Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ದೇಶದ 25 ವರ್ಷಗಳ ಹಾದಿ ಸುಗಮ ಯತ್ನ; ವಿಕಸಿತ ಭಾರತದಲ್ಲಿ ಭವಿಷ್ಯ, ಜೀವನ ಸೇರ್ಪಡೆ

Team Udayavani, May 6, 2024, 1:09 AM IST

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಲಕ್ನೋ: “ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಅವರಿಗಾಗಲೀ, ನನಗಾಗಲೀ ಮಕ್ಕಳಿಲ್ಲ. ನಾವು ಅವಿರತವಾಗಿ ಶ್ರಮಿಸುತ್ತಿರುವುದೆಲ್ಲವೂ ನಿಮ್ಮ ಮಕ್ಕಳಿಗಾಗಿ. ಆದರೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ ಅಧಿಕಾರ ಬಯಸುತ್ತಿರುವುದು ಅವರ ಮಕ್ಕಳ ಉದ್ಧಾರಕ್ಕಾಗಿ ಮಾತ್ರ’.

– ಹೀಗೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ತವರೂರು ಉತ್ತರ ಪ್ರದೇಶದ ಇಟಾವಾದಲ್ಲೇ ಪ್ರಧಾನಿ ಮೋದಿ ಕಾಂಗ್ರೆಸ್‌ ಮತ್ತು ಎಸ್‌ಪಿ ವಿರುದ್ಧ ಈ ರೀತಿ ವಾಗ್ಧಾಳಿ ನಡೆಸಿದ್ದಾರೆ.

ಇಟವಾದಲ್ಲಿ ರವಿವಾರ ನಡೆದ ಬಿಜೆಪಿ ಚುನಾವಣೆ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿರುವ ಪ್ರಧಾನಿ, “10 ವರ್ಷಗಳ ಸುದೀರ್ಘ‌ ಸೇವೆಯ ಅನಂತರ ಮತ್ತೆ ಈಗ ನಿಮ್ಮ ಆಶೀರ್ವಾದ ಬಯಸುತ್ತಿದ್ದೇನೆ. ನೀವು ನನ್ನ ಶ್ರಮ ಮತ್ತು ಪ್ರಾಮಾಣಿಕತೆ ಎರಡನ್ನೂ ನೋಡಿದ್ದೀರಿ. ನಾನು ಕೇವಲ ಮುಂದಿನ 5 ವರ್ಷಗಳ ಬಗ್ಗೆ ಚಿಂತಿಸಿ ನಿಮ್ಮ ಮುಂದೆ ನಿಂತಿಲ್ಲ. ಮುಂದಿನ 25 ವರ್ಷಗಳ ಹಾದಿಯನ್ನು ಸುಗಮಗೊಳಿಸಲು, ಭವಿಷ್ಯದ ಸಾವಿರ ವರ್ಷಗಳ ವರೆಗೆ ಭಾರತದ ಶಕ್ತಿಯನ್ನು ನೆಲೆಗೊಳಿಸಲು ಬುನಾದಿಯನ್ನು ಹಾಕಿದ್ದೇನೆ. ಏಕೆ ಗೊತ್ತೇ? ಮೋದಿ ಇರಲಿ, ಇಲ್ಲದಿರಲಿ; ಈ ದೇಶ ಇರಬೇಕು ಎಂಬುದೇ ನನ್ನ ಧ್ಯೇಯ ಎಂದಿದ್ದಾರೆ.

