ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆ


Team Udayavani, Dec 21, 2017, 2:15 PM IST

21-Dec-11.jpg

ಸುಳ್ಯ : ಮುಂದಿನ ಸಾಲಿನ ಕ್ರಿಯಾಯೋಜನೆ ತಯಾರಿಸಿ ಅನುದಾನವನ್ನು ಸಮರ್ಪಕವಾಗಿ ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಭೆಗೆ ಮುಂಚಿತವಾಗಿ ಅಗತ್ಯ ಕಾಮಗಾರಿಗಳಿಗೆ ಸೂಕ್ತ ಬಜೆಟ್‌ ಮೀಸಲಿಡಲು ಸದಸ್ಯರನ್ನೊಳಗೊಂಡ ಪೂರ್ವಭಾವಿ ಸಭೆ ನಡೆಸುವಂತೆ ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆ ನಿರ್ಧರಿಸಿದೆ. ಎಪಿಎಂಸಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿದ ಮಾಸಿಕ ಸಭೆಯಲ್ಲಿ ಸದಸ್ಯರು ಈ ಒಮ್ಮತದ ತೀರ್ಮಾನ ಕೈಗೊಂಡರು.

ಮೊತ್ತ ನಿಗದಿಪಡಿಸಿ
ಕ್ರಿಯಾಯೋಜನೆ ಸಭೆಗೆ ಮುಂಚಿತಾಗಿ ಅಗತ್ಯ ಕಾಮಗಾರಿಗಳ ಬಗ್ಗೆ ಚರ್ಚಿಸಿ ಅದಕ್ಕೆ ಅರ್ಹವಾದ ಮೊತ್ತ ನಿಗದಿಪಡಿಸಬೇಕು. ಕಾಮಗಾರಿಗಳಿಗೆ ಅಗತ್ಯ ಅನುದಾನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅಭಿಯಂತರರನ್ನು ಸಭೆಗೆ ಕರೆಸಬೇಕು. ಎಲ್ಲ ಸದಸ್ಯರನ್ನೊಳಗೊಂಡ ಕ್ರಿಯಾಯೋಜನೆಯ ಪೂರ್ವಭಾವಿ ಸಭೆ ನಡೆಸಿ ಬಳಿಕ ಕ್ರಿಯಾಯೋಜನೆ ತಯಾರಿಸುವುದು ಸೂಕ್ತ ಎಂದು ಸದಸ್ಯ ಸಂತೋಷ್‌ ಜಾಕೆ ಪ್ರಸ್ತಾವಿಸಿದಾಗ ಸದಸ್ಯರೆಲ್ಲರೂ ಧ್ವನಿಗೂಡಿಸಿದರು.

ಒತ್ತುವರಿ- ಜಂಟಿ ಸರ್ವೆಗೆ ಸಲಹೆ
ಎಪಿಎಂಸಿ ಯಾರ್ಡ್‌ನ ಸರ್ವೆ ವೇಳೆ 5 ಸೆಂಟ್ಸ್‌ ಜಾಗ ಒತ್ತುವರಿಯಾಗಿರುವುದನ್ನು ಅಧ್ಯಕ್ಷರು ಸದಸ್ಯರ ಗಮನಕ್ಕೆ ತಂದರು. ಈ ಬಗ್ಗೆ ಸುದೀರ್ಘ‌ ಚರ್ಚಿಸಲಾಯಿತು. ಸದಸ್ಯ ವಿನಯ್‌ ಮುಳುಗಾಡು ಜಂಟಿ ಸರ್ವೆ ನಡೆಸಿ ಬಳಿಕ ಸಂಸ್ಥೆಯ ಆವರಣಕ್ಕೆ ಕಾಂಪೌಂಡ್‌ ಅಥವಾ ಬೇಲಿ ಅಳವಡಿಸುವಂತೆ ಸಲಹೆ ನೀಡಿದರು.

ಕಸವಿಲೇಗೆ ಅವಕಾಶವಿಲ್ಲ
ಯಾರ್ಡ್‌ನ ಆವರಣದ ಖಾಲಿ ಜಾಗದಲ್ಲಿ ನಗರದ ಕಸ ಮತ್ತು ಮಣ್ಣು ತಂದು ಸುರಿಯದಂತೆ ನಿರ್ಧರಿಸಲಾಯಿತು. ಯಾರ್ಡ್‌ನ ಒಂದು ಭಾಗದ ಆಳ ಜಾಗಕ್ಕೆ ಅಗತ್ಯ ಮಣ್ಣುತುಂಬಿ ಸಮತಟ್ಟು ಗೊಳಿಸಬೇಕಾದಲ್ಲಿ ನಗರ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಯ ಹೊಸ ಮಣ್ಣನ್ನು ಬಳಕೆ ಮಾಡುವಂತೆ ಸಭೆಯಲ್ಲಿ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡರು.

