Byju’s: ಬೈಜೂಸ್ ಪ್ರಮುಖ ಅಧಿಕಾರಿ ರಾಜೀನಾಮೆ
ಸಾಲದ ಸುಳಿಯಲ್ಲಿ ಸಿಲುಕಿರುವ ಬೈಜೂಸ್ಗೆ ಮತ್ತೂಂದು ಸಂಕಷ್ಟ
Team Udayavani, Aug 30, 2023, 12:51 AM IST
ಹೊಸದಿಲ್ಲಿ: ಸದ್ಯ ಸಾಲದ ಸುಳಿಯಲ್ಲಿ ಸಿಲುಕಿರುವ ಎಜುಕೇ ಶನ್ ಸ್ಟಾರ್ಟ್ಅಪ್ ಬೈಜೂಸ್, ತನ್ನ ಸಾಂಸ್ಥಿಕ ಕಾರ್ಯಾಚರಣೆ ಹಾಗೂ ಉದ್ಯಮದ ಪುನಾರಚನೆಗೆ ಮುಂದಾಗಿರುವ ನಡುವೆಯೇ, ಸಂಸ್ಥೆಯ ಮುಖ್ಯವ್ಯವಹಾರಾಧಿ ಕಾರಿ ಪ್ರತ್ಯುಷಾ ಅಗರ್ವಾಲ್ ಹಾಗೂ ಇನ್ನಿತರ ಇಬ್ಬರು ಹಿರಿಯ ಕಾರ್ಯನಿರ್ವಹಣಾ ಅಧಿಕಾರಿಗಳು ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.
2022ರಲ್ಲಿ ಜೀ ಎಂಟರ್ಟೈನ್ಮೆಂಟ್ನಿಂದ ಬೈಜೂಸ್ಗೆ ಪ್ರತ್ಯುಷಾ ಸೇರ್ಪಡೆಗೊಂಡಿದ್ದರು. ಅವರ ಜತೆಗೀಗ ವ್ಯವಹಾರ ಮುಖ್ಯಸ್ಥ ರಾಗಿದ್ದ ಹಿಮಾಂಶು ಬಜಾಜ್ ಹಾಗೂ ಮುಕುತ್ ದೀಪಕ್ ಕೂಡ ಸಂಸ್ಥೆ ತೊರೆದಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ರಾಜೀ ನಾಮೆ ನೀಡಿದ್ದು, ಇತ್ತೀಚೆಗಷ್ಟೇ ಸಾಲದ ಸುಳಿಯಿಂದ ಬೈಜೂಸ್ ಅನ್ನು ಹೊರತಂದು ಲಾಭದತ್ತ ನಡೆಸಲು ಬದಲಾವಣೆಗಳನ್ನು ಕೈಗೊಳ್ಳಲಾಗಿತ್ತು. ಈ ಮಧ್ಯೆ ಈ ಮೂವರ ರಾಜೀನಾಮೆ ಬೆಳವಣಿಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್
Meteorite; ಕೃಷಿಭೂಮಿಗೆ ಬಿದ್ದ ಉಲ್ಕಾಶಿಲೆ; ಗುಂಡಿಯಿಂದ ಹೊರಬರುತ್ತಿದೆ ಶಾಖ
BL Santhosh ಬಂಧನಕ್ಕೆ ತಂತ್ರ ಹೂಡಿದ್ದ ಕೆಸಿಆರ್?
Tamil Nadu ಕನ್ಯಾಕುಮಾರಿಯಲ್ಲಿ ಮೇ 30ರಿಂದ 3 ದಿನ ಪಿಎಂ ಮೋದಿ ಧ್ಯಾನ
Madhya Pradesh ಶಾಲೆಗಳಲ್ಲಿ 100 ಕೋಟಿ ರೂ. ಪುಸ್ತಕ ಹಗರಣ: 20 ಪ್ರಾಂಶುಪಾಲರ ಬಂಧನ