World Cup Qualifiers;ವಿಕ್ರಮ್‌ಜೀತ್‌ ಸಿಂಗ್‌ ಶತಕ: ನೆದರ್ಲೆಂಡ್ಸ್‌  ಮುಂದೆ ಕ್ಷೀಣ ಅವಕಾಶ


Team Udayavani, Jul 4, 2023, 5:45 AM IST

World Cup Qualifiers; ವಿಕ್ರಮ್‌ಜೀತ್‌ ಸಿಂಗ್‌ ಶತಕ: ನೆದರ್ಲೆಂಡ್ಸ್‌  ಮುಂದೆ ಕ್ಷೀಣ ಅವಕಾಶ

ಹರಾರೆ: ವಿಶ್ವಕಪ್‌ ಅರ್ಹತಾ ಪಂದ್ಯಾವಳಿಯ ಸೋಮವಾರದ ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ನೆದ ರ್ಲೆಂಡ್ಸ್‌ ತಂಡ ಒಮಾನ್‌ ವಿರುದ್ಧ ಡಕ್‌ವರ್ತ್‌-ಲೂಯಿಸ್‌ ನಿಯಮ ದಂತೆ 74 ರನ್‌ ಗೆಲುವು ಸಾಧಿಸಿದೆ. ಮುನ್ನಡೆಯ ಕ್ಷೀಣ ಅವಕಾಶವನ್ನು ಪಡೆದಿದೆ.

ಮಂಗಳವಾರದ ಸ್ಕಾಟ್ಲೆಂಡ್‌- ಜಿಂಬಾಬ್ವೆ ಪಂದ್ಯ ನಿರ್ಣಾಯಕ ಪಾತ್ರ ವಹಿಸಲಿದೆ. ಜಿಂಬಾಬ್ವೆ ಗೆದ್ದರೆ ವಿಶ್ವಕಪ್‌ ಅರ್ಹತೆ ಸಂಪಾದಿಸಲಿದೆ. ಇಲ್ಲವಾದರೆ ಸ್ಪರ್ಧೆ ತೀವ್ರಗೊಳ್ಳಲಿದೆ.

ಸೋಮವಾರದ ಹರಾರೆ ಮುಖಾಮುಖಿಯಲ್ಲಿ ಆರಂಭಕಾರ ವಿಕ್ರಮ್‌ಜೀತ್‌ ಸಿಂಗ್‌ ಮತ್ತು ವನ್‌ಡೌನ್‌ ಬ್ಯಾಟರ್‌ ವೆಸ್ಲಿ ಬರೇಸಿ ಅವರ ಪ್ರಚಂಡ ಬ್ಯಾಟಿಂಗ್‌ ಪರಾಕ್ರಮದಿಂದ ನೆದರ್ಲೆಂಡ್ಸ್‌ 7 ವಿಕೆಟಿಗೆ 362 ರನ್‌ ಪೇರಿಸಿತು. ಒಮಾನ್‌ ಚೇಸಿಂಗ್‌ ವೇಳೆ ಮಳೆ ಬಂದು ಪಂದ್ಯ ಸ್ಥಗಿತ ಗೊಂಡ ಕಾರಣ ಗುರಿಯನ್ನು ಪರಿಷ್ಕರಿ ಸಲಾಯಿತು. 48 ಓವರ್‌ಗಳಲ್ಲಿ 364 ರನ್‌ ಟಾರ್ಗೆಟ್‌ ಲಭಿಸಿತು. ಆದರೆ 44 ಓವರ್‌ ಮುಗಿದೊಡನೆ ಬೆಳಕಿನ ಅಭಾವ ಕಾಡಿದ್ದರಿಂದ ಪಂದ್ಯವನ್ನು ಕೊನೆಗೊಳಿಸಲಾಯಿತು. ಆಗ ಒಮಾನ್‌ 6 ವಿಕೆಟಿಗೆ 246 ರನ್‌ ಮಾಡಿತ್ತು. ಮಧ್ಯಮ ಕ್ರಮಾಂಕದ ಬ್ಯಾಟರ್‌ ಅಯಾನ್‌ ಖಾನ್‌ 105 ರನ್‌ ಬಾರಿಸಿ ಅಜೇಯರಾಗಿದ್ದರು.