ಪ್ಲಾಸ್ಟಿಕ್‌ ನಿಷೇಧ
43 ಲಕ್ಷ ರೂ. ವೆಚ್ಚದ ಗೋಡೌನ್‌ ಮತ್ತು ಸಿಸಿ ರಸ್ತೆ ಕಾಮಗಾರಿಯ ಟೆಂಡರ್‌ ನಡೆದಿದ್ದರೂ ಕಾಮಗಾರಿಗೆ ಒಪ್ಪಿಗೆ ದೊರೆಯದೇ ಬಾಕಿ ಉಳಿದಿದೆ. ಶೀಘ್ರ ಚಾಲನೆಗೆ ಅಧಿಕಾರಿಗಳಗೆ ಒತ್ತಡ ಹಾಕಲು, ಪ್ಲಾಸ್ಟಿಕ್‌ ಬಳಕೆ ನಿಷೇಧ ಸಮರ್ಪಕವಾಗಿ ಜಾರಿತರಲು ನಿರ್ಧರಿಸಲಾಯಿತು.

ಕಳಪೆ ಕಾಮಗಾರಿ ಬಗ್ಗೆ ಮಾಹಿತಿ:
ಅತಿಥಿಗೃಹ ಕಾಮಗಾರಿ ಬಗ್ಗೆ ಸದಸ್ಯ ಬಾಲಕೃಷ್ಣ , ಸಂತೋಷ್‌ ಜಾಕೆ, ಅದಂ ಹಾಜಿ ಮಾಹಿತಿ ಬಯಸಿದಾಗ ಅಧಿಕಾರಿಗಳು
ಮಾಹಿತಿ ನೀಡಿದರು. ಕಳಪೆ ಕಾಮಗಾರಿ ಸಂಬಂಧಿಸಿದ ಚರ್ಚೆ ವೇಳೆ ಹೊಸ ಟೈಲ್ಸ್‌ ಖರೀದಿಗಾಗಿ ಗುತ್ತಿಗೆದಾರರು ಅಧ್ಯಕ್ಷರನ್ನು ಕರೆದುಕೊಂಡು ಹೋಗುವ ನಿರ್ಧಾರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದನ್ನು ಆಕ್ಷೇಪಿಸಿದ ದೀಪಕ್‌ ಕುತ್ತಮೊಟ್ಟೆ ಈ ನಿರ್ಧಾರ ಸರಿಯಲ್ಲ. ಇದು ಅಧ್ಯಕ್ಷರ ಬಗೆಗಿನ ಅವಗಣನೆಯಾಗುತ್ತದೆ ಎಂದರು.

ಎಪಿಎಂಸಿ ಅಧಿಕಾರಿಗಳು ಕಾರ್ಯ ನಿಮಿತ್ತ ಕ್ಷೇತ್ರಕ್ಕೆ ತೆರಳುವಾಗ ತನ್ನ ಗಮನಕ್ಕೆ ತರುವಂತೆ ಅಧ್ಯಕ್ಷರು ಸೂಚಿಸಿದರು. ಅತಿಥಿಗೃಹ ಶುಲ್ಕ ಏರಿಕೆ, ಆರ್‌ಟಿಒ ಚಾಲನಾ ತರಬೇತಿಗೆ ಶುಲ್ಕ ವಿಧಿಸುವ ಬಗ್ಗೆ , ಯಾರ್ಡ್ ಗೆ  ವಲುಗಾರನ ನೇಮಕ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷೆ ಸುಕನ್ಯಾ ಭಟ್‌, ಕಾರ್ಯದರ್ಶಿ ವಿಮಲಾ, ಸದಸ್ಯರು ಉಪಸ್ಥಿತರಿದ್ದರು.

