ಹೆಂಡ್ತೀನ ಹುಷಾರಾಗಿ ನೋಡ್ಕಳಿ… 


Team Udayavani, Mar 14, 2018, 7:43 PM IST

8.jpg

ಸ್ವಚ್ಛಂದ ಪಕ್ಷಿಯಂತೆ ಆಡಿಕೊಂಡಿದ್ದ ಹುಡುಗಿಯರಿಗೆ ಮದುವೆ ಒಂದು ಬಂಧನವಾಗುತ್ತದೆ. ಆಗೆಲ್ಲಾ ಮದುವೆಗಿಂತ ಮುಂಚೆಯೇ ಲೈಫ್ ಚೆನ್ನಾಗಿತ್ತು ಎಂದು ಪದೇಪದೆ ತಮ್ಮ ಹಳೆಯ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ಆಲೋಚನೆಗಳೇ ಬೆಳೆದು ದೊಡ್ಡದಾಗಿ, ದಾಂಪತ್ಯ ವಿರಸಕ್ಕೂ ಕಾರಣವಾಗುತ್ತದೆ. ಆ ವಿರಸವನ್ನು ತಡೆಯುವ ಎಲ್ಲ ಶಕ್ತಿಯೂ ಗಂಡನಿಗಿದೆ. ಹೇಗೆ ಗೊತ್ತಾ? 

ಚಿಕ್ಕ ಚಿಕ್ಕ ವಿಷಯಕ್ಕೆ ಮುನಿಸಿಕೊಳ್ಳುವ ಮುನ್ನ ಸಂಬಂಧದ ಮಹತ್ವ ತಿಳಿಯಬೇಕು. “ನಾನು’ ಎನ್ನುವ ಅಹಂಕಾರದ ಬದಲು, “ನಾವು’ ಎಂಬ ಪ್ರೀತಿಯ ಭಾವನೆ ಮೂಡಬೇಕು. 

ಪತ್ನಿಯ ಭಾವನೆಗಳಿಗೆ ಗಂಡಂದಿರು ಆದಷ್ಟು ಬೆಲೆ ಕೊಡಬೇಕು. ನೀವು ಕಿವಿಯಾದರಷ್ಟೇ, ಆಕೆಯ ಮನಸ್ಸು ಹಗುರವಾಗುವುದು.

ಮದುವೆಯ ನಂತರ ಹೆಣ್ಣು ಹೊಸದೊಂದು ಲೋಕವನ್ನು ಪ್ರವೇಶಿಸುತ್ತಾಳೆ. ಅಲ್ಲಿ ಆಕೆಗೆ ಎಲ್ಲವೂ ಹೊಸತು. ಅತ್ತೆ- ಮಾವ, ಗಂಡ ಎಲ್ಲರೂ ಒಂದರ್ಥದಲ್ಲಿ ಅಪರಿಚಿತರೇ.  ಅದುವರೆಗೂ ಓದು, ಕೆಲಸ, ಫ್ರೆಂಡ್ಸ್, ಸುತ್ತಾಟ ಎನ್ನುತ್ತಿದ್ದ, ಸ್ವತ್ಛಂದ ಪಕ್ಷಿಯಂತೆ ಆಡಿಕೊಂಡಿದ್ದ ಹುಡುಗಿಯರಿಗೆ ಮದುವೆ ಒಂದು ಬಂಧನವಾಗುತ್ತದೆ. ಆಗೆಲ್ಲಾ ಮದುವೆಗಿಂತ ಮುಂಚೆಯೇ ಲೈಫ್ ಚೆನ್ನಾಗಿತ್ತು ಎಂದು ಪದೇಪದೆ ತಮ್ಮ ಹಳೆಯ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ಆಲೋಚನೆಗಳೇ ಬೆಳೆದು ದೊಡ್ಡದಾಗಿ, ದಾಂಪತ್ಯ ವಿರಸಕ್ಕೆ, ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತವೆ.

ಇದಕ್ಕೆ ಕಾರಣವೂ ಉಂಟು. ಅಲ್ಲಿ ಪತಿ ಒಬ್ಬ ಒಳ್ಳೆಯ ಫ್ರೆಂಡ್‌ ಅಗಿರುವುದಿಲ್ಲ. ಹೆಣ್ಣು ತನ್ನ ಪತಿಯಲ್ಲಿ ಉತ್ತಮ ಸ್ನೇಹಿತನನ್ನು ಬಯಸುತ್ತಾಳೆ. ಆದರೆ, ಎಲ್ಲ ಗಂಡಂದಿರೂ ತಮ್ಮ ಪತ್ನಿಯರೊಡನೆ ಮುಕ್ತವಾಗಿ ಮಾತಾಡುವುದಿಲ್ಲ. ಇಂಥ ಸಂದರ್ಭಗಳಲ್ಲಿ ಹೆಂಡತಿಗೆ ಒಂಟಿತನ ಕಾಡುತ್ತದೆ. ತವರು ಮನೆಯ ಮುಕ್ತ ವಾತಾವರಣ, ಸ್ನೇಹಿತರ ಸಾಂಗತ್ಯ ಬೇಕೆನಿಸುತ್ತದೆ. ಹೆಂಡತಿ ಮೇಲಿಂದ ಮೇಲೆ ತವರಿನ ಜಪ ಮಾಡುವುದು ಪತಿಗೆ ಕಿರಿಕಿರಿ ತರಿಸುತ್ತದೆ. ಮುಂದೆ ಈ ಕಿರಿಕಿರಿಗಳಿಂದಲೇ ಜಗಳ ಆರಂಭವಾಗಿ ವಿಚ್ಛೇದನದಲ್ಲಿ ಅಂತ್ಯ ಕಾಣುತ್ತದೆ. ಮದುವೆ ಹೀಗೆ ಅಂತ್ಯ ಕಾಣಬಾರದೆಂದರೆ ಪತಿಯಾದವನು ಏನು ಮಾಡಬೇಕು ಗೊತ್ತೇ?

ಪತಿಯಲ್ಲೊಬ್ಬ ಗೆಳೆಯನಿದ್ದರೆ…
ಒಬ್ಬ ಉತ್ತಮ ಪತಿಯಾಗುವ ಮುನ್ನ ನೀವು ಆಕೆಗೆ ಒಳ್ಳೆಯ ಫ್ರೆಂಡ್‌ ಆಗಿ. ತವರಿನಿಂದ ಬಂದ ಆಕೆಗೆ ನಿಮ್ಮ ಮನೆಯಲ್ಲಿ ಮುಕ್ತ ವಾತಾವರಣ ನಿರ್ಮಿಸಿ. ನಿಮ್ಮ ತಾಯಿ- ತಂದೆಯೊಂದಿಗೆ ಆಕೆ ಹೊಂದಿಕೊಳ್ಳುವವರೆಗೆ ಅವಳ ಬೆನ್ನೆಲುಬಾಗಿ ನಿಲ್ಲಿ. ಒಬ್ಬ ಫ್ರೆಂಡ್‌ನ‌ಂತೆ ಆಕೆಯ ಇಷ್ಟ- ಕಷ್ಟಗಳನ್ನು ಕೇಳಿ ತಿಳಿಯಿರಿ. ಕೆಲಸದ ಒತ್ತಡ ಎಷ್ಟಿದ್ದರೂ ಪತ್ನಿಗಾಗಿ ಒಂದು ಗಂಟೆಯನ್ನಾದರೂ ಮೀಸಲಿಡಿ.

ಕಿರು ಪ್ರವಾಸ ಕೈಗೊಳ್ಳಿ
ನಿಮ್ಮ ಮನೆ- ಮನಕ್ಕೆ ಹೊಸ ಅತಿಥಿಯಾಗಿ ಬಂದ ನಿಮ್ಮ ಮಡದಿಗಾಗಿ ಆಗಾಗ ಕಿರು ಪ್ರವಾಸ ಕೈಗೊಳ್ಳಿ. ಇದರಿಂದಾಗಿ ಸ್ಥಳದ ಬದಲಾವಣೆಯ ಜೊತೆಗೆ ನಿಮಗೂ ಏಕಾಂತದ ವಾತಾವರಣ ಸಿಗುತ್ತದೆ. ಆಕೆಯ ಅಭಿಪ್ರಾಯಗಳಿಗೂ ಮನ್ನಣೆ ಕೊಡಿ. ಪತ್ನಿಯ ಭಾವನೆಗಳಿಗೆ ಗಂಡಂದಿರು ಆದಷ್ಟು ಬೆಲೆ ಕೊಡಬೇಕು. ನೀವು ಕಿವಿಯಾದರಷ್ಟೇ, ಆಕೆಯ ಮನಸ್ಸು ಹಗುರವಾಗುವುದು.

ಪತಿ- ಪತ್ನಿ ಎಂಬ ಸುಂದರ ಸಂಬಂಧ ಬಹಳ ಅಮೂಲ್ಯವಾದದ್ದು. ಇಲ್ಲಿ ಸ್ನೇಹದ ಸೆಳೆತದ ಜೊತೆಗೆ ಪ್ರೀತಿಯ ಮಿಡಿತವೂ ಇರಬೇಕು. ಚಿಕ್ಕ ಚಿಕ್ಕ ವಿಷಯಕ್ಕೆ ಮುನಿಸಿಕೊಳ್ಳುವ ಮುನ್ನ ಸಂಬಂಧದ ಮಹತ್ವ ತಿಳಿಯಬೇಕು. “ನಾನು’ ಎನ್ನುವ ಅಹಂಕಾರದ ಬದಲು, “ನಾವು’ ಎಂಬ  ಪ್ರೀತಿಯ ಭಾವನೆ ಮೂಡಬೇಕು. ಆಗ ಖಂಡಿತವಾಗಿಯೂ ಬದುಕು ಸುಂದರವಾಗುತ್ತದೆ. 

ಕಾವ್ಯ ಎಚ್‌.ಎನ್‌., ದಾವಣಗೆರೆ

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.