ಹೆಣ್ಣು ಶಿಶು ಮಾರಾಟ: ಐವರ ಬಂಧನ


Team Udayavani, Feb 26, 2018, 10:38 AM IST

gul-5.jpg

ಚಿಂಚೋಳಿ: 15 ಸಾವಿರ ರೂ.ಗೆ ಮಾರಾಟವಾಗಿದ್ದ ಹೆಣ್ಣು ಶಿಶುವನ್ನು ಪೊಲೀಸರು ಮತ್ತು ಇತರ ಅಧಿಕಾರಿಗಳು ವಾಪಾಸ್‌ ಪಡೆದ ಘಟನೆ ನಡೆದಿದೆ. ಚಂದು ನಾಯಕ ತಾಂಡಾದಲ್ಲಿ ರಾಮಚಂದ್ರ ಸಕ್ರು ಅನಸೂಯಾ ದಂಪತಿ ಹೊಟ್ಟೆಪಾಡಿಗಾಗಿ ಒಂದು ತಿಂಗಳ ಹೆಣ್ಣು ಹಸುಗೂಸನ್ನು ಆಶಾ ಕಾರ್ಯಕರ್ತೆಯೊಬ್ಬರ ಮಧ್ಯಸ್ಥಿಕೆಯಲ್ಲಿ ಹೈದರಾಬಾದ ಮೂಲದ ದಂಪತಿಗೆ ಕಳೆದ ಗುರುವಾರ ಮಾರಾಟ ಮಾಡಿದ್ದರು.

ಕಲಬುರಗಿ ಮಕ್ಕಳ ಸಹಾಯವಾಣಿಗೆ ಫೆ.22ರಂದು ಅನಾಮಧೇಯ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್‌, ಜಿಲ್ಲಾಸಂಯೋಜಕ ಬಸವರಾಜ ತೆಂಗಳಿ, ಸುಂದರ, ಚಿಂಚೋಳಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರೋಜಾರೆಡ್ಡಿ ಚಿಮ್ಮನಚೋಡ, ಕುಂಚಾವರಂ ಪೊಲೀಸರು ಕಾರ್ಯ ಪ್ರವೃತ್ತರಾಗಿ ಶಿಶುವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದ್ದಾರೆ. 

ಘಟನೆ ವಿವರ: ಚಂದು ನಾಯಕ ತಾಂಡಾದ ರಾಮಚಂದ್ರ ಸಕ್ರು ಎಂಬಾತನಿಗೆ ಮೊದಲ ಪತ್ನಿಯಿಂದ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ಅವಳು ಮೃತಪಟ್ಟ ನಂತರ ಅನುಸೂಯಾ ಎಂಬಾಕೆ ಜತೆ ಎರಡನೇ ಮದುವೆಯಾಯಿತು.

ಸುಜಾತಾ(15), ರಹಿತಾ(10), ಸಂಧ್ಯಾ(9), ಶೋಭಾ(7) ಹಾಗೂ ಶ್ರೀಶಾಂತ(5) ಮಕ್ಕಳಿದ್ದಾರೆ. ಈ ನಡುವೆ ಅನುಸೂಯಾ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜ.9ರಂದು ಹೆಣ್ಣು ಶಿಶುವಿಗೆ ಜನ್ಮ ನೀಡಿದಳು. ಮತ್ತೆ ಹೆಣ್ಣು ಹುಟ್ಟಿದೆ ಎಂದು ಆಕೆ ಗಂಡ ರಾಮಚಂದ್ರ ಶಾದೀಪುರದ ಆಶಾ ಕಾರ್ಯಕರ್ತೆ ಸುವರ್ಣಾ ಎಂಬುವರ ಮಧ್ಯೆಸ್ಥಿತಿಕೆಯಿಂದ 15 ಸಾವಿರ ರೂ. ಗೆ ಹೈದ್ರಾಬಾದ ನಗರದ ಟಿ. ಪಾಲ್‌ ಮತ್ತು ಶಾರದಾ ಎಂಬ ದಂಪತಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದ.

ಕಲಬುರಗಿ ಮಕ್ಕಳ ಸಹಾಯವಾಣಿಗೆ ಬಂದ ದೂರು ಆಧರಿಸಿ ಅಧಿಕಾರಿಗಳು ಮೊದಲು ಶಾದೀಪುರ ಆಶಾ ಕಾರ್ಯಕರ್ತೆಯನ್ನು ತಮ್ಮ ವಶಕ್ಕೆ ಪಡೆದು ವಿಚಾರಿಸಿದರು. ನಂತರ ತಾಂಡೂರ, ವಿಕಾರಾಬಾದ, ಬಶಿರಾಬಾದಗೆ ಭೇಟಿ ನೀಡಿ ಪರಿಶೀಲಿಸಿದರು. ಖಚಿತ ಮಾಹಿತಿ ಮೇರೆಗೆ ಹೈದ್ರಾಬಾದಿನಲ್ಲಿರುವ ಟಿ.ಪಾಲ್‌, ಶಾರದ ದಂಪತಿ ಸಂಪರ್ಕಿಸಿದಾಗ ವಿಕಾರಾಬಾದ ಹತ್ತಿರ ಕೆರೋಳಿ ಕ್ರಾಸ್‌ ಪೊಲೀಸರು ಹೆಣ್ಣು ನವಜಾತ ಶಿಶುವನ್ನು ವಶಕ್ಕೆ ಪಡೆದುಕೊಂಡರು. 

ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಶಾ ಕಾರ್ಯಕರ್ತೆ ಸುವರ್ಣ, ರಾಮಚಂದ್ರ, ಅನುಸೂಯಾ ಮತ್ತು ಟಿ. ಪಾಲ್‌, ಶಾರದ ಎಂಬುವರನ್ನು ಶನಿವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಕುಂಚಾವರ ಠಾಣೆ ಎಎಸ್‌ಐ ಮೈನೋದ್ದಿನ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

13

Tragic: ಗುಜರಾತ್‌ ಗೇಮಿಂಗ್‌ ಜೋನ್‌ ನಲ್ಲಿ ಬೆಂಕಿ ಅವಘಡ: ಕನಿಷ್ಠ 20 ಮಂದಿ ಸಜೀವ ದಹನ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

11

ಎಸ್‌ಐಟಿ ಉಲ್ಲೇಖೀಸಿರುವ ಕಾನೂನುಬದ್ಧ ನಿಯಮಗಳು ಸಿಎಂ ಗಮನಕ್ಕೆ ಬಂದಿಲ್ಲವೇ?‌: ಎಚ್‌ಡಿಕೆ

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಚಿಲ್ಲರೆ ಮಾತನಾಡಿದ್ರೆ ಯಾರಿಗೂ ಗೌರವ ಬರಲ್ಲ: ಮಲ್ಲಿಕಾರ್ಜುನ ಖರ್ಗೆ

PM ಮೋದಿ ಚಿಲ್ಲರೆ ಮಾತನಾಡಿದ್ರೆ ಯಾರಿಗೂ ಗೌರವ ಬರಲ್ಲ: ಮಲ್ಲಿಕಾರ್ಜುನ ಖರ್ಗೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Kalaburagi; ಸಿಯುಕೆನಲ್ಲಿ ಕೋಲಾರದ ವಿದ್ಯಾರ್ಥಿ ಆನಂದ ಅನುಮಾನಾಸ್ಪದ ಸಾವು

Kalaburagi; ಸಿಯುಕೆನಲ್ಲಿ ಕೋಲಾರದ ವಿದ್ಯಾರ್ಥಿ ಆನಂದ ಅನುಮಾನಾಸ್ಪದ ಸಾವು

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

1-dddasd

Kalaburagi: ಬಿಜೆಪಿ ಕಾರ್ಯಕರ್ತನ ಮೇಲೆ ಮರಣಾಂತಿಕ ಹಲ್ಲೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Belthangady: ಬಂಗೇರ ಕುಟುಂಬಸ್ಥರಿಂದ ಸಿಎಂ, ಡಿಸಿಎಂ ಭೇಟಿ – ಕೃತಜ್ಞತೆ ಸಲ್ಲಿಕೆ  

Belthangady: ಬಂಗೇರ ಕುಟುಂಬಸ್ಥರಿಂದ ಸಿಎಂ, ಡಿಸಿಎಂ ಭೇಟಿ – ಕೃತಜ್ಞತೆ ಸಲ್ಲಿಕೆ  

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

19

Sullia: ವಾಹನಗಳಿಗೆ ಕಾರು ಢಿಕ್ಕಿ; ಹಾನಿ

17

Belthangady: ಅಪಘಾತದ ಗಾಯಾಳು ಯುವಕ ಸಾವು

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.