ಫೋನ್‌ ನಂಬರ್‌ ಕೇಳಿದವಳು ಹೃದಯ ಕದ್ದು ಮಾಯ!


Team Udayavani, May 1, 2018, 7:38 PM IST

n.jpg

ಆ ರಾತ್ರಿಯೆಲ್ಲ ಒಬ್ಬರನ್ನೊಬ್ಬರು ನೋಡ್ತಾ ಕಳೆದು ಬಿಟ್ಟೆವು. ಬೇಡ ಬೇಡ ಅಂದರೂ ಅವಳು ತಂದಿದ್ದ ಚಿಪ್ಸ್, ಕೂಲ್‌ಡ್ರಿಂಕ್ಸ್ ಕೊಡ್ತಾನೇ ಇದ್ಳು ರಾತ್ರಿ ಮೂರಕ್ಕೆ ತುಮಕೂರಿನಲ್ಲಿ ಟೀ ಕುಡಿಸಿದಳು.  ಬೆಳಗಿನ ಜಾವ 4ಕ್ಕೆಲ್ಲ ನಾನಿಳಿಯಬೇಕಾದ ಜಾಗ ಬಂದೇ ಬಿಡ್ತು.

ಅವತ್ತು ನನ್ನ ಸೀನಿಯರ್‌ ಮದುವೆಗೆ ಅಂತ ಮೂಡಬಿದಿರೆಗೆ ಹೋಗಿದ್ದೆ. ಮದುವೆ ಮುಗಿಸಿಕೊಂಡು, ತುರ್ತು ಕೆಲಸದ ನಿಮಿತ್ತ ನಾನು ಅದೇ ದಿನ ಬೆಂಗಳೂರಿಗೆ ಬರಲೇಬೇಕಿತ್ತು. ಹೀಗಾಗಿ ಬೆಂಗಳೂರಿನ ಬಸ್‌ ಹತ್ತಿದ್ದೆ. ಇಯರ್‌ಫೋನ್‌ ಹಾಕಿಕೊಂಡು ಸಾಂಗ್‌ ಕೇಳ್ತಾ ಇದ್ದೆ. ಆಗ್ಲೆ ನನ್ನ ಸೀಟಿನ ಪಕ್ಕದಲ್ಲಿ ಕುಂತಿದ್ದ ಆ ಹುಡುಗಿಯತ್ತ ಕಣ್ಣುಗಳು ತಿರುಗಿದ್ದು. ಅವಳು ಕೂಡ ಎರಡು ಮೂರು ಬಾರಿ ನನ್ನತ್ತ ನೋಡಿದಳು. ರಾತ್ರಿ 12 ಗಂಟೆಗೆ ಹಾಸನದ ರೆಸ್ಟೋರೆಂಟ್‌ ಒಂದರಲ್ಲಿ ಊಟಕ್ಕೆ ಅಂತ ಬಸ್‌ ನಿಲ್ಲಿಸಿದ್ರು. ಅವಳು ಕೂಡ ನನ್ನ ಪಕ್ಕದಲ್ಲೇ ಊಟಕ್ಕೆ ಕುಳಿತಳು. ನಂತರ, ಎಲ್ಲಿಗೆ ಹೋಗ್ತಾ ಇದ್ದೀರಾ, ಏನು ಮಾಡ್ಕೊಂಡಿದ್ದೀರಾ ಅಂತೆಲ್ಲ ವಿಚಾರಿಸಿದಳು. ನಾನಂತೂ ಪೂರ್ತಿ ಬಯೊಡೆಟಾವನ್ನೇ ಹೇಳಿಬಿಟ್ಟೆ. ಅವಳು ಮೂಡಬಿದಿರೆಯ ಕಾಲೇಜಿನಲ್ಲಿ ಓದ್ತಾ ಇದ್ದಾಳೆ ಅಂತ ಗೊತ್ತಾಯ್ತು. ಅವಳ ಕಣ್ಣೋಟ, ಕೆಂಪು ಕೆಂಪಾದ ಮುದ್ದು ಮುಖ, ಜೇನದನಿ, ವಿಪರೀತ ಅನ್ನುವಂಥ ಬೋಲ್ಡ್‌ನೆಸ್‌, ಎರಡು ನಿಮಿಷಕ್ಕೊಮ್ಮೆ ತಲೆ ಕೊಡವುತ್ತಿದ್ದ ಸ್ಟೈಲ್‌… ವಾಹ್‌, ಎಷ್ಟು ವರ್ಣಿಸಿದರೂ ಕಡಿಮೆಯೇ ಅವಳನ್ನು.. 