ನಿಮಗಾಗಿ ಅಭಿವೃದ್ಧಿ ಕಾರ್ಯ
ಎಸ್‌ಪಿ ಮತ್ತು ಕಾಂಗ್ರೆಸ್‌ ಏನು ಮಾಡಿವೆ ಎಂದು ಮೋದಿ ಪ್ರಶ್ನಿಸಿದರು. ಅವರು ಚುನಾ ವಣೆಗೆ ಸ್ಪರ್ಧಿಸುವುದು ಅವರಿಗಾಗಿ ಮತ್ತು ಅವರ ಮಕ್ಕಳಿಗಾಗಿ ಮಾತ್ರ. ಆದರೆ ನನಗೆ ಯಾರೂ ಇಲ್ಲ, ಸಿಎಂ ಯೋಗಿಗೂ ಇಲ್ಲ. ಆದರೂ ನಾವು ದುಡಿ ಯುತ್ತಿರುವುದು ನಿಮ್ಮ ಮಕ್ಕಳಿಗಾಗಿ. ವಿಕಸಿತ ಭಾರತ ಅನ್ನುವುದು ಕೇವಲ ಪದಗಳಲ್ಲ, ಈ ಪದಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ, ಸಮೃದ್ಧ ಜೀವನವೂ ಸೇರಿದೆ ಎಂದಿದ್ದಾರೆ.

ವಂಶಾಡಳಿತದ
ಪದ್ಧತಿ ಮುರಿದೆ
ರಾಜನ ಮಗ ರಾಜನೇ ಆಗಬೇಕು ಎಂಬ ಪದ್ಧತಿಯನ್ನೇ ನಾನು ಮುರಿದು ಒಬ್ಬ ಚಾಯ್‌ವಾಲಾ ಮುಖ್ಯಮಂತ್ರಿ ಸಿಎಂ ಆಗಬಹುದು, ಪ್ರಧಾನಿ ಆಗಬಹುದು ಎಂಬುದನ್ನು ನಿರೂಪಿಸಿದ್ದೇನೆ. ವಂಶಾಡಳಿತದಲ್ಲಿ ಕಾರು, ಬಂಗಲೆಗಳು ಅಧಿಕಾರ, ರಾಜಕೀಯ ಪರಂಪರೆಯ ಕುರುಹು ಆಗಿದೆ. ಆದರೆ ಮೋದಿ ಪರಂಪರೆ ಬಡವರಿಗೆ ಪಕ್ಕಾ ಮನೆ, ಅಕ್ಕ-ತಂಗಿಯರಿಗೆ ಶೌಚಾಲಯ, ದಲಿತರು ಮತ್ತು ಹಿಂದುಳಿದವರಿಗೆ ವಿದ್ಯುತ್‌, ಗ್ಯಾಸ್‌, ನೀರಿನ ಸೌಲಭ್ಯ, ಉಚಿತ ಪಡಿತರ, ಶಿಕ್ಷಣ ನೀತಿ, ಆರೋಗ್ಯ ಸೌಲಭ್ಯ ರೂಪಿಸಿಕೊಡುವುದಾಗಿದೆ. ಮೋದಿಯ ಪರಂಪರೆ ಎಲ್ಲರಿಗಾಗಿ, ಎಲ್ಲರದ್ದೂ ಆಗಿರುವ ಪರಂಪರೆ ಎಂದಿದ್ದಾರೆ.

ಕಾರ್ಯಕರ್ತರಿಗೆ
ಮಣೆ ಹಾಕಿದ್ದೇವೆ: ಮೋದಿ
ಸಮಾಜವಾದಿ ಪಕ್ಷವು ಕುಟುಂಬ ರಾಜ ಕಾರಣಕ್ಕೆ ಮಣೆ ಹಾಕಿದೆ. ಇಡೀ ರಾಜ್ಯದಲ್ಲಿ ಇದು ವರೆಗೆ ತಮ್ಮ ಕುಟುಂಬದ ಹೊರತಾಗಿ ಯಾದವ ಸಮುದಾಯದಿಂದ ಯಾವೊಬ್ಬ ಅಭ್ಯರ್ಥಿಯನ್ನೂ ಪಕ್ಷ ಕಣಕ್ಕಿಳಿಸಿಲ್ಲ. ಆದರೆ ಬಿಜೆಪಿಯಲ್ಲಿ ಕಾರ್ಯ ಕರ್ತನೂ ಕೂಡ ದೊಡ್ಡ ಮಟ್ಟವನ್ನೂ ತಲುಪಬಹು ದಾಗಿದೆ ಎಂದು ಪಿಎಂ ಚಾಟಿ ಬೀಸಿದ್ದಾರೆ.

