Road Mishap; ಕಾರು-ಬೈಕ್ ಅಪಘಾತ: ಸವಾರನಿಗೆ ಗಾಯ
Team Udayavani, Jan 23, 2024, 11:23 PM IST
ಕುಂದಾಪುರ: ಉಪ್ಪಿನಕುದ್ರು ರಾಮಮಂದಿರದ ಬಳಿಯ ತಿರುವಿನಲ್ಲಿ ಕಾರು-ಬೈಕ್ ಢಿಕ್ಕಿಯಾಗಿದೆ.
ಮಂಜುನಾಥ ಅವರು ಆಮ್ನಿ ಕಾರನ್ನು ಉಪ್ಪಿನಕುದ್ರು ಕಡೆಯಿಂದ ತಲ್ಲೂರು ಕಡೆಗೆ ಚಲಾಯಿಸುತ್ತಿದ್ದಾಗ ಗೋಪಾಲ (37) ಉಪ್ಪಿನಕುದ್ರು ಅವರು ತಲ್ಲೂರು ಕಡೆಯಿಂದ ಉಪ್ಪಿನಕುದ್ರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕ್ಗೆ ಢಿಕ್ಕಿಯಾಗಿದೆ. ಗಾಯಾಳು ಗೋಪಾಲ ಚಿಕಿತ್ಸೆಗೆ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ ಸ್ಕಿಡ್; ಗಾಯ
ಕುಂದಾಪುರ: ಬೀಜಾಡಿ ಗ್ರಾಮದ ಮಲಾ°ಡು ಪೆಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಲಗಿದ್ದ ಪ್ರಾಣಿ ಅಡಿಗೆ ಬೀಳುವುದು ತಪ್ಪಿಸಲು ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದಿದೆ.
ಬೈಕ್ ಸವಾರ ಶ್ರೀಷಾ, ಸಹಸವಾರ ಉಪ್ಪಿನಕುದ್ರು ಸದಾಶಿವ ಅವರು ಗಾಯಗೊಂಡು ಚಿಕಿತ್ಸೆಗೆ ಕೋಟೇಶ್ವರದ ಖಾಸಗಿ ದಾಖಲಾಗಿದ್ದಾರೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮ್ರಗೋಡು: ಕೋಳಿ ಅಂಕಕ್ಕೆ ದಾಳಿ
ಬ್ರಹ್ಮಾವರ: ಇಲ್ಲಿನ ಕುಮ್ರಗೋಡು ಬಳಿ ರವಿವಾರ ಹಣವನ್ನು ಪಣವನ್ನಾಗಿಸಿ ನಡೆಸುತ್ತಿದ್ದ ಕೋಳಿ ಅಂಕಕ್ಕೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿದರು. ಈ ಸಂಬಂಧ ಪ್ರಸಾದ್ ಕುಮಾರ್, ಆರೋನ್ ಮತ್ತು ಸಂತೋಷ್ನನ್ನು ವಶಕ್ಕೆ ಪಡೆದು 7 ಬೈಕ್ಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು
ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್ ಆಗ್ರಹ
76,000 ಅಂಕ ತಲುಪಿದ್ದ ಬಿಎಸ್ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ
Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ
Delhi; ಬಿಭವ್ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್