ಕದ್ದು ಮಾರಾಟ ಮಾಡಿದ್ದ 4.32 ಲ.ರೂ. ಚಿನ್ನಾಭರಣ ವಶ
Team Udayavani, Aug 11, 2017, 8:55 AM IST
ಕಾರ್ಕಳ: ಕಳವು ಮಾಡಿದ್ದ ಚಿನ್ನಾಭರಣಗಳನ್ನು ಆರೋಪಿಗಳಿಂದ ತೆಗೆದುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು, ವ್ಯಕ್ತಿಯಿಂದ 4.32 ಲ.ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಗಾಂಧಿನಗರದ ನಿವಾಸಿ ಮಿಥುನ್ ವೆಂಕಟೇಶ್ ರಾಯ್ಕರ್ ಬಂಧಿತ ವ್ಯಕ್ತಿ. ಆರೋಪಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಿಂದಿನ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರ ನಿರ್ದೇಶ, ಡಿವೈಎಸ್ಪಿ ಎಸ್.ಜೆ. ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಸಿಪಿಐ ಜಾಯ್ ಅಂಥೊನಿ ಮತ್ತು ಅವರ ಅಪರಾಧ ಪತ್ತೆ ದಳದ ಸಿಬಂದಿ, ಡಿಸಿಐಬಿ ಸಿಪಿಐ ಸಂಪತ್ ಕುಮಾರ್ ಎ., ಅಪರಾಧ ಪತ್ತೆ ದಳದ ಸಿಬಂದಿ ರಾಜೇಶ್ ಕುಂಪಲ, ಗಿರೀಶ್ ಉಳಿಯ, ಪ್ರಶಾಂತ್, ರಾಮ, ಗೋಕುಲ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬಂದಿ ರವಿ, ಸುರೇಶ್, ರಾಮು, ಶಿವಾನಂದ ಮತ್ತು ಬೆರಳು ಮುದ್ರೆ ಘಟಕ ಹಾಗೂ ಸಿಡಿಆರ್ ಘಟಕದ ಅಧಿಕಾರಿ/ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು
PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ
Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ
ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′
Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು