ್ಧೀಕರಣ ಮಾಡುವುದರೊಂದಿಗೆ, ಈ ತಂತ್ರಜ್ಞಾನವು ಗಾಳಿಯಲ್ಲಿ ಹರಡಿರುವ ಯಾವುದೇ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ನಾಶ ಮಾಡುತ್ತದೆ.

ಈ ತಂತ್ರಜ್ಞಾನವು ಗಾಳಿಯಲ್ಲಿ ನೈಸರ್ಗಿಕವಾಗಿ ಹರಿಡಿಕೊಂಡಿರುವ ಹೈಡ್ರಾಕ್ಸಿಲ್ ರಾಡಿಕಲ್ಸ್ ಅಯಾನ್ ನನ್ನು ಬಳಸುತ್ತದೆ. ಆದರೆ ವಿಶೇಷ ಸಂಗತಿಯೆಂದರೆ, ಜಾಗ್ವಾರ್ ಲ್ಯಾಂಡ್‌ ರೋವರ್ ಸಂಸ್ಥೆಯು ವಿದ್ಯುತ್ ನನ್ನು ಬಳಸಿ ಹೈಡ್ರಾಕ್ಸಿಲ್ ರಾಡಿಕಲ್ಸ್  ನಂತಹ ಟ್ರಿಲಿಯನ್ ಅಯಾನ್‌ ಗಳನ್ನು ಕಾರಿನೊಳಗೆಯೇ ಉತ್ಪಾದಿಸಿ, ಅಲ್ಲಿ ಹರಡಿಕೊಂಡಿರುವ ವೈರಸ್ ಬ್ಯಾಕ್ಟೀರಿಯಾಗಳನ್ನು ಪತ್ತೆ ಹಚ್ಚಿ, ಅದನ್ನು ಕಾರಿನಿಂದ ಹೊಡೆದೋಡಿಸುವುದಲ್ಲದೆ, ಅದರ ಸಂತಾನೋತ್ಪತ್ತಿ ಮತ್ತು ಹರಡುವ ಸಾಮರ್ಥ್ಯವನ್ನು ಕೊನೆಗೊಳಿಸುತ್ತದೆ.

ಇನ್ನು,  ಕಾರುಗಳಲ್ಲಿ ಆ್ಯಂಟಿವೈರಸ್ ತಂತ್ರಜ್ಞಾನವನ್ನು ಅಳವಡಿಸಲು ಕೆಲಸ ಮಾಡುತ್ತಿರುವ ಏಕೈಕ ಕಂಪನಿ ಜಾಗ್ವರ್ ಲ್ಯಾಂಡ್ ರೋವರ್ ಅಲ್ಲ. ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ಉಂಟಾದಾಗ, ಇಟಾಲಿಯನ್ ಕಾರಿನ ಇತರೆ ಭಾಗಗಳ ತಯಾರಕರಾದ ಯು ಎ ಎಫ್‌ ಐ  ಫಿಲ್ಟರ್ಸ್, ಭಾರತದಲ್ಲಿ ಆ್ಯಂಟಿ-ವೈರಸ್ ಕ್ಯಾಬಿನ್ ಫಿಲ್ಟರ್ ನನ್ನು ಬಿಡುಗಡೆ ಮಾಡಿತ್ತು.

ನೀವು ಜೆ ಎಲ್‌ ಆರ್ ಕಾರಿನೊಳಗೆ ಕಾಲಿಡುವ ಮೊದಲು, ಇದನ್ನು ಸಕ್ರಿಯಗೊಳಿಸಬಹುದು. ಐ-ಪೇಸ್, ಲ್ಯಾಂಡ್‌ರೋವರ್, ಡಿಸ್ಕವರಿ ಮತ್ತು ಇವೋಕ್‌ನಂತಹ ಹೊಸ ಜನರೇಷನ್ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು ಎಂದು ಜೆ ಎಲ್‌ ಆರ್ ಸಂಸ್ಥೆ ಹೇಳಿಕೊಂಡಿದೆ. ಆದರೆ ತಂತ್ರಜ್ಞಾನವನ್ನು ಯಾವಾಗ ವಾಣಿಜ್ಯೀಕರಿಸಲಾಗುವುದು ಅಥವಾ ತಮ್ಮ ಸಂಸ್ಥೆಯ ಯಾವ ಕಾರಿನಲ್ಲಿ ಈ ವ್ಯವಸ್ಥೆಯನ್ನು ಮೊದಲು ಪರಿಚಯಿಸಲಾಗುವುದು ಎಂಬುದನ್ನು ಜೆ ಎಲ್‌ ಆರ್ ಇನ್ನೂ ದೃಢೀಕರಿಸಿಲ್ಲ.

“ನಮ್ಮ ಗ್ರಾಹಕರ ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ಆದರಲ್ಲೂ ಈಗ, ಎಂದಿಗಿಂತಲೂ ಹೆಚ್ಚಾಗಿ, ನಾವೆಲ್ಲರೂ ನಮ್ಮ ಪ್ರೀತಿಪಾತ್ರರ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ತಾಂತ್ರಿಕ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ನಮ್ಮ ಪರಿಣಿತ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ ಈ ಸ್ವತಂತ್ರ ಸಂಶೋಧನೆ, ಹಾನಿಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಕ್ಯಾಬಿನ್ ಒಳಗೆ ಸ್ವಚ್ಛ ಮತ್ತು ನೈರ್ಮಲ್ಯ ಪರಿಸರವನ್ನು ಒದಗಿಸುತ್ತದೆ ಎಂದು ನಮ್ಮ ಗ್ರಾಹಕರಿಗೆ ಭರವಸೆ ನೀಡಲು ಬಯಸುತ್ತೇವೆ”

