ಹೆಲೋ ಹೀಮ್ಯಾನ್‌ ದಿಬ್ಬಣ ಹೋಗೋಣಾ ಬಾರೋ!!


Team Udayavani, Feb 21, 2017, 3:45 AM IST

PAGE.jpg

ಹಲೋ ಹೀರೋ, ಕಳೆದ ಮೂರು ದಿನಗಳಿಂದ ಎಲ್ಲಿ ಹೋಗಿಬಿಟ್ಟೆ? ನಾನು ನಿನ್ನನ್ನು ಹುಡುಕದ ಸ್ಥಳ ಇಲ್ಲ. ಕೇಳದೆ ಇರೋ ಸ್ನೇಹಿತರಿಲ್ಲ. ಬಸ್‌ ನಿಲ್ದಾಣ, ಸಂತೆ, ಕಾಲೇಜು ಕ್ಯಾಂಪಸ್‌, ಆ ಹುಡುಗರ ಸಂದಣಿ ಕೊನೆಕೊನೆಗೆ ಅದೇನೋ ಹೊಸದಾಗಿ ಬಂದಿರೋ ಫ್ಯಾಷನ್‌ ಮೇಳ ಹೀಗೆ… ಎಲ್ಲಾ ಕಡೆ ಹುಡುಕಿದೆ. ಆದರೆ ಊಹೂಂ… ಎಲ್ಲಿಯೂ ನೀನು ನನ್ನ ಕಣ್ಣಿಗೆ ಕಾಣಿಸಲೇ ಇಲ್ಲ. ಅದೇನೋ ಗೊತ್ತಿಲ್ಲ ಕಣೋ ಹೀ ಮ್ಯಾನ್‌, ಆ ನಿನ್ನ ಸದೃಢ ದೇಹ, ಮಿಂಚಿನ ವೇಗ, ಕಂಚಿನ ಕಂಠ, ರಸ್ತೇಲಿ ನೀನ್‌ ಹೋಗ್ತಾ ಇದ್ರೆ ಅದ್ಯಾವ ಹುಡುಗಿ ತಾನೇ ನಿನ್ನ ಬಿಟ್ಟು ಬೇರೆ ಹುಡುಗರನ್ನ ನೋಡುತ್ತಾಳೆ ಹೇಳು?! ನಿಜಕ್ಕೂ ನಿನ್ನ ಚೆಂದವೇ ಚೆಂದ. ನಿನ್ನ ನೋಡಬೇಕು ಅಂತ ಪ್ರತಿದಿನ ಮನೆ ಪಕ್ಕದಲ್ಲಿಯೇ ಬಸ್‌ ನಿಲ್ದಾಣ ಇದ್ದರೂ ಮೂರನೇ ಕ್ರಾಸ್‌ನ ಅಡ್ಡ ರಸ್ತೇಲಿ ಹಾಯ್ದು ಬರುತ್ತೀನಿ. ಆದರೆ ಪ್ರತಿ ಸಾರಿ ನಿನ್ನದು ನನ್ನೆಡೆಗೆ ಯಾವಾಗಲೂ ನಿರುತ್ತರದ ನೋಟ. ನೀನಂತೂ ಪ್ರತಿದಿನ ಇಷ್ಟಗಲ ಕಣ್ಣರಳಿಸಿಕೊಂಡು ಮುಖ್ಯರಸ್ತೆಯಲ್ಲಿ ಗಾಜಿನ ಮನೆಯಲ್ಲಿ ಮುಖ ತಿರುವಿಕೊಂಡು ನಿಂತುಕೊಂಡುಬಿಟ್ಟಿರ್ತೀಯಾ..  

ನಿನ್ನ ಕಣ್ಣಲ್ಲಿ ಮುಖ ನೋಡಿಕೋಬೇಕು ಅಂತ ನನಗಾಸೆ. ನಿನ್ನ ಬಳಸಿ ನಿಲ್ಲಬೇಕು, ಪಾರ್ಕು, ಫಿಲ್ಮು, ಅಂತ ಎಲ್ಲೆ ಇಲ್ಲದೇ ಸುತ್ತಬೇಕು, ನಮ್ಮಿಬ್ಬರ ಜೋಡಿ ನೋಡಿ ಜನ ಕಣ್ಣು ಕಣ್ಣು ಬಿಡಬೇಕು ಇಷ್ಟೆಲ್ಲಾ ಆಸೆಗಳಿವೆ. ಆದರೆ ನೀನು ಮಾತ್ರ ತುಂಬಿದ ರಸ್ತೆಯಲ್ಲಿ ನಿನ್ನ ಪಾಡಿಗೆ ನೀನು ಹೋಗುತ್ತಲೇ ಇರ್ತಿಯಾ. ಕಣ್ಣರಳಸಿ ಒಮ್ಮೆ ಆದ್ರೂ ನನ್ನತ್ತ ನೋಡಬಾರದೇ? ಮೂರು ದಿನದ ಮೊದಲು ಕಾಲೇಜಿನಲ್ಲಿ ನಿನ್ನ ಸಾಮೀಪ್ಯವನ್ನು ಅನುಭವಿಸಲು ನಿನ್ನ ಬಳಿಗೆ ಓಡೋಡಿ ಬರುತ್ತಿದ್ದೆ; ಆದರೆ ನೀನು ಗುಡು ಗುಡು ಅಂತ ಬೇಗನೆ ಹೊರಟೇ ಬಿಡೋದಾ!? ಅದೇನೆ ಆಗ್ಲಿ ಕಣೋ ನಾನು ಮಾತ್ರ ಒಂದೇ ಒಂದು ಸಾರಿಯಾದರೂ ನಿನ್ನ ಬೆನ್ನೇರಿ ಊರು ದಿಬ್ಬಣ ಹೋಗೋದೇ. 

ಈ ಹುಡುಗಿ ಸುಮ್ನೆ ಏನೇನೋ ಬಡಬಡಿಸ್ತಾ ಇದೆಯಲ್ಲ? ಅದ್ಯಾವ ಹೀರೋ ನಿನ್ನನ್ನು ಹೊತ್ತುಕೊಂಡು ಹೋಗ್‌ತಾನೆ ಹೇಳಿಬಿಡಬಾರದಾ ಅಂತಿದ್ದೀರಾ? ಅದೇ ರೀ ನನ್‌ ಇಷ್ಟದ ರಾಯಲ್‌ ಎನ್‌ಫೀಲ್ಡ್‌ ಬೈಕು..!! 

ಅವನೇ ನನ್ನ ಹೀಮ್ಯಾನ್‌… ಏ ಹೀರೋ ಯಾವಗ್ಲೋ ಕರೆದೊಯ್ತಿಯಾ ನನ್ನ? ಕಾಯ್ತಿದ್ದೀನಿ ನಾನು..  

– ಶೈನಾಜ್‌ ಕಟ್ಟಿಮನಿ, ಗದಗ  

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.