ಆ ರಾತ್ರಿಯೆಲ್ಲ ಒಬ್ಬರನ್ನೊಬ್ಬರು  ನೋಡ್ತಾ ಕಳೆದು ಬಿಟ್ಟೆವು. ಬೇಡ ಬೇಡ ಅಂದರೂ ಅವಳು ತಂದಿದ್ದ ಚಿಪ್ಸ್, ಕೂಲ್‌ಡ್ರಿಂಕ್ಸ್ ಕೊಡ್ತಾನೇ ಇದ್ಳು ರಾತ್ರಿ ಮೂರಕ್ಕೆ ತುಮಕೂರಿನಲ್ಲಿ ಟೀ ಕುಡಿಸಿದಳು.  ಬೆಳಗಿನ ಜಾವ 4ಕ್ಕೆಲ್ಲ ನಾನಿಳಿಯಬೇಕಾದ ಜಾಗ ಬಂದೇ ಬಿಡು¤. “ಬಾಯ್‌’ ಅಂತ ಅವಳತ್ತ ಮತ್ತೂಂದು ಸ್ಮೈಲ್ ಎಸೆದು ಬಸ್‌ ಇಳಿದೆ. ಬಸ್‌ ಮುಂದೆ ಸಾಗ್ತಾ ಇದ್ರೂ ಅವಳು ಕಿಟಕಿಯಿಂದ ಇಣುಕಿ ಬಾಯ್‌ ಮಾಡುತ್ತಲಿದ್ದಳು. 

ಅವಳಾಗೇ ಫೋನ್‌ ನಂಬರ್‌ ಕೇಳಿದ್ದರಿಂದ ಸಂಭ್ರಮದಿಂದಲೇ ನಂಬರ್‌ ಕೊಟ್ಟು ಬಂದಿದ್ದೆ. ಇಡೀ ರಾತ್ರಿ ಮನಸ್ಸು ಬಿಚ್ಚಿ (?!) ಮಾತಾಡಿದವಳು ಫೋನ್‌ ಮಾಡುತ್ತಾಳೆಂಬ ನಿರೀಕ್ಷೆ ಇತ್ತು. ಒಂದು ವಾರವಾದ್ರೂ ಫೋನ್‌ ಬರಲಿಲ್ಲ. ಅವಳೆಲ್ಲಿ ಮಾಯವಾದಳ್ಳೋ ನಾನರಿಯೆ. ಆ ಚೆಂದುಳ್ಳಿ ಚೆಲುವೆಗಾಗಿ ಹೃದಯ ಈಗಲೂ ಕನವರಿಸುತ್ತಿದೆ. ಈ ಹುಚ್ಚು ಹೃದಯ ನಿನ್ನನ್ನು ನೋಡಬೇಕೆಂಬ ಒಂದೇ ಕಾರಣದಿಂದ ಮತ್ತೆ ಮೂಡಬಿದಿರೆಗೆ ಬರುತ್ತಿದೆ ಕಣೇ. ಆಗಲಾದರೂ ಸಿಗುವೆಯಾ ಎಂದು ಯಾಚನೆಯ ದನಿಯಲ್ಲಿ ಕೇಳುತ್ತಿದೆ. ಒಂದೇ ರಾತ್ರಿಯಲ್ಲಿ ನನ್ನ ಮನಸ್ಸು, ಹೃದಯ ಎರಡನ್ನೂ ಕದ್ದುಕೊಂಡು ಹೋಗಿರುವ ಆ ಹೃದಯಚೋರಿಗೆ ಈ ನನ್ನ ಪ್ರೇಮ ಪತ್ರ. ನನ್ನ ಮೋಹದ ಮಾತು ಈಗಲೇ ತಲುಪಲಿ. ಅವಳು ಅಯ್ಯೋ ಪಾಪ ಅಂದುಕೊಂಡು-ಪ್ರೀತಿಯಿಂದ ಅಲ್ಲದಿದ್ರೆ ಪರವಾಗಿಲ್ಲ; ಕನಿಕರದಿಂದಾದ್ರೂ ಒಮ್ಮೆ ಫೋನ್‌ ಮಾಡಲಿ…
ಅಂಥದೊಂದು ನಿರೀಕ್ಷೆಯೊಂದಿಗೇ ಕಾದು ಕುಳಿತಿರುವ- 

ಪ್ರಕಾಶ್‌ ಡಿ. ರಾಂಪೂರ್‌ (ರಾಯಚೂರು)

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.