117 ರನ್‌ ಜತೆಯಾಟ
ಪಂಜಾಬ್‌ ಮೂಲದ ವಿಕ್ರಮ್‌ಜೀತ್‌ ಸಿಂಗ್‌ 110 ರನ್‌ ಬಾರಿಸಿ ಶತಕ ಸಂಭ್ರಮ ಆಚರಿಸಿದರು. ಇದು ಅವರ ಮೊದಲ ಏಕದಿನ ಶತಕ. 34ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಅವರು 109 ಎಸೆತಗಳನ್ನು ಎದುರಿಸಿ 11 ಬೌಂಡರಿ, 2 ಸಿಕ್ಸರ್‌ ಸಿಡಿಸಿದರು. ಮ್ಯಾಕ್ಸ್‌ ಓಡೌಡ್‌ ಜತೆಗೂಡಿ ಮೊದಲ ವಿಕೆಟಿಗೆ 22 ಓವರ್‌ಗಳಿಂದ 117 ರನ್‌ ಪೇರಿಸಿದರು. ಇದರಲ್ಲಿ ಓಡೌಡ್‌ ಗಳಿಕೆ ಕೇವಲ 35 ರನ್‌.

ವೆಸ್ಲಿ ಬರೇಸಿ ಕೇವಲ 3 ರನ್ನಿನಿಂದ ಶತಕ ತಪ್ಪಿಸಿಕೊಂಡರು. ಇವರ 97 ರನ್‌ ಕೇವಲ 65 ಎಸೆತಗಳಲ್ಲಿ ಬಂತು. ಸಿಡಿಸಿದ್ದು 10 ಬೌಂಡರಿ ಮತ್ತು 3 ಸಿಕ್ಸರ್‌. ಒಮಾನ್‌ ಪರ ಬಿಲಾಲ್‌ ಖಾನ್‌ 3 ವಿಕೆಟ್‌ ಉರುಳಿಸಿ ಹೆಚ್ಚಿನ ಯಶಸ್ಸು ಕಂಡರು.

ಅಯಾನ್‌ ಖಾನ್‌ ಶತಕ
ಕಠಿನ ಸವಾಲು ಪಡೆದ ಒಮಾನ್‌, ಅಯಾನ್‌ ಖಾನ್‌ ಸಾಹಸದಿಂದ ಸೋಲಿನಲ್ಲೂ ಸಮಾಧಾನಪಟ್ಟಿತು. ಅಯಾನ್‌ 92 ಎಸೆತಗಳಿಂದ ಅಜೇಯ 105 ರನ್‌ ಬಾರಿಸಿದರು. ಅವರ ಚೊಚ್ಚಲ ಏಕದಿನ ಶತಕ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಶೋಯಿಬ್‌ ಖಾನ್‌ 46 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ನೆದರ್ಲೆಂಡ್ಸ್‌-7 ವಿಕೆಟಿಗೆ 362 (ವಿಕ್ರಮ್‌ಜೀತ್‌ 110, ಬರೇಸಿ 97, ಓಡೌಡ್‌ 35, ಬಾಸ್‌ ಡಿ ಲೀಡ್‌ 39, ಸಕಿಬ್‌ ಜುಲ್ಫಿಕರ್‌ 33, ಬಿಲಾಲ್‌ ಖಾನ್‌ 75ಕ್ಕೆ 3, ಮೊಹಮ್ಮದ್‌ ನದೀಂ 36ಕ್ಕೆ 2). ಒಮಾನ್‌-44 ಓವರ್‌
ಗಳಲ್ಲಿ 6 ವಿಕೆಟಿಗೆ 246 (ಅಯಾನ್‌ ಖಾನ್‌ ಔಟಾಗದೆ 105, ಶೋಯಿಬ್‌ ಖಾನ್‌ 46, ಆರ್ಯನ್‌ ದತ್‌ 31ಕ್ಕೆ 3, ರಿಯಾನ್‌ ಕ್ಲೀನ್‌ 34ಕ್ಕೆ 2).

ಟಾಪ್ ನ್ಯೂಸ್

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

‘Politics is a thousand times greater’ in Team India; What did Rahul say to Langer?

ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?