ಎಸ್‌ಪಿಯವರು ನಿಜವಾಗಲೂ ಯದುವಂಶೀಯರೇ?
ಕಳೆದ ಬಾರಿ ಚುನಾವಣೆ ಸಂದರ್ಭ ಕಾಂಗ್ರೆಸ್‌ನ ರಾಜಕುಮಾರ ದೇವಾಲಯ ಸುತ್ತಿ, ಪವಿತ್ರ ದಾರ ಗಳನ್ನು ಕೈಗೆ ಸುತ್ತಿಕೊಂಡಿದ್ದರು. ಆದರೆ ಈ ಬಾರಿ ಆ ಗಿಮಿಕ್‌ ನಿಂತಿದೆ. ದೇಶದ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ದೇಶವೇ ಸಂತಸ ಪಟ್ಟಿತ್ತು. ಆದರೆ ಅವರು ಆಹ್ವಾನ ನಿರಾಕರಿಸಿದರು. ದ್ವಾರಕೆಯ ಸಮುದ್ರಕ್ಕೆ ತೆರಳಿ ಕೃಷ್ಣನಿಗೆ ನಾನು ನಮಿಸಿದ್ದೂ ರಾಜಕುಮಾರನಿಗೆ ಸಮಸ್ಯೆಯಾಯಿತು. ಅಂಥವ ರೊಂದಿಗೆ ಎಸ್‌ಪಿ ಸ್ನೇಹ ಬೆಳೆಸಿದೆ. ಕೃಷ್ಣನನ್ನು ಪೂಜಿಸಿದ್ದಕ್ಕೂ ಕೊಂಕು ನುಡಿಯುವವರನ್ನು ಸ್ನೇಹಿತರು ಎನ್ನುತ್ತಿರುವ ಎಸ್‌ಪಿಯವರು ನಿಜ ವಾಗಿಯೂ ಯದುವಂಶೀಯರೇ ಎಂದು ನಾನು ಕೇಳಬೇಕಿದೆ ಎಂದು ಮೋದಿ ಆಕ್ಷೇಪಿಸಿದ್ದಾರೆ.

ಟಾಪ್ ನ್ಯೂಸ್

4-udupi

Udupi: ಮುಗಿದ ಗಡುವು; ಸಿಟಿ ಬಸ್ಸುಗಳ ಕರ್ಕಶ ಹಾರ್ನ್ ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

3-belthangady

ತಿರುವನಂತಪುರ ಅನಂತಪದ್ಮನಾಭ ದೇಗುಲ; ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ ತೋಡ್ತಿಲ್ಲಾಯ ಆಯ್ಕೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

2-thirthahalli

Thirthahalli: ಬಸ್-ಲಾರಿ ಡಿಕ್ಕಿ; ಕೆಲವರಿಗೆ ಸಣ್ಣಪುಟ್ಟ ಗಾಯ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

Modi Interview

Modi 3ನೇ ಸಲ ಪ್ರಧಾನಿಯಾದ ಬಳಿಕ ನಾಳೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

1-sadsad

NCRT ಪಠ್ಯದಿಂದ ಬಾಬರಿ ಮಸೀದಿ ಹೆಸರು ಕೈಬಿಟ್ಟ ಸರಕಾರ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

4-udupi

Udupi: ಮುಗಿದ ಗಡುವು; ಸಿಟಿ ಬಸ್ಸುಗಳ ಕರ್ಕಶ ಹಾರ್ನ್ ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

Dandeli: ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

3-belthangady

ತಿರುವನಂತಪುರ ಅನಂತಪದ್ಮನಾಭ ದೇಗುಲ; ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ ತೋಡ್ತಿಲ್ಲಾಯ ಆಯ್ಕೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Pannun: ಪನ್ನು ಹತ್ಯೆಗೆ ಸಂಚು ಆರೋಪ: ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.