ರಾ ರಾ ಗಿಣಿ


Team Udayavani, Dec 15, 2017, 1:59 PM IST

15-27.jpg

ಬಾಲಿವುಡ್‌ನ‌ಲ್ಲಿ ನಾಮದ ಬಲವೊಂದಿದ್ದರೆ ತಾರೆಯಾಗಬಹುದು ಎನ್ನುವುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಆದರೆ, ನಾಮದ ಬಲವಿದ್ದರೂ ಅದನ್ನು ಉಪಯೋಗಿಸದೆ ಅವಕಾಶಗಳಿಗಾಗಿ ಅಲೆದಾಡುತ್ತಿರುವ ನಟಿಯೊಬ್ಬಳಿದ್ದರೆ ಅವಳು ರಾಗಿಣಿ ಖನ್ನ. ರಾಗಿಣಿಯ ಬಾಲಿವುಡ್‌ ಕನೆಕ್ಷನ್‌ಗಳ ಕುರಿತು ಹೇಳಿದರೆ ದಂಗಾಗಬಹುದು. ಈಕೆ ಒಂದು ಕಾಲದ ಸೂಪರ್‌ಸ್ಟಾರ್‌ ಗೋವಿಂದನಿಗೆ ಸಂಬಂಧದಲ್ಲಿ ಸೊಸೆಯಾಗಬೇಕು. ನಟ ಹಾಗೂ ಸ್ಟಾಂಡ್‌ ಅಪ್‌ ಕಾಮಿಡಿಯನ್‌ ಕೃಷ್ಣ ಅಭಿಷೇಕ್‌ಗೆ ಸೋದರ ಸಂಬಂಧಿ. ಸ್ವಂತ ಅಣ್ಣನೂ ಕಿರುತೆರೆ ನಟ. ತಾಯಿ ಸಂಗೀತ ನಿರ್ದೇಶಕಿ, ಲೇಖಕಿ ಮತ್ತು ಗಾಯಕಿ. 

ಶಾಸ್ತ್ರೀಯ ಗಾಯಕಿ ನಿರ್ಮಲಾ ದೇವಿಯ ಮೊಮ್ಮಗಳು ಎನ್ನುವ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ. ಹೀಗೆ ಸಮೃದ್ಧ ಕಲಾ ಹಿನ್ನೆಲೆಯಿಂದ ಬಂದ ರಾಗಿಣಿ ಬಹುಮುಖ ಪ್ರತಿಭಾವಂತಳಾಗಿರುವುದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಇಷ್ಟೆಲ್ಲ ಬಾಲಿವುಡ್‌ ಹಿನ್ನೆಲೆಯಿದ್ದರೂ ರಾಗಿಣಿ ಮೊದಲು ಬಣ್ಣ ಹಚ್ಚಿದ್ದು ಕಿರುತೆರೆಯಲ್ಲಿ. ಒಂದು ಡಜನ್‌ಗೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ಒಂದೇ ರೀತಿಯ ಪಾತ್ರಗಳು ಬೋರಾಗತೊಡಗಿದಾಗ ರಿಯಾಲಿಟ್‌ ಶೋಗಳ ಆ್ಯಂಕರ್‌ ಆದಳು. ಅನಂತರ ವಿವಿಧ ಟಿವಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಳು. ರಾಗಿಣಿ ಹಿರಿತೆರೆಗೆ ಪದಾರ್ಪಣೆ ಮಾಡಿದ್ದು ಆರು ವರ್ಷಗಳ ಹಿಂದೆ ರಾಕೇಶ್‌ ಓಂಪ್ರಕಾಶ್‌ ನಿರ್ದೇಶಿಸಿದ ಕಾಮೆಡಿ ಚಿತ್ರ ತೀನ್‌ ಥೇ ಭಾಯಿ ಮೂಲಕ. ಅವಳ ದುರಾದೃಷ್ಟಕ್ಕೆ ಚಿತ್ರ ಸೋತು ಹೋಯಿತು. 

ಅನಂತರ ಭಜಿ ಇನ್‌ ಪ್ರಾಬ್ಲೆಮ್‌ ಎಂಬ ಪಂಜಾಬಿ ಚಿತ್ರದಲ್ಲಿ ಸಖತ್‌ ಆಗಿ ಮಿಂಚಿದ ರಾಗಿಣಿ ಈಗ ಬಾಲಿವುಡ್‌ನ‌ಲ್ಲಿ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಲು ತಯಾರಾಗಿದ್ದಾಳೆ. ಈ ವರ್ಷ ಅವಳು ನಟಿಸುತ್ತಿರುವ ಎರಡು ಚಿತ್ರಗಳು ಸೆಟ್ಟೇರಿವೆ. ಈ ಪೈಕಿ ಘೂಮಕೇತು ಚಿತ್ರದಲ್ಲಿ ಆಕೆ ನವಾಜುದ್ದೀನ್‌ ಸಿದ್ದಿಕಿ ಎದುರು ನಟಿಸುತ್ತಿದ್ದಾಳೆ. ಗುರ್ಗಾಂವ್‌ ಎಂಬ ಇನ್ನೊಂದು ಚಿತ್ರದ ಶೂಟಿಂಗ್‌ ಈಗಾಗಲೇ ಶುರುವಾಗಿದೆ. ಈ ಎರಡು ಚಿತ್ರಗಳಿಂದ ತನ್ನ ಅದೃಷ್ಟ ಬದಲಾಗುವ ನಿರೀಕ್ಷೆಯಲ್ಲಿದ್ದಾಳೆ ರಾಗಿಣಿ. ಅವಕಾಶ ಸಿಗದಿದ್ದರೂ ಪರವಾಗಿಲ್ಲ ಬಾಲಿವುಡ್‌ ಕನೆಕ್ಷನ್‌ ಉಪಯೋಗಿಸುವುದಿಲ್ಲ ಎನ್ನುವುದು ಅವಳ ಗಟ್ಟಿ ನಿರ್ಧಾರ. ನಾಮದ ಬಲ ಅಗತ್ಯವಿರುವುದು ಪ್ರತಿಭೆಯಿಲ್ಲದವರಿಗೆ. ಪ್ರತಿಭಾವಂತರಿಗೆ ಎಂದಾದರೂ ಒಂದು ದಿನ ಮಿಂಚಲು ಅವಕಾಶ ಸಿಕ್ಕಿಯೇ ಸಿಗುತ್ತದೆ ಎನ್ನುವುದು ಅವಳ ನಂಬಿಕೆ.  

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.