ಮಾರುಕಟ್ಟೆ ಸಪ್ತಾಹ: ಅಸಮಾಧಾನ
ಆಚರಣೆಯ ಆಮಂತ್ರಣ ಸರಿಯಾಗಿ ತಲುಪಿಸಿಲ್ಲ. ರೈತರಿಗೂ ಮಾಹಿತಿಯಿಲ್ಲ. ಹಿಂದಿನ ದಿನವಷ್ಟೇ ನೀಡಲಾಗಿದೆ. ಕಾಟಾಚಾರಕ್ಕಷ್ಟೇ ಮಾಡುವುದಲ್ಲ. ಕನಿಷ್ಠ ಮಾಧ್ಯಮ ಪ್ರಕಟನೆ ನೀಡಬಹುದಿತ್ತು ಎಂದು ಗಣೇಶ್‌ ಭಟ್‌ ಇಡ್ಯಡ್ಕ, ವಿನಯ ಕುಮಾರ್‌ ಮುಳುಗಾಡು, ಅದಂ ಹಾಜಿ ಮತ್ತಿತರರು ಪ್ರಸ್ತಾಪಿಸಿದರು. ಸದಸ್ಯ ದೀಪಕ್‌ ಕುತ್ತಮೊಟ್ಟೆ ಕಾರ್ಯಕ್ರಮ ಮಾಹಿತಿ ರೈತರಿಗೆ ಪ್ರಾಮಾಣಿಕವಾಗಿ ತಲುಪುವಂತಾಗಬೇಕು ಎಂದರೆ, ದಿನದ ಹಿಂದಷ್ಟೇ ತಿಳಿಸಿ ತಲಾ 5 ಮಂದಿಯನ್ನು ಕರೆತರುವಂತೆ ಮಾಹಿತಿ ನೀಡಲಾಗಿದೆ. ಹೀಗಾದರೆ ರೈತರನ್ನಲ್ಲ ಮನೆ ಮಂದಿಯನ್ನಷ್ಟೇ ಕರೆತರಬೇಕು ಎಂದು ಸದಸ್ಯ ಬಾಲಕೃಷ್ಣ ಹೇಳಿದರು. ಸಪ್ತಾಹಕ್ಕೆ ರೈತರು ಆಗಮಿಸುವಂತೆ ಪೂರ್ವನಿಯೋಜಿತವಾಗಿ ಕರೆಯಬೇಕು ಎಂದು ಸದಸ್ಯ ಪುರುಷೋತ್ತಮ ನಂಗಾರು ಹೇಳಿದರು. ಕಾರ್ಯಕ್ರಮ ಮಾತ್ರವಲ್ಲ ಎಪಿಎಂಸಿ ಕಚೇರಿಯಿಂದ ಒಂದೇ ಒಂದು ಸುತ್ತೋಲೆಗಳು ಬರುತ್ತಿಲ್ಲ ಎಂದು ಸದಸ್ಯ ಮೋನಪ್ಪ ಪಂಜ ದೂರಿದರು.

ಟಾಪ್ ನ್ಯೂಸ್

16

Pakistani Actor: ಪಾಕಿಸ್ತಾನದ ದಿಗ್ಗಜ ನಟ ತಲತ್ ಹುಸೇನ್ ನಿಧನ

Modi 2

SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ

15

ಕಪಿಲ್‌ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ

Channagiri riot; 25 accused arrested in four cases

Channagiri riot; ನಾಲ್ಕು ಪ್ರಕರಣಗಳಲ್ಲಿ 25 ಮಂದಿ ಆರೋಪಿಗಳ ಬಂಧನ

14

ʼಮಾರ್ಟಿನ್‌ʼ ಬಳಿಕ ʼಕೆಡಿʼ ಬಗ್ಗೆ ಬಿಗ್‌ ನ್ಯೂಸ್‌ ಕೊಟ್ಟ ಧ್ರುವ: ಈ ವರ್ಷ ರಿಲೀಸ್‌ ಪಕ್ಕಾ

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

AAP;  ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-vitla

Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Uppinangady: ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ

Uppinangady: ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ

Belthangady: ಬಂಗೇರ ಕುಟುಂಬಸ್ಥರಿಂದ ಸಿಎಂ, ಡಿಸಿಎಂ ಭೇಟಿ – ಕೃತಜ್ಞತೆ ಸಲ್ಲಿಕೆ  

Belthangady: ಬಂಗೇರ ಕುಟುಂಬಸ್ಥರಿಂದ ಸಿಎಂ, ಡಿಸಿಎಂ ಭೇಟಿ – ಕೃತಜ್ಞತೆ ಸಲ್ಲಿಕೆ  

19

Sullia: ವಾಹನಗಳಿಗೆ ಕಾರು ಢಿಕ್ಕಿ; ಹಾನಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

16

Pakistani Actor: ಪಾಕಿಸ್ತಾನದ ದಿಗ್ಗಜ ನಟ ತಲತ್ ಹುಸೇನ್ ನಿಧನ

Modi 2

SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ

15

ಕಪಿಲ್‌ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ

Channagiri riot; 25 accused arrested in four cases

Channagiri riot; ನಾಲ್ಕು ಪ್ರಕರಣಗಳಲ್ಲಿ 25 ಮಂದಿ ಆರೋಪಿಗಳ ಬಂಧನ

14

ʼಮಾರ್ಟಿನ್‌ʼ ಬಳಿಕ ʼಕೆಡಿʼ ಬಗ್ಗೆ ಬಿಗ್‌ ನ್ಯೂಸ್‌ ಕೊಟ್ಟ ಧ್ರುವ: ಈ ವರ್ಷ ರಿಲೀಸ್‌ ಪಕ್ಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.