ಡಾ. ಸ್ಟೀವ್ ಇಲೆ, ಜಾಗ್ವಾರ್ ಲ್ಯಾಂಡ್ ರೋವರ್‌ನ ಮುಖ್ಯ ವೈದ್ಯಕೀಯ ಅಧಿಕಾರಿ

ಇದನ್ನೂ  ಓದಿ : ಈ ಸರ್ಕಾರಕ್ಕೆ ದೂರಾಲೋಚನೆಗಳೇ ಇಲ್ಲ : ರಾಜ್ಯ ಸರ್ಕಾರದ ಕೋವಿಡ್ ಪ್ಯಾಕೇಜ್ ಗೆ HDK ಆಕ್ರೋಶ

ಇಂದುಧರ ಹಳೆಯಂಗಡಿ

ಇದನ್ನೂ  ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 291 ಅಂಕ ಕುಸಿತ, 15,100ರ ಗಡಿ ತಲುಪಿದ ನಿಫ್ಟಿ

ಟಾಪ್ ನ್ಯೂಸ್

School Opening; ಚಿಣ್ಣರ ಸ್ವಾಗತಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

School Opening; ಚಿಣ್ಣರ ಸ್ವಾಗತಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

Bidar: ಕಾಲೇಜು ಫೆಸ್ಟ್ ಕಾರ್ಯಕ್ರಮದ ವೇಳೆ ಗುಂಪು ಘರ್ಷಣೆ… ಪೊಲೀಸರು ದೌಡು

College Fest: ಕಾಲೇಜು ಫೆಸ್ಟ್ ಕಾರ್ಯಕ್ರಮದ ವೇಳೆ ಗುಂಪು ಘರ್ಷಣೆ… ಪೊಲೀಸರು ದೌಡು

15

Manipal: ಸಿಟಿ ಬಸ್‌ ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

HDFC Bank: ಸಣ್ಣ ಪ್ರಮಾಣದ ಯುಪಿಐ ವಹಿವಾಟಿನ ಎಸ್‌ ಎಂಎಸ್‌ ಅಲರ್ಟ್ಸ್‌ ಬಂದ್…

HDFC Bank: ಸಣ್ಣ ಪ್ರಮಾಣದ ಯುಪಿಐ ವಹಿವಾಟಿನ ಎಸ್‌ ಎಂಎಸ್‌ ಅಲರ್ಟ್ಸ್‌ ಬಂದ್…

14

IMDb ಟಾಪ್​ 100 ಇಂಡಿಯನ್ ಸೆಲೆಬ್ರಿಟಿ ಲಿಸ್ಟ್: ದೀಪಿಕಾ ನಂ.1, ಸ್ಥಾನ ಪಡೆದ ಕನ್ನಡದ ಈ ನಟ

school

School Reopen: ಈ ರಾಜ್ಯದಲ್ಲಿ ಲೋಕಸಭೆ ಚುನಾವಣಾ ಫಲಿತಾಂಶ ದಿನದಂದೇ ಶಾಲಾ ಕಾಲೇಜು ಆರಂಭ…

Panaji: ಗೆಳೆಯರ ಜೊತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು, ಇಬ್ಬರ ರಕ್ಷಣೆ

Panaji: ಗೆಳೆಯರ ಜೊತೆ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು, ಇಬ್ಬರ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-nothing

Nothing ಇಂಡಿಯಾ ಅಧ್ಯಕ್ಷರಾಗಿ ವಿಶಾಲ್ ಭೋಲಾ ನೇಮಕ

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

Update Android Mobile: Central Govt Warning to Users

Android ಮೊಬೈಲ್‌ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Lok sabha Election: ತ್ರಿಕೋನ ಪೈಪೋಟಿ- ಒಗ್ಗಟ್ಟಿಗೆ ಬಾದಾಮಿ ಬೆಟ್ಟದಷ್ಟೇ ತಾಪತ್ರಯ

Lok sabha Election: ತ್ರಿಕೋನ ಪೈಪೋಟಿ- ಒಗ್ಗಟ್ಟಿಗೆ ಬಾದಾಮಿ ಬೆಟ್ಟದಷ್ಟೇ ತಾಪತ್ರಯ

School Opening; ಚಿಣ್ಣರ ಸ್ವಾಗತಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

School Opening; ಚಿಣ್ಣರ ಸ್ವಾಗತಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

Bidar: ಕಾಲೇಜು ಫೆಸ್ಟ್ ಕಾರ್ಯಕ್ರಮದ ವೇಳೆ ಗುಂಪು ಘರ್ಷಣೆ… ಪೊಲೀಸರು ದೌಡು

College Fest: ಕಾಲೇಜು ಫೆಸ್ಟ್ ಕಾರ್ಯಕ್ರಮದ ವೇಳೆ ಗುಂಪು ಘರ್ಷಣೆ… ಪೊಲೀಸರು ದೌಡು

ಪ್ರೇರಣೆ ನೀಡಿದ ಪ್ರವಚನ-ಆನ್‌ಲೈನ್‌ನಿಂದ ಗಡಿ ದಾಟಿದ ರಾಯಚೂರು ಮಾವು!

ಪ್ರೇರಣೆ ನೀಡಿದ ಪ್ರವಚನ-ಆನ್‌ಲೈನ್‌ನಿಂದ ಗಡಿ ದಾಟಿದ ರಾಯಚೂರು ಮಾವು!

15

Manipal: ಸಿಟಿ ಬಸ್‌ ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.