Dog Stolen: ನ್ಯಾಯಾಧೀಶರ ಮನೆಯಿಂದ ಸಾಕು ನಾಯಿ ಕಳ್ಳತನ… 12 ಜನರ ವಿರುದ್ಧ ಪ್ರಕರಣ

Dog Stolen: ನ್ಯಾಯಾಧೀಶರ ಮನೆಯಲ್ಲಿದ್ದ ಸಾಕು ನಾಯಿ ಕಳ್ಳತನ… 12 ಜನರ ವಿರುದ್ಧ ಪ್ರಕರಣ

Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ

Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ

ತಿರುಪತಿಗೆಂದು ಹೋಗುತ್ತಿದ್ದವರ ಕಾರು ಪಲ್ಟಿ; ನಾಲ್ವರು ಸಾವು, ಆರು ಮಂದಿಗೆ ಗಾಯ

Ranebennur; ತಿರುಪತಿಗೆಂದು ಹೋಗುತ್ತಿದ್ದವರ ಕಾರು ಪಲ್ಟಿ; ನಾಲ್ವರು ಸಾವು, ಆರು ಮಂದಿಗೆ ಗಾಯ

Elephant Census: ನಾಗರಹೊಳೆಯಲ್ಲಿ ಗಜ ಗಣತಿಗೆ ಚಾಲನೆ, 300 ಸಿಬ್ಬಂದಿಗಳು ಭಾಗಿ

Elephant Census: ನಾಗರಹೊಳೆಯಲ್ಲಿ ಗಜ ಗಣತಿಗೆ ಚಾಲನೆ, 300 ಸಿಬ್ಬಂದಿಗಳು ಭಾಗಿ

truck rams bus in Haryana’s Ambala

Ambala: ಟ್ರಾವೆಲರ್ ಮಿನಿ ಬಸ್ ಗೆ ಟ್ರಕ್ ಡಿಕ್ಕಿ; ಏಳು ಮಂದಿ ಸಾವು, 25 ಪ್ರಯಾಣಿಕರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘Politics is a thousand times greater’ in Team India; What did Rahul say to Langer?

ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?

T20 series; Bangladesh lost series against USA

T20 series; ಯುಎಸ್ ವಿರುದ್ಧ ಸರಣಿ ಸೋತ ಬಾಂಗ್ಲಾ ಹುಲಿಗಳು; ಎರಡನೇ ಪಂದ್ಯದಲ್ಲೂ ಸೋಲು

IPL 2024 Qualifier 2: ಫೈನಲ್‌ಗೇರಲು ಹೈದ್ರಾಬಾದ್‌-ರಾಜಸ್ಥಾನ್‌ ಸೆಣಸು

IPL 2024 Qualifier 2: ಫೈನಲ್‌ಗೇರಲು ಹೈದ್ರಾಬಾದ್‌-ರಾಜಸ್ಥಾನ್‌ ಸೆಣಸು

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

T20 World Cup: ಭಾರತ-ಪಾಕ್‌ ಪಂದ್ಯದ ಟಿಕೆಟ್‌ ಬೆಲೆ 16 ಲಕ್ಷ ರೂ.!

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

IPL: ಆರ್‌ಸಿಬಿಯ “ಕಪ್‌’ ಕನಸು ಕೈಜಾರಿದ್ದೆಲ್ಲಿ?

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

Shirva: ಸ್ನಾನಕ್ಕೆಂದು ಹೋದವನಿಗೆ ಸಿಡಿಲಾಘಾತ; ಕಾಲೇಜು ವಿದ್ಯಾರ್ಥಿ ಬಲಿ

‘Politics is a thousand times greater’ in Team India; What did Rahul say to Langer?

ಟೀಂ ಇಂಡಿಯಾದಲ್ಲಿ ‘ರಾಜಕೀಯ ಸಾವಿರ ಪಟ್ಟು ಹೆಚ್ಚು’; ಲ್ಯಾಂಗರ್ ಬಳಿ ರಾಹುಲ್ ಹೇಳಿದ್ದೇನು?

Dog Stolen: ನ್ಯಾಯಾಧೀಶರ ಮನೆಯಿಂದ ಸಾಕು ನಾಯಿ ಕಳ್ಳತನ… 12 ಜನರ ವಿರುದ್ಧ ಪ್ರಕರಣ

Dog Stolen: ನ್ಯಾಯಾಧೀಶರ ಮನೆಯಲ್ಲಿದ್ದ ಸಾಕು ನಾಯಿ ಕಳ್ಳತನ… 12 ಜನರ ವಿರುದ್ಧ ಪ್ರಕರಣ

Kannada Cinema; ಇಂದು ತೆರೆಗೆ ಬರುತ್ತಿದೆ ರವಿಚಂದ್ರನ್ ಅವರ ‘ದಿ ಜಡ್ಜ್ ಮೆಂಟ್‌’

Kannada Cinema; ಇಂದು ತೆರೆಗೆ ಬರುತ್ತಿದೆ ರವಿಚಂದ್ರನ್ ಅವರ ‘ದಿ ಜಡ್ಜ್ ಮೆಂಟ್‌’

Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ

Kalasa: ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಬೃಹತ್ ಮರ… ಅಪಾಯದಿಂದ ಪಾರಾದ ಮನೆಮಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.