ವಾಣಿಜ್ಯ ಕಟ್ಟಡಗಳಿಗೂ ಬೇಕ, ವಾಸ್ತು ಶಿಸ್ತು…?


Team Udayavani, Jan 15, 2018, 3:03 PM IST

15-32.jpg

ಇಂದು ಇಡೀ ಜಗತ್ತು ಕಿರಿದಾಗಿ ಕುಗ್ಗಿದಂತೆ ಅನಿಸುತ್ತಿದೆ. ವಿಶ್ವದ ಯಾವ ಮೂಲೆಯೂ ದೂರವಾಗಿ ಉಳಿದಿಲ್ಲ. ಮನಸ್ಸೂ ಮುದುಡಿದೆ. ವಿಶ್ವಾಸ ಹಾಗೂ ಮೌಲ್ಯಗಳು ಕೂಡ ಕುಗ್ಗಿವೆ. ಜಗದ ಭಾಷೆಯಲ್ಲಿ ಓಡು, ಓಡು, ಓಡು ಎನ್ನುವ ಶಬ್ದಗಳು ಕೇಳಿಸುತ್ತಲೇ ಇರುತ್ತವೆ. ಜೊತೆಗೆ ಹಣದ ಕುರಿತು ಹಪಾಹಪಿ ಕೂಡ ತೀವ್ರವಾಗಿದೆ. ಹಿಂದೆಯೂ ದುಡ್ಡೇ ದೊಡ್ಡಪ್ಪ ಎಂಬ ಮಾತು ರೂಢಿಯಲ್ಲಿತ್ತು. ಇಂದು ದುಡ್ಡೇ ಎಲ್ಲವೂ, ಹೀಗಿರುವಾಗ ಜಾಗತೀಕರಣದ ಈ ಸಂದರ್ಭದಲ್ಲಿ ವಾಣಿಜ್ಯೀಕರಣವೇ ಪ್ರಧಾನವಾದುದು. ನೀವು ಯಾವುದನ್ನೇ ಪುಕ್ಕಟ್ಟೆಯಾಗಿ ಕೊಟ್ಟರೆ, ಕೊಟ್ಟಿದ್ದು ಎಷ್ಟೇ ಒಳ್ಳೆಯದಿದ್ದರೂ, ಪುಕ್ಕಟ್ಟೆಯಾಗಿ ಬಂದಿದ್ದನ್ನು ಅನುಮಾನಿಸುವವರೇ ಜಾಸ್ತಿ. ಬೆಲೆ ನಿಗದಿ ಪಡಿಸಿದಾಗ ” ನೋಡಿ ಎಂಥ ದುರಾಸೆ ಇವರಿಗೆ ಎಂಬು ತಾತ್ಸಾರದ ಮಾತು. ಇದು ಬದಲಾದ ಮನುಷ್ಯ ಅಸ್ಥಿರತೆಗೆ ಒಂದು ಉದಾಹರಣೆ. ಕಡಿತದ ಮಾರಾಟಕ್ಕೆ ಮುಗಿ ಬೀಳುತ್ತಾರೆ. 

 ಪ್ರತಿ ಮನುಷ್ಯನಿಗೂ ಕುಟುಂಬದ ಬಗೆಗೆ ಗಮನ ಕೊಡಲಾಗದ ಪರಿಸ್ಥಿತಿ. ಹೆಣ್ಣು ಮಕ್ಕಳೂ ದುಡಿಯಬೇಕಾಗಿದ್ದು ಅನಿವಾರ್ಯ. ಮಕ್ಕಳ ಬಗೆಗಿನ ಗಮನ ಹೇಗೆ ಸಾಧ್ಯ ಎಂಬುದಕ್ಕೆ ಉತ್ತರಗಳಿಲ್ಲ. ಇದೇನೇ ಇರಲಿ ಹೊರಗೆ ದುಡಿಯ ಬೇಕಾದ ವಾಣಿಜ್ಯ ಸಂಬಂಧೀ ಕಟ್ಟಗಳಿಗೂ ಸೂಕ್ತವಾದ ವಾಸ್ತು ಶಿಸ್ತು ಒಳಗೊಂಡರೇ ಹೆಚ್ಚಿನ ಯಶ್ಶಸ್ಸಿಗೆ ಅವಕಾಶ ಒದಗಿಬರುತ್ತದೆ. ಕೆಲಸದ ಸ್ಥಳದ ಶಕ್ತಿ ಮೂಲಗಳು ಒಂದು ಶಿಸ್ತಿನ ಆವರಣದಲ್ಲಿ ಅಚ್ಚುಕಟ್ಟಾಗಿ ಹೊಂದಿಕೊಂಡಿರಬೇಕು. ವಾಸ್ತು ಶಾಸ್ತ್ರದಲ್ಲಿನ ವಿವಿಧ ವ್ಯಾಖ್ಯೆಗಳು ಅಲೌಕಿಕವಾದ ಸಿದ್ಧಿಯೊಂದು ಕೈಗೂಡುವ ಹಾಗೆ ವಾಣಿಜ್ಯದ ಸಂಬಂಧವಾಗಿ ಅನೇಕ ಕೊಂಡಿಗಳನ್ನು ಯಜಮಾನ, ಗ್ರಾಹಕ ಹಾಗೂ ಕೆಲಸಗಾರರ ನಡುವೆ ಬೆಸೆದು ಕೊಡುತ್ತದೆ. ಮೊದಲನೆಯದಾಗಿ ಎಲ್ಲಿ ವಾಣಿಜ್ಯ ಕ್ರಿಯೆ ಅನುಷ್ಠಾನದಲ್ಲಿದೆಯೋ ಆ ಕಟ್ಟಡ, ಆ ಕಚೇರಿ ಮೂಲಭೂತವಾಗಿ ಕೆಲವು ವಾಸ್ತು ಶಿಸ್ತುಗಳನ್ನು ಅಳವಡಿಸಿಕೊಳ್ಳಲೇಬೇಕು. ಕಡ್ಡದ ಬಾಗಿಲುಗಳು, ದ್ವಾರ, ಶೌಚಗೃಹಗಳು, ಊಟದ, ತಿಂಡಿಯ ಬಗೆಗಿನ ತಂಗು ಸ್ಥಳ, ವಿಲೇವಾರಿಗಾಗಿನ ಮೂಲ ಘಟಕಗಳ ಸಂಗ್ರಹಣಾಸ್ಥಳ, ಆಖೈರಾದ ಪೂರ್ಣಮಟ್ಟದಲ್ಲಿ ತಯಾರಾದ ವಸ್ತುಗಳ ಮಾರಾಟ, ಹಂಚಿಕೆಗಳ ಕುರಿತು ಪೂರ್ವಭಾವಿಯಾದ ಮಾತುಕತೆಯ ಸ್ಥಳ, ವಹಿವಾಟುಗಳ ಲೆಕ್ಕ ಪತ್ರಗಳ ಸ್ಥಳ, ಕಚ್ಚಾ ಮಾಲಿನ ಗೋಡಾನ್‌, ಸಂಗ್ರಹ ಕೊಠಡಿ, ಸಂಕೀರ್ಣವಾದ ವಾಹನಗಳು, ವಿದ್ಯುತ್‌, ಉರುವಲ ಮುಂತಾದದ್ದು ಬಳಕೆಯಾಗುವ ಸ್ಥಳ, ತಯಾರಿಕಾ ಸ್ಥಳದ ಚೌಕಟ್ಟುಗಳು, ಧನ ವಿಲೇವಾರಿ, ಸಂಗ್ರಹ ಕೋಶಿಕೆ, ಭದ್ರತಾ ಕೊಠಡಿ, ಸಿಬ್ಬಂದಿಗಳ ತಂಗುದಾಣ, ಸೆಕ್ಯುರಿಟಿ ವ್ಯವಸ್ಥೆ ಇತ್ಯಾದಿ, ಇತ್ಯಾದಿಗಳೆಲ್ಲ ಒಂದು ಶಿಸ್ತಿನಲ್ಲಿ ಸ್ಥಿರಗೊಳ್ಳಬೇಕು.

ಪಿರಮಿಡ್‌ಗಳು ಆಧುನಿಕವಾದ ಕಲ್ಪನೆಯಾಗಿದೆ. ವಸತಿಯ ಮನೆಯನ್ನೂ ಹಿಡಿದು, ಆಫೀಸು, ವಾಣಿಜ್ಯ ಸಂಬಂಧೀ ಸಂಕೀರ್ಣಗಳು ಪಿರಮಿಡ್‌ನ‌  ಸಕಾರಾತ್ಮಕ ಉದ್ದಗಲಗಳಲ್ಲಿ ಬಲ ಪಡೆಯಬೇಕು. ಕನ್ನಡಿಗಳು, ಕರೆ ಗಂಟೆ, ಇತರ ಕರೆಗಾಗಿನ ಕಿರು ಉಪಕರಣಗಳು, ವಾಣಿಜ್ಯ ಸಂಕೀರ್ಣ ಹೊಂದಿರಲೇಬೇಕಾದ ನವಗ್ರಹ ಶಕ್ತಿಯ ಮೂಲ ಗಠಕಗಳು ನವರತ್ನಗಳ ರೂಪದಲ್ಲಿ ಅಥವಾ ಇತರ ಬೆಲೆ ಬಾಳುವ ರತ್ನದ ಕಲ್ಲುಗಳಲ್ಲಿ ಸಾರ್ಥಕತೆ ಪಡೆಯುವಂತಿರಬೇಕು. ಪೂರ್ಣ ಮಟ್ಟದ ಧಾತುಗಳು ಹೇಗೆ ವಿನಿಯೋಗಿಸಲ್ಪಟ್ಟಿವೆ, ಕಬ್ಬಿಣದಂಥ ಅರಿಷ್ಟಗಳನ್ನು ತಾಮ್ರ, ಹಿತ್ತಾಳೆ, ಕಂಚುಗಳು ಹೇಗೆ ನಿಷ್ಕ್ರಿಯ ಗೊಳಿಸಬಲ್ಲವು, ಸ್ಟೀಲ್‌, ಅಲ್ಯುಮಿನಿಯಂ, ಆಭ್ರಕ, ಪೋಲಿಫೈಬರ್‌ಗಳು ಹೇಗೆ ಮಿಶ್ರಗೊಂಡಿವೆ ಎಂಬಿತ್ಯಾದಿ ವಿಚಾರಗಳು ಒಂದು ಆರೋಗ್ಯಪೂರ್ಣ ಅನುಪಾತವನ್ನು ಹೊಂದಿರಬೇಕು. ಬಣ್ಣಗಳು, ಶ್ರೀ ಚಕ್ರ, ಸ್ವಸ್ತಿಕ್‌, ಗಣೇಶನ ಮಂಡಲ, ನಾಗ ಸ್ವರೂಪ ಅಂಕುಡೊಂಕಾದ ರೇಖೆಗಳು, ಹೂಗಳು, ಪರಿಮಳಗಳು, ಕೆಲವು ಶಾಂತಿ ಮಂತ್ರಗಳ ನಿಧಾನಗತಿಯ ಮಂದ್ರ ಸಂಗೀತದ ಅಲೆಗಳು ವಾಣಿಜ್ಯದ ಬಗೆಗೆ, ಕೆಲಸದ ಕಚೇರಿಯನ್ನು ಸಕಾರಾತ್ಮಕ ಹಿಡಿತಕ್ಕೆ ಒಗ್ಗಿಸಿಕೊಳ್ಳುವಂತಾಗಬೇಕು. 

 ಆಧುನಿಕ ಜಗತ್ತಿನಲ್ಲಿ ಎಲ್ಲವನ್ನೂ ಹೊಸದಾಗಿಸುವುದು ಸರಿ ಅಲ್ಲ. ಆದರೆ ಹಳೆ ಬೇರಿನ ದಾಢತೆಗೆ ಹೊಸ ಚಿಗುರು ನಳನಳಿಸಬೇಕು. ಇದಕ್ಕಾಗಿ ಗೂಢ, ನಿಗೂಢವಾದ ದೈವೀಕ ವಾಸ್ತು ಹೆಚ್ಚಿನ ರೀತಿಯಲ್ಲಿ ಪರಿಶೋಭಿಸಬೇಕು. 

ಅನಂತಶಾಸ್ತ್ರಿ

ಟಾಪ್ ನ್ಯೂಸ್

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.