Education Dept: ತಮ್ಮನ ವರ್ಗಾವಣೆ ಆದೇಶಕ್ಕೆ ರುಜು ಹಾಕಿದ ಅಣ್ಣ
ಅಣ್ಣನ ರುಜುವಿನಡಿ ವರ್ಗಾವಣೆ ಆದೇಶ ಸಿಕ್ಕಿರುವುದಕ್ಕೆ ತಮ್ಮನ ಸಂತಸ
Team Udayavani, Jul 13, 2023, 10:30 PM IST
ಗಂಗಾವತಿ: ಸಹೋದರನ ವರ್ಗಾವಣೆ ಆದೇಶಕ್ಕೆ ಒಡಹುಟ್ಟಿದ ಅಣ್ಣ ರುಜು ಹಾಕಿದ ಸೌಭಾಗ್ಯ ನೆನೆದು ಸ್ನೇಹಿತರು ಮತ್ತು ಕುಟುಂಬದವರ ಜತೆ ತಮ್ಮ ವರ್ಗಾವಣೆ ಆದೇಶ ಪತ್ರ ಹಾಗೂ ಸಹೋದರ ಭಾವಚಿತ್ರವನ್ನು ಹಂಚಿಕೊಂಡು ಭಾವುಕರಾದ ಪ್ರಸಂಗ ಗಂಗಾವತಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ.
ಗಂಗಾವತಿ ಬಿಇಒ ಆಗಿ ವರ್ಗಾವಣೆಗೊಂಡಿರುವ ವೆಂಕಟೇಶ ಅವರ ದೊಡ್ಡ ಅಣ್ಣ ಮಲ್ಲಿಕಾರ್ಜುನ ಶಿಕ್ಷಣ ಇಲಾಖೆಯ ಶಾಲಾ ಮತ್ತು ಸಾರಕ್ಷರತಾ ಇಲಾಖೆಯ ಸರಕಾರದ ಆಧೀನ ಕಾರ್ಯದರ್ಶಿಯಾಗಿದ್ದು ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುಡುಗೋಡು ತಾಲೂಕು ಬಿಇಒ ಆಗಿದ್ದ ಸಹೋದರ ವೆಂಕಟೇಶ ಅವರನ್ನು ಗಂಗಾವತಿ ಬಿಇಒ ಆಗಿ ವರ್ಗಾವಣೆ ಆದೇಶಕ್ಕೆ ರುಜು ಮಾಡಿದ್ದಾರೆ. ಆದೇಶ ಪತ್ರದಲ್ಲಿ ಬಿಇಒ ವೆಂಕಟೇಶ ಹಾಗೂ ಸರ್ಕಾರದ ಆಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೆಸರುಗಳ ಮುಂದೆ ರಾಮಚಂದ್ರಪ್ಪ ಎಂಬ ಹೆಸರಿದ್ದು ಇದನ್ನು ಇದು ದೇವರು ನಮಗೆ ನೀಡಿದ ಸೌಭಾಗ್ಯವಾಗಿದ್ದು ಸಹೋದರನ ರುಜುವಿನಡಿ ವರ್ಗಾವಣೆ ಆದೇಶ ಸಿಕ್ಕಿರುವುದು ಖುಷಿಯ ವಿಷಯವಾಗಿದೆ ಎಂದು ಬಿಇಒ ವೆಂಕಟೇಶ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮರಳು ಮಾಫಿಯಾದಿಂದ ಜೀವ ಬೆದರಿಕೆ: ರಕ್ಷಣೆ ಬೇಕು ಎಂದ ಜೆಡಿಎಸ್ ಶಾಸಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ರಾಜ್ಯದ ಶಿಕ್ಷಣದ ಸ್ಥಿತಿ ಅಧೋಗತಿಗೆ ತಲುಪಿದೆ; ಎನ್.ರವಿಕುಮಾರ್
Online Fraud; ಬಳ್ಳಾರಿ ಮಹಿಳೆಗೆ 17 ಲಕ್ಷ ರೂ.ವಂಚನೆ
Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ
Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