ಗೊತ್ತೇನೋ…? ಪ್ರಿಯತಮನಲ್ಲೇ ಅವಳು ಮಗುವನ್ನು ಕಾಣುತ್ತಾಳೆ!


Team Udayavani, May 30, 2017, 2:50 PM IST

gotteno.jpg

ಜೀವನ್ಮುಖೀ,
ಹೇಗಿದೀಯಾ? ಅಂತೂ ಕಡೆಗೂ ನನ್ನನ್ನು ಮನಸ್ಸಿನಿಂದ ಕಿತ್ತೂಗೆದು ಬಿಟ್ಟೆ ಅಲ್ವಾ? ಮುಂಚೆ ಇದ್ದ ನನ್ನ ಮೇಲಿನ ಆದ್ರìತೆ, ಮಾರ್ದವತೆ ನಿನ್ನಲ್ಲಿ ಈಗ  ಕಾಣುತ್ತಿಲ್ಲ. ವಿಪರೀತ ಎನ್ನುವಷ್ಟು ಕೊಬ್ಬು ನಿನಗೆ. ಅಷ್ಟೆಲ್ಲಾ ಪ್ರೀತಿಯಿಂದ ಸಂದೇಶ ಕಳುಹಿಸಿದರೂ, ಪತ್ರ ಬರೆದರೂ, ಫೋನ್‌ ಮಾಡಿ ಮತ್ತೆ ಮತ್ತೆ ನೆನಪಿಸಿದರೂ ಒಂದೂ ಉತ್ತರವಿಲ್ಲ. ನೆನಪಿರಲಿ ನಿನಗೆ: ನಾವು ಮಧುರವಾದ ಪ್ರೀತಿಯನ್ನು ಕೊಟ್ಟರೂ, ಅದನ್ನು ಪಡೆಯುವ ಹೃದಯಕ್ಕೆ ಆಸ್ವಾದಿಸುವ ಮನಸ್ಸು ಇದ್ದಾಗ ಮಾತ್ರವೇ ಒಲವಿನ ರಸಭಾವವನ್ನು ಮುಗಿಲೆತ್ತರದ ಸಂತಸಕ್ಕೆ ಕೊಂಡೊಯ್ಯಲು ಸಾಧ್ಯವಂತೆ.

ವೈದ್ಯರು ಮದ್ದನ್ನು ರೋಗಿಗೆ ನೀಡಿದಾಗ ಆತನ ದೇಹ ಮದ್ದಿಗೆ ಸ್ಪಂದಿಸಬೇಕು. ಆಗಲೇ ಆತ ಗುಣಮುಖನಾಗಲು ಸಾಧ್ಯ. ಒಂದು ಗಿಡಕ್ಕೆ ಗೊಬ್ಬರವನ್ನು ಹೀರುವ ಸ್ಪಂದನೆ, ಬಯಕೆ ಇರಬೇಕು. ಆಗಲೇ ಅಲ್ಲಿ ಚಿಗುರು ನಳನಳಿಸಲು ಸಾಧ್ಯ. ಇಲ್ಲವಾದರೆ ಸಾವಿರ ಕನಸುಗಳನ್ನು ಹುಟ್ಟು ಹಾಕುವ ಎಲ್ಲ ಭಾವಸ್ಥಾಯಿಗಳೂ ವ್ಯರ್ಥ. ಈ ತರಹದ ಉಪಮೆಗಳನ್ನೇನೋ ಸುಲಭವಾಗಿ ನೀಡಬಹುದು… 

ಗೆಳೆಯಾ, ಇನ್ನೊಂದು ಸೂಕ್ಷ್ಮ ವಿಚಾರ ನಿನಗೆ ನೆನಪಿರಲಿ: ಔಷಧಿಯನ್ನು ಬೇರೊಬ್ಬನಿಗೆ ನೀಡಬಹುದು, ಗಿಡಕ್ಕೆ ಪರ್ಯಾಯ ರಾಸಾಯನಿಕ ಕೊಡಬಹುದು. ಆದ್ರೆ ಈ ಪ್ರೀತೀನ ಏನ್‌ ಮಾಡ್ಲಿ? ನಿನ್ನ ಪ್ರೀತಿಯನ್ನು ತೆಗೆದು ಯಾರ ಮಡಿಲಿಗೆ ಜೇನಿನಂತೆ ಸುರಿಯಲಿ ಹೇಳು? ಅಸಲಿಗೆ ಅದೆಲ್ಲ ನನ್ನ ಹೃದಯಕ್ಕೆ ಸಾಧ್ಯವಾ? ಯೋಚಿಸು. ಇಷ್ಟು ವರ್ಷದ ಬದುಕಿನಲ್ಲಿ ನನಗೂ ಕೆಲವು ನಿಷ್ಠುರ ಸತ್ಯಗಳು ಗೊತ್ತಾಗಿವೆ ಕಣೋ. ಏನೆಂದರೆ, ಪ್ರೀತಿಯೇ ಜೀವನವಲ್ಲ. ಪ್ರೀತಿಯೇ ಎಲ್ಲವೂ ಅಲ್ಲ. ಆದರೆ ದೊರೇ, ನನ್ನ ನಲಿವು, ನನ್ನ ಕನಸು, ನನ್ನ ಸಂತೃಪ್ತಿ, ನನ್ನ ಆಸೆ, ನನ್ನ ನಿರ್ಭಯತೆ, ನನ್ನ ಇಂಧನ, ನನ್ನ ಸ್ಪಂದನ, ನನ್ನ ಬದುಕು ಎಲ್ಲವೂ ನಿನ್ನ ಸನ್ನಿಧಿಯಲ್ಲಿದ್ದಾಗ ಮಾತ್ರ ಸಂಭ್ರಮದಿಂದ, ಸಂತೃಪ್ತಿಯಿಂದ ಇರುತ್ತದೆ. ಇಂಥದ್ದೊಂದು ಫೀಲ್‌ ಬಂದಾಗಲೆಲ್ಲ ಎದೆಯಲ್ಲಿ ಭರಿಸಲಾಗದ ನೋವು, ಯಾತನೆ ಕಣೋ. ಯಾರೋ ಪರಿಚಯವೇ ಇಲ್ಲದ ಜನ ಇದ್ದಕ್ಕಿದ್ದಂತೆಯೇ ಬಂದು ಹೃದಯವನ್ನು ಹೊರತೆಗೆದು ಹಿಂಡಿ, ಕಾಲಿನ ಕೆಳಗೆ ಹಾಕಿಕೊಂಡು ತುಳಿಯುತ್ತಿರುವ ಅನುಭವ ಆಗುತ್ತಿದೆ ನನಗೆ.

ನಾನು ಇಷ್ಟೆಲ್ಲಾ ಹೇಳುತ್ತಿದ್ದರೂ, ನಾವು ಒಟ್ಟಾಗಿದ್ದಾಗ ನಲಿದಾಡಿದ ಮಧುರ ಭಾವನೆಗಳಿಗೆ, ಈವರೆಗೂ ಆಡಿದ ಮಾತುಗಳಿಗೆ, ಮಾಡಿದ ಪ್ರಮಾಣಗಳಿಗೆ ಯಾವ ಅರ್ಥವೂ ಇಲ್ಲ ಅನ್ನುವಂತೆ ನನ್ನನ್ನು ತೊರೆಯುತ್ತಿರುವೆಯಲ್ಲಾ… ಅದನ್ನು ನೆನಪಿಸಿಕೊಂಡರೆ ಸಿಕ್ಕಾಪಟ್ಟೆ ಕೋಪ ಬರುತ್ತೆ. ಪ್ರತಿಯೊಬ್ಬ ಹುಡುಗನೂ ಒಂದು ಹುಡುಗಿಯಲ್ಲಿ ತಾಯಿಯನ್ನು, ಹುಡುಗಿ ತನ್ನ ಹುಡುಗನಲ್ಲಿ ಮಗುವನ್ನು ಕಾಣುತ್ತಾಳಂತೆ. ಎಷ್ಟು ಕರಾರುವಾಕ್ಕು ಅಲ್ಲವಾ, ಈ ಸಾಲುಗಳು? ಅಂತೆಯೇ ಮುಂದೊಮ್ಮೆ ಮಗು ತಾಯಿಯನ್ನು ಯಾವುದೋ ಸಂದರ್ಭಾನುಸಾರ ಮರೆಯಬಹುದು. ಆದರೆ, ತಾಯಿ ಎಂದಿಗೂ ಮಗುವನ್ನು ಮರೆಯುವುದಿಲ್ಲ. ಅವಳದು ನಿರಂತರ ಕರುಳ ಚಡಪಡಿಕೆ.

ನನ್ನ ಮನಸ್ಸಿನ ಸಂಕಟ ಈಗಾದರೂ ಅರ್ಥವಾಯಿತೇನೋ, ಪೆದ್ದು ಹುಡುಗ?

ಇಂತಿ ನಿನ್ನ
ಮಲ್ಲಿಗೆ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.