ಉತ್ರಂಬೆ: ಬಾಗಿ ನಿಂತ ಮರ, ಅಪಾಯಕ್ಕೆ ಆಹ್ವಾನ
Team Udayavani, Apr 29, 2018, 11:42 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ -ಜಾಲ್ಸೂರು ಸಂಪರ್ಕ ಮಾರ್ಗದ ನಡುಗಲ್ಲು ಪೇಟೆಯಿಂದ ಸ್ವಲ್ಪ ಮುಂದಕ್ಕೆ ಉತ್ರಂಬೆ ಬಳಿ ಮುಖ್ಯ ರಸ್ತೆ ಬದಿಯಲ್ಲಿರುವ ಮರವೊಂದು ವಾಲಿ ನಿಂತು ಅಪಾಯದ ಸ್ಥಿತಿಯಲ್ಲಿದೆ.
ತೀರಾ ತಿರುವಿನಲ್ಲಿ ಮರ ಬಾಗಿ ನಿಂತಿದ್ದು, ಬಸ್, ಲಾರಿ ಸಹಿತ ಘನ ವಾಹನಗಳು ಸಂಚರಿಸುವಾಗ ತಡೆಯುತ್ತಿದೆ. ಏಕಕಾಲದಲ್ಲಿ ರಸ್ತೆಯ ಎರಡೂ ಬದಿಗಳಿಂದ ವಾಹನಗಳು ಚಲಿಸಿದಲ್ಲಿ ಅಪಘಾತ ಆಗುವ ಸಂಭವವಿದೆ. ಮರ ತುಂಬಾ ಬಾಗಿದ್ದು, ತೀರಾ ಕೆಳಗಿನ ಆಂತರದಲ್ಲಿದೆ. ಯಾವುದೇ ಹಂತದಲ್ಲಿ ಇದು ರಸ್ತೆ ಮೇಲೆ ಉರುಳಿ ಬೀಳುಬಹುದು. ಅದು ಚಲಿಸುತ್ತಿರುವ ವಾಹನಗಳ ಮೇಲೆ ಬಿದ್ದು ಜೀವ ಹಾನಿ ಸಾಧ್ಯತೆಯೂ ಇದೆ. ಈ ಮಾರ್ಗವಾಗಿ ಸಾವಿರಾರು ವಾಹನಗಳ ನಿತ್ಯ ಸಂಚರಿಸುತ್ತಿದ್ದು, ಬಾಗಿದ ಮರವನ್ನು ತತ್ಕ್ಷಣ ತೆರವುಗೊಳಿಸದಿದಲ್ಲಿ ಅಪಾಯ ಸಾಧ್ಯತೆ ಹೆಚ್ಚು. ಸಂಬಂದಿಸಿದ ಇಲಾಖೆಯವರು ಈ ಕುರಿತು ಗಮನಹರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು
D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ
Jio fiber,ಏರ್ ಫೈಬರ್ ಗ್ರಾಹಕರಿಗೆ 15 ಒಟಿಟಿ ಅಪ್ಲಿಕೇಷನ್
Chincholi: ಸಿಡಿಲು ಬಡಿದು ಕೂಲಿ ಕಾರ್ಮಿಕ ಮಹಿಳೆ ಮೃತ್ಯು,ಪುತ್ರನಿಗೆ ಗಂಭೀರ ಗಾಯ